ಅಳ್ನಾವರ: ನೀರೆಂದು ವಿಷ ಸೇವಿಸಿ ಯೋಧ ಸಾವು
ಹೊಲದ ಮನೆಯಲ್ಲಿದ ವಿಷದ ಬಾಟಲಿಯನ್ನು ನೀರೆಂದು ತಿಳಿದು ಕುಡಿದು ಅಸ್ವಸ್ಥರಾಗಿದ್ದ ಯೋಧ| ಚಿಕಿತ್ಸೆ ಫಲಕಾರಿಯಾಗದೆ ಯೋಧನ ಸಾವು| ಮೃತರಿಗೆ ತಂದೆ-ತಾಯಿ ಹಾಗೂ ಇಬ್ಬರು ಸಹೋದರಿಯರು ಇದ್ದಾರೆ| ಈ ಕುರಿತು ಅಳ್ನಾವರ ಠಾಣೆಯಲ್ಲಿ ಪ್ರಕರಣ ದಾಖಲು|
ಅಳ್ನಾವರ(ಮಾ.04): ಸಮೀಪದ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಯೋಧ ನೀರೆಂದು ವಿಷ ಸೇವಿಸಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ತಿಂಗಳು ಛತ್ತೀಸಘಡದಿಂದ ರಜೆಗೆಂದು ತಮ್ಮೂರಿಗೆ (ಲಿಂಗನಮಠ) ಬಂದಿದ್ದ ನಾಗರಾಜ ಮಿಟಗಾರ (26) ಬೆಳಗಿನ ಜಾವ ತಮ್ಮ ಹೊಲದ ಕಡೆ ವಾಯುವಿಹಾರಕ್ಕೆ ಹೋದಾಗ (ಫೆ. 3ರಂದು) ಬಾಯಾರಿಕೆಯಿಂದಾಗಿ ಹೊಲದ ಮನೆಯಲ್ಲಿದ ವಿಷದ ಬಾಟಲಿಯನ್ನು ನೀರೆಂದು ತಿಳಿದು ಕುಡಿದು ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಕುಟುಂಬದ ಸದಸ್ಯರು ಅಳ್ನಾವರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಫೆ. 27ರಂದು ಮೃತರಾಗಿದ್ದಾರೆ.
ಹುಬ್ಬಳ್ಳಿ: ಅವ್ಯವಹಾರ, ನಿವೃತ್ತ ಆರ್ಎಫ್ಒ ಸೇರಿ ಮೂವರ ಬಂಧನ
ಮೃತ ಯೋಧ ನಾಗರಾಜ ಮಿಟಗಾರ ಛತ್ತಿಸಗಡದ ಸಿಆರ್ಪಿಎಫ್ 188 ಬಟಾಲಿಯನ್ ಡೇಲ್ಟಾಯುನಿಟ್ನಲ್ಲಿ ಕಾನ್ಸ್ಟೇಬಲಾಗಿ ಕಾರ್ಯನಿವಹಿಸುತ್ತಿದ್ದರು. ಮೃತರ ಸಹೋದರ ಶಿವರಾಜ ಸಹ ಸೈನ್ಯದಲ್ಲಿದ್ದಾರೆ. ಮೃತರಿಗೆ ತಂದೆ-ತಾಯಿ ಹಾಗೂ ಇಬ್ಬರು ಸಹೋದರಿಯರು ಇದ್ದಾರೆ. ಈ ಕುರಿತು ಅಳ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.