Asianet Suvarna News Asianet Suvarna News

ಕಂಪನಿ ಮಾರಿದ್ದೇನೆ, ಅಮೆರಿಕ ಬಿಟ್ಟು ಮಂಡ್ಯದಲ್ಲೇ ನೆಲೆಸುವೆ : ದರ್ಶನ್‌ ಪುಟ್ಟಣ್ಣಯ್ಯ

  • ಮುಂದಿನ ಮೇ ತಿಂಗಳಲ್ಲಿ ಅಮೆರಿಕಾದಿಂದ ಕುಟುಂಬ ಸಮೇತ ತವರಿಗೆ ಹಿಂದಿರುಗಿ ಇಲ್ಲೇ ನೆಲೆಸುತ್ತೇನೆ 
  • ರೈತ ಸಂಘದ ಸಂಘಟನಾ ಕಾರ್ಯದರ್ಶಿ ದರ್ಶನ್‌ ಪುಟ್ಟಣ್ಣಯ್ಯ ಹೇಳಿಕೆ
Soon i will back to Mandya soon Says Darshan puttannaiah snr
Author
Bengaluru, First Published Nov 10, 2021, 8:11 AM IST

ಮಂಡ್ಯ (ನ.10): ಮುಂದಿನ ಮೇ ತಿಂಗಳಲ್ಲಿ ಅಮೆರಿಕಾದಿಂದ (America) ಕುಟುಂಬ ಸಮೇತ ತವರಿಗೆ ಹಿಂದಿರುಗಿ ಇಲ್ಲೇ ನೆಲೆಸುತ್ತೇನೆ ಎಂದು ರೈತ ಸಂಘದ ಸಂಘಟನಾ ಕಾರ್ಯದರ್ಶಿ ದರ್ಶನ್‌ ಪುಟ್ಟಣ್ಣಯ್ಯ (Darshan puttanaiah) ಹೇಳಿದರು. 

ಅಮೆರಿಕಾದಲ್ಲಿರುವ ನನ್ನ ಕಂಪನಿಯನ್ನು (company)  ಮಾರಾಟ ಮಾಡಿದ್ದೇನೆ. ಮುಂದಿನ ಮೇ ತಿಂಗಳಲ್ಲಿ ಅಮೆರಿಕಾದಿಂದ ಹಿಂತಿರುಗಿ ಪಾಂಡವಪುರದಲ್ಲೇ (Pandavapura) ನೆಲೆಯೂರುತ್ತೇನೆ. ನನ್ನ ತಂದೆ ಪುಟ್ಟಣ್ಣಯ್ಯನವರ (puttanaiah) ಹಾದಿಯಲ್ಲೇ ನಡೆದು ರೈತ ಸಂಘವನ್ನು ಬಲಪಡಿಸಲಿದ್ದೇನೆ. ರೈತ ಸಂಘದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ತರಬೇತಿ ಶಿಬಿರ ನಡೆಸಲಾಗುವುದು. ಆದರೆ, ವಿಧಾನಸಭಾ ಚುನಾವಣೆಗೆ (Assembly Election) ಸ್ಪರ್ಧಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದರು.

ಇಳುವರಿ ಆಧಾರದ ಮೇಲೆ ಕಬ್ಬಿನ ದರ ನಿಗದಿ ಮಾಡಲಾಗುತ್ತಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಕೇವಲ 8.5ರಷ್ಟುಮಾತ್ರ ಇಳುವರಿ ಮಾತ್ರ ಬರುತ್ತಿರುವುದರಿಂದ ರೈತರಿಗೆ (Farmers) ಅನ್ಯಾಯವಾಗುತ್ತಿದೆ. ಆದರೆ, ಅದೇ ಆಲೆಮನೆಗಳಲ್ಲಿ 10 ರಿಂದ 11ರಷ್ಟುಇಳುವರಿ ಬರುತ್ತಿದೆ. ಸಕ್ಕರೆ ಕಾರ್ಖಾನೆಗಳು (Sugar Industries) ರೈತರಿಗೆ ಮೋಸ ಮಾಡುತ್ತಿವೆ ಎಂದು ದೂರಿದರು

ಚುನಾವಣಾ ಅಖಾಡಕ್ಕೆ : 

ಅಮೇರಿಕಾದಲ್ಲಿರುವ ರೈತ ನಾಯಕ ದರ್ಶನ್‌ ಪುಟ್ಟಣ್ಣಯ್ಯ  ಶೀಘ್ರದಲ್ಲೆ ತವರು ಮಂಡ್ಯ ಜಿಲ್ಲೆ ವಾಪಸ್ಸಾಗಲಿದ್ದಾರೆ ಎಂದು ದಿ.ಕೆ.ಎಸ್‌.ಪುಟ್ಟಣ್ಣಯ್ಯ ಪುತ್ರಿ ಸ್ಮಿತಾ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದ ಗ್ರಾಮ ಘಟಕ ಉದ್ಘಾಟನಾ ಹಾಗೂ ತಾಲೂಕು ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ರೈತ ಸಂಘದ ಕಾರ್ಯಕರ್ತರು ಆತಂಕಗೊಳ್ಳುವ ಅಗತ್ಯವಿಲ್ಲ. ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲೇ ಮುಂಬರುವ ಗ್ರಾಪಂ ಚುನಾವಣೆ ನಡೆಯಲಿದೆ ಎಂದರು.

ನಮ್ಮ ತಂದೆ ಕೆ.ಎಸ್‌.ಪುಟ್ಟಣ್ಣಯ್ಯ ನಿಧನರಾದಾಗ ದರ್ಶನ್‌ ಪುಟ್ಟಣ್ಣಯ್ಯ ಯಾವುದೇ ಕಾರಣಕ್ಕೂ ತಾವು ಅಮೇರಿಕಾದಲ್ಲಿ ಇರುವುದಿಲ್ಲ. ತಾಯ್ನಾಡಿಗೆ ಬಂದು ರೈತ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವೆ ಎಂದು ಪ್ರಮಾಣ ಮಾಡಿದ್ದಾರೆ. ಅದರಂತೆ ನಡೆದುಕೊಳ್ಳಲಿದ್ದಾರೆ ಎಂದಿದ್ದರು.

ಕೋವಿಡ್‌-19 ಕಾರಣದಿಂದ ಅಮೆರಿಕಾದಲ್ಲಿ ವಿಮಾನಯಾನ (Flight) ಪ್ರಾರಂಭವಾಗಿರಲಿಲ್ಲ. ಹೀಗಾಗಿ ದರ್ಶನ್‌ ಪುಟ್ಟಣ್ಣಯ್ಯ ತಾಯ್ನಾಡಿಗೆ ಮರಳಲು ತಡವಾಯಿತು. ಇದೀಗ ವಿಮಾನಯಾನ ಮತ್ತೆ ಪ್ರಾರಂಭವಾಗಿರುವುದರಿಂದ ದರ್ಶನ್‌ ಪುಟ್ಟಣ್ಣಯ್ಯ ತಾಯ್ನಾಡಿಗೆ ವಾಪಸ್ಸಾಗಲಿದ್ದಾರೆ ಎಂದು ತಿಳಿಸಿದ್ದರು.

ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್‌ ಮಾತನಾಡಿ, ರೈತಸಂಘದ ಅಧ್ಯಕ್ಷರಾದ ಬಳಿಕ ತಮಗೆ 200ಕ್ಕೂ ಹೆಚ್ಚು ಜನರಿಂದ ದೂರವಾಣಿ ಕರೆ ಮಾಡಿ ಧೃತಿಗೆಡದೆ ರೈತಸಂಘಟನೆ ಮಾಡುವಂತೆ ಸಲಹೆ ನೀಡಿದ್ದಾರೆ. ಜತೆಗೆ ಕೆ.ಎಸ್‌.ಪುಟ್ಟಣ್ಣಯ್ಯರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂದಿದ್ದಾರೆ ಎಂದರು.

ಮುಂಬರುವ ಗ್ರಾಪಂ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಜತೆ ಜತೆಯಲ್ಲೇ ರಾಜಕೀಯವನ್ನೂ ಕೊಂಡೊಯ್ಯುವ ಮೂಲಕ ಕ್ಷೇತ್ರದ ಎಲ್ಲ 34 ಪಂಚಾಯಿತಿಗಳಲ್ಲೂ ರೈತಸಂಘದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಪುಟ್ಟಣ್ಣಯ್ಯರ ಹೆಸರಿಗೆ ಗೌರವ ತರುವ ಕೆಲಸ ಮಾಡಲಿದ್ದೇವೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕಳೆದ 34 ವರ್ಷಗಳಿಂದಲೂ ಧಣಿವರಿಯದೆ ಹೋರಾಟ ನಡೆಸುತ್ತಿದೆ. ಸಂಘಟನೆಯಲ್ಲಿ ನೈತಿಕತೆ, ಶಿಸ್ತು ಇರುವ ಕಾರಣ ರೈತ ಚಳವಳಿ ಇನ್ನೂ ಜೀವಂತಿಕೆಯಿಂದ ಇದೆ. ಆದರೆ, ಬೇರೆ ಸಂಘಟನೆಗಳು ಶಿಸ್ತಿನ ಕೊರತೆಯಿಂದಾಗಿ ಹರಿದು ಹಂಚಿ ಹಾಳಾಗಿ ಹೋಗಿವೆ ಎಂದು ವಿಷಾದಿಸಿದರು.

  •  ಅಮೆರಿಕ ಬಿಟ್ಟು ಮಂಡ್ಯದಲ್ಲೇ ನೆಲೆಸುವೆ : ದರ್ಶನ್‌ ಪುಟ್ಟಣ್ಣಯ್ಯ
  •  ಮುಂದಿನ ಮೇ ತಿಂಗಳಲ್ಲಿ ಅಮೆರಿಕಾದಿಂದ ಕುಟುಂಬ ಸಮೇತ ತವರಿಗೆ 
  • ಅಮೆರಿಕಾದಲ್ಲಿರುವ ನನ್ನ ಕಂಪನಿಯನ್ನು ಮಾರಾಟ ಮಾಡಿದ್ದೇನೆ
Follow Us:
Download App:
  • android
  • ios