Asianet Suvarna News Asianet Suvarna News

ಡಿಕೆಶಿ ಪರಮಾಪ್ತ ಸೇರಿ ಹಲವರು ಪಕ್ಷಾಂತರ

ಶೀಘ್ರದಲ್ಲೇ ಹಲವು ಮುಖಂಡರು ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ. ವಲಸೆ ಹಕ್ಕಿಗಳೆಂದೇ ಕರೆಸಿಕೊಳ್ಳುವ ಅನೇಕರು ಇದೀಗ ಮತ್ತೊಂದು ಪಕ್ಷದತ್ತ ಮುಖ ಮಾಡಲು ತುದಿ ಗಾಲಲ್ಲಿ ನಿಂತಿದ್ದಾರೆ. 

Soon Many JDS Congress Leaders Will Join BJP in Ramanagara snr
Author
Bengaluru, First Published Feb 12, 2021, 4:14 PM IST

ವರದಿ :  ಎಂ.ಅ​ಫ್ರೋಜ್ ಖಾನ್‌

 ರಾಮ​ನ​ಗರ (ಫೆ.12):  ಜಿಲ್ಲೆಯಲ್ಲಿ ಪಕ್ಷಾಂತರಿಗಳು ಹಾಗೂ ವಲಸಿಗರು ಆಡ​ಳಿತರೂಢ ಬಿಜೆಪಿ ಪಕ್ಷ​ದತ್ತ ಹಾರಲು ಮತ್ತೊಮ್ಮೆ ಸಜ್ಜಾ​ಗು​ತ್ತಿ​ದ್ದಾರೆ.

ಈ ಮೊದಲು ಬಿಜೆಪಿ ನಾಯ​ಕರು ಪಕ್ಷ ಸಂಘ​ಟ​ನೆ ಉದ್ದೇ​ಶ​ದಿಂದ ಆಪ​ರೇ​ಷನ್‌ ಕಮ​ಲ ನಡೆ​ಸು​ತ್ತಿ​ದ್ದರು. ಆದ​ರೀಗ ಜೆಡಿ​ಎಸ್‌ ಹಾಗೂ ಕಾಂಗ್ರೆಸ್‌ ಪಕ್ಷ​ದ​ಲ್ಲಿರುವ ಪಕ್ಷಾಂತ​ರಿ​ಗಳು ಮತ್ತು ವಲ​ಸಿ​ಗರು ಖುದ್ಧಾಗಿ ಕಮಲ ಪಾಳ​ಯಕ್ಕೆ ಜಿಗಿ​ಯಲು ಸಿದ್ಧ​ರಾ​ಗಿ​ದ್ದಾರೆ.

ಈಗಾ​ಗಲೇ ಮಾಗಡಿಯಲ್ಲಿ ಎಚ್‌.ಎಂ.ಕೃ​ಷ್ಣ​ಮೂರ್ತಿ ಜೆಡಿ​ಎಸ್‌ ತೊರೆದು ಬಿಜೆಪಿ ಸೇರ್ಪ​ಡೆ​ಯಾ​ಗಿ​ದ್ದಾರೆ. ಕನ​ಕ​ಪು​ರ​ದಲ್ಲಿ ಕೆಪಿ​ಸಿಸಿ ಅಧ್ಯ​ಕ್ಷ​ ಡಿ.ಕೆ.​ಶಿ​ವ​ಕು​ಮಾರ್‌ ಆಪ್ತ​ರಾದ ಕಾಂಗ್ರೆಸ್‌ ಮುಖಂಡ ಶ್ರೀಕಂಠು ಅವ​ರಿಗೆ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ಖುದ್ದಾಗಿ ಭೇಟಿ ಮಾಡಿ ಗಾಳ ಹಾಕಿ ಬಂದಿ​ದ್ದಾರೆ.

ಮಂತ್ರಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದ ಹಳ್ಳಿಹಕ್ಕಿ; ಹೊಸ ಅಸ್ತ್ರಕ್ಕೆ ಸಿಎಂ ದಂಗು

ಇನ್ನು ರಾಮ​ಗ​ರ​ದಲ್ಲಿ ಆಡ​ಳಿತರೂಢ ಪಕ್ಷದತ್ತ ಹಾರು​ವು​ದನ್ನೇ ರೂಢಿ ಮಾಡಿ​ಕೊಂಡಿ​ರುವ ಕೆಎಂಎಫ್‌ ಮಾಜಿ ಅಧ್ಯಕ್ಷ ಪಿ.ನಾ​ಗ​ರಾಜು ಬಿಜೆಪಿ ಸೇರ​ಲು ತುದಿ​ಗಾ​ಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್‌ನಲ್ಲಿ​ರುವ ಹಿಂದು​ಳಿದ ವರ್ಗ​ಗಳ ಪ್ರಭಾವಿ ನಾಯಕ​ರೊ​ಬ್ಬ​ರು ​ಸಹ ಕಮಲ ಪಾಳ​ಯ​ದತ್ತ ಒಲವು ತೋರಿದ್ದಾ​ರೆ ಎನ್ನ​ಲಾ​ಗಿ​ದೆ.

ಕಮ​ಲ​ದಲ್ಲಿ ತೀವ್ರ ವಿರೋ​ಧ:

ರಾಜ್ಯ​ದಲ್ಲಿ ಅಧಿ​ಕಾ​ರಕ್ಕೆ ಬಂದಾ​ಗ​ಲೆಲ್ಲ ಪಕ್ಷಾಂತ​ರಿ​ಗಳು ಹಾಗೂ ವಲ​ಸಿ​ಗ​ರಿಗೆ ಬಿಜೆಪಿ ಹಕ್ಕಿ ಗೂಡಿ​ನಂತಾ​ಗಿ​ರು​ತ್ತ​ದೆ. ಅಧಿ​ಕಾರದಿಂದ ಪಕ್ಷ ಕೆಳ​ಗಿ​ಳಿ​ಯು​ತ್ತಿ​ದ್ದಂತೆ ಪಕ್ಷಾಂತ​ರಿ​ಗಳು - ವಲ​ಸಿಗರು ಮತ್ತೆ ಅನ್ಯ​ಪ​ಕ್ಷ​ಗ​ಳತ್ತ ಮುಖ ಮಾಡು​ತ್ತಾರೆ. ಅನ್ಯ ಪಕ್ಷ​ಗ​ಳಿಂದ ಬಿಜೆಪಿಗೆ ಬಂದ​ವರಲ್ಲಿ ಹೆಚ್ಚಿನವರು ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಅಧಿಕಾರ ಅನುಭವಿಸಲಷ್ಟೇ ಸೀಮಿತವಾಗಿದ್ದಾರೆ. 10-12 ವರ್ಷಗಳಲ್ಲಿ ನಡೆದಿರುವ ಲೋಕಸಭಾ, ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿದ್ಯಾಮಾನಗಳನ್ನು ಅವಲೋಕಿಸಿದರೆ ಇದು ಸತ್ಯವೂ ಹೌದು ಎಂಬುದು ತಿಳಿಯುತ್ತದೆ.

ಆಗ ಏನೆಲ್ಲ ಆಯ್ತು ಎಂದು ಹೇಳಲೇ: ಡಿಕೆಶಿ, ಸಿದ್ದುಗೆ ಎಚ್ಚರಿಕೆ ಕೊಟ್ಟ ಮಾಜಿ ಕಾಂಗ್ರೆಸ್ ಲೀಡರ್‌ .

ಜಿಲ್ಲೆಯಲ್ಲಿ ಬಿಜೆಪಿ ಅನ್ಯ ಪಕ್ಷಗಳ ಅತೃಪ್ತರಿಗೆ ಅಧಿಕಾರ ಸವಿಯುಣಿಸಿತೇ ಹೊರತು ಅವರಿಂದ ಪಕ್ಷ ಸಂಘಟನೆಯಾಗಲಿಲ್ಲ. ಚುನಾವಣೆಗೆ ಸ್ಪರ್ಧಿಸಲು ಪುಕ್ಕಟ್ಟೆಯಾಗಿ ‘ಬಿ‘ ಫಾರಂ ಸಿಗುತ್ತದೆ ಎಂದು ಬಿಜೆಪಿಗೆ ಬೇರೆ ಪಕ್ಷಗಳಿಂದ ನಾ ಮುಂದು, ತಾ ಮುಂದು ಎಂದು ಬರುತ್ತಾರೆಯೇ ಹೊರತು ಅವರಿಂದ ಸಂಘಟನೆಗೆ ಕಿಂಚಿತ್ತೂ ಉಪಯೋಗವಿಲ್ಲ.

ಇಂತಹ ಪಕ್ಷಾಂತರಿಗಳಿಂದಲೇ ಬಿಜೆಪಿ ಜಿಲ್ಲೆಯಲ್ಲಿ ಹಿಂದುಳಿದಿದೆ. ಪಕ್ಷ​ ಸಂಘ​ಟ​ನೆ​ಗಾಗಿ ​ದು​ಡಿ​ಯು​ತ್ತಿ​ರುವ ನಿಷ್ಠಾ​ವಂತ ಕಾರ್ಯ​ಕ​ರ್ತರು ಅಧಿ​ಕಾರ ಸಿಗ​ದಿ​ದ್ದರೂ ದುಡಿ​ಯು​ತ್ತಲೇ ಇದ್ದಾ​ರೆ. ಅವರೆಲ್ಲರ ಪರಿ​ಶ್ರ​ಮ​ದಿಂದಾ​ಗಿಯೇ ಜೆಡಿ​ಎಸ್‌-ಕಾಂಗ್ರೆಸ್‌ನ ಭದ್ರ​ಕೋ​ಟೆ​ಯಲ್ಲಿ ಕಮಲ ನಿಧಾ​ನ​ವಾಗಿ ಅರ​ಳಲು ಸಾಧ್ಯ​ವಾ​ಗು​ತ್ತಿದೆ ಎಂಬುದು ಬಹುತೇಕ ಮೂಲ ಬಿಜೆಪಿಗರ ಅಭಿಪ್ರಾಯವಾಗಿದೆ.

ಈ ಕಾರ​ಣ​ಕ್ಕಾಗಿಯೇ ಬಿಜೆಪಿಯೊ​ಳ​ಗೆಯೇ ಪಕ್ಷಾಂತ​ರಿ​ಗಳು ಹಾಗೂ ವಲ​ಸಿ​ಗರ ಸೇರ್ಪ​ಡೆಗೆ ತೀವ್ರ ವಿರೋ​ಧವೂ ವ್ಯಕ್ತ​ವಾ​ಗು​ತ್ತಿದೆ. ಆದರೂ ಜಿಲ್ಲೆ​ಯಲ್ಲಿ ಪಕ್ಷ ಸಂಘ​ಟ​ನೆ ಉದ್ದೇ​ಶ​ದಿಂದ ಪ್ರವಾ​ಸೋ​ದ್ಯಮ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ಪಕ್ಷ​ದ​ಲ್ಲಿನ ಪ್ರಭಾವಿ ಮುಖಂಡ​ರನ್ನು ಬಿಜೆ​ಪಿಗೆ ಕರೆ​ತ​ರಲು ನಿರಂತ​ರ​ವಾಗಿ ಸಂಪ​ರ್ಕ​ದ​ಲ್ಲಿ​ರು​ವುದು ಗುಟ್ಟಾಗಿ ಉಳಿ​ದಿ​ಲ್ಲ.

ಮತ್ತೆ ವಲಸೆ ಹಕ್ಕಿ ನಾಗರಾಜು ಬಿಜೆಪಿಯತ್ತ

ರಾಜ​ಕಾ​ರ​ಣ​ದಲ್ಲಿ ವಲಸೆ ಹಕ್ಕಿ ಎಂದೇ ಕರೆ​ಯ​ಲ್ಪ​ಡುವ ಕೆಎಂಎಫ್‌ ಮಾಜಿ ಅಧ್ಯಕ್ಷ ಪಿ.ನಾ​ಗ​ರಾಜು, ಆಡ​ಳಿತರೂಢ ಪಕ್ಷ​ದತ್ತ ಜಿಗಿ​ಯು​ವು​ದನ್ನೇ ಚಾಳಿ ಮಾಡಿ​ಕೊಂಡಿದ್ದಾರೆ. ಇದೀಗ ತೆನೆ ಭಾರ ಇಳಿಸಿ ಕಮಲ ಮುಡಿ​ಯಲು ಸನ್ನ​ದ್ಧ​ರಾ​ಗಿ​ದ್ದಾ​ರೆ.

2008ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಪಿ.ನಾ​ಗ​ರಾ​ಜು ಬಿಜೆಪಿ ಸೇರಿದರು. ಆಗ ಅವರಿಗೆ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಿ ಕಣಕ್ಕಿಳಿಸಲಾಯಿತು. ಚುನಾವಣೆಯಲ್ಲಿ ಪರಾಭವಗೊಂಡ ಪಿ.ನಾಗರಾಜು ನಂತರ ಮಾಗಡಿ ವಿಧಾನಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷರಾಗಿ, ತದನಂತರ ರಾಮನಗರಕ್ಕೆ ವಲಸೆ ಬಂದು ಇಲ್ಲಿಯೂ ತಾಲೂಕು ಅಧ್ಯಕ್ಷರಾ​ದರು. ನಂತರದ ಬೆಳವಣಿಗೆಯಲ್ಲಿ ಕೆಎಂಎಫ್‌ಗೆ ನಾಮನಿದೇರ್ಶನ ಮಾಡಿಸಿಕೊಂಡು ಪಕ್ಷ ಸಂಘಟನೆ ಮಾಡದೆ ಬಿಜೆಪಿಗೆ ಕೈಕೊಟ್ಟು ಕೈ ಪಾಳಯ ಸೇರಿ​ದರು. ಕಾಂಗ್ರೆಸ್‌ ಆಡ​ಳಿ​ತಕ್ಕೆ ಬರುತ್ತಿ​ದ್ದಂತೆ ಅಧಿ​ಕಾರ ಹಂಚಿಕೆ ಸೂತ್ರ​ದ​ಡಿ ಕೆಎಂಎಫ್‌ ಅಧ್ಯ​ಕ್ಷ​ರಾ​ದ​ರೂ ಮಾತಿಗೆ ತಪ್ಪಿ​ದರು. ಆನಂತರ ಕಾಂಗ್ರೆಸ್‌ನಿಂದ ಜೆಡಿ​ಎಸ್‌ಗೆ ಜಿಗಿ​ದರು. ಈಗ ಆಡ​ಳಿ​ತ​ರೂಢ ಬಿಜೆ​ಪಿ​ ಬಾಗಿ​ಲಲ್ಲಿ ನಿಂತಿ​ದ್ದಾರೆ.

ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ಮೂಲಕ ಕಮಲ ಪಕ್ಷ ಸೇರಲು ಪಿ.ನಾ​ಗ​ರಾಜು ಕಸ​ರತ್ತು ನಡೆ​ಸು​ತ್ತಿ​ದ್ದಾರೆ. ಇದನ್ನು ವಿರೋ​ಧಿ​ಸುತ್ತಿ​ರುವ ಬಿಜೆಪಿ ನಾಯ​ಕರು ಅವರ ಸ್ವಗ್ರಾಮ ಮಾಯ​ಗಾ​ನ​ಹಳ್ಳಿ ಗ್ರಾಪಂ ವರಿಷ್ಠ ಸ್ಥಾನದ ಚುನಾ​ವ​ಣೆ​ಯ​ಲ್ಲಿಯೇ ಪಿ.​ನಾ​ಗ​ರಾಜು ತೀವ್ರ ಮುಖ​ಭಂಗ ಅ​ನು​ಭ​ವಿ​ಸುಂತೆ ಮಾಡಿ​ದ್ದಾ​ರೆ

Follow Us:
Download App:
  • android
  • ios