Asianet Suvarna News Asianet Suvarna News

Karnataka budget 2023: ರಾಯಚೂರು ಪಾಲಿಗೆ ಸಿದ್ದರಾಮಯ್ಯ ಬಜೆಟ್ ನಿರಾಸೆ

ರಾಜ್ಯ​ದಲ್ಲಿ ಯಾವುದೇ ಪಕ್ಷದ ಸರ್ಕಾರ ಬಂದರೂ ಸಹ ರಾಯ​ಚೂರು ಜಿಲ್ಲೆಗೆ ಮಲ​ತಾಯಿ ಧೋರಣೆ ಫಿಕ್ಸ್‌ ಎನ್ನುವು ಸಂಗ​ತಿ ಮತ್ತೊಮ್ಮೆ ಸಾಬೀ​ತಾ​ಗಿದೆ.

Siddaramaiah budget disappointed Raichur district rav
Author
First Published Jul 8, 2023, 12:32 PM IST

ರಾಮ​ಕೃಷ್ಣ ದಾಸ​ರಿ

ರಾಯಚೂರು (ಜು.8) :  ರಾಜ್ಯ​ದಲ್ಲಿ ಯಾವುದೇ ಪಕ್ಷದ ಸರ್ಕಾರ ಬಂದರೂ ಸಹ ರಾಯ​ಚೂರು ಜಿಲ್ಲೆಗೆ ಮಲ​ತಾಯಿ ಧೋರಣೆ ಫಿಕ್ಸ್‌ ಎನ್ನುವು ಸಂಗ​ತಿ ಮತ್ತೊಮ್ಮೆ ಸಾಬೀ​ತಾ​ಗಿದೆ.

ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ(Siddaramaiah budget) ಶುಕ್ರ​ವಾರ ಮಂಡಿ​ಸಿದ 14ನೇ ಬಜೆ​ಟ್‌​ ರಾಯ​ಚೂರು ಜಿಲ್ಲೆ ಪಾಲಿಗೆ ತೀವ್ರ ನಿರಾ​ಸೆ ಮೂಡಿ​ಸಿದೆ. ಇಡೀ ಬಜೆ​ಟ್‌​ನಲ್ಲಿ ರಾಯ​ಚೂರಿಗೆ ನಿರ್ದಿ​ಷ್ಟ​ವಾದ ಯೋಜನೆ, ಅನು​ದಾ​ನ​ವನ್ನು ನೀಡದೆ ನಿರ್ಲ​ಕ್ಷಿ​ಸಿದ್ದು ಮೇಲ್ನೋ​ಟಕ್ಕೆ ಕಂಡು​ ಬ​ರು​ತ್ತಿದೆ.

ಕಾಂಗ್ರೆಸ್‌ ಸರ್ಕಾ​ರವೇ ಆರಂಭಿ​ಸಿದ ಒಪೆಕೆ ಸೂಪರ್‌ ಸ್ಪೆಷಾ​ಲಿಟಿ ಆಸ್ಪ​ತ್ರೆ(Raichur super speciality hospital)ಯು ಇದೀಗ ರಿಮ್ಸ್‌ನಡಿ ಸಿಲುಕಿ ರೋಗ​ಪೀ​ಡಿ​ತ​ಗೊಂಡಿದೆ. ಒಪೆ​ಕ್‌ನ್ನು ಸ್ವಾಯ​ತ್ತ ಮಾಡುವ ಬೇಡಿ​ಕೆ ಹಾಗೆಯೇ ಉಳಿದಿದೆ. ಬೆಳೆ​ಯು​ತ್ತಿ​ರುವ ರಾಯ​ಚೂರು ನಗ​ರಕ್ಕೆ ರಿಂಗ್‌ ರಸ್ತೆ, ಇತ್ತೀ​ಚೆಗೆ ಜಿಲ್ಲೆಗೆ ಏಮ್ಸ್‌ ನೀಡ​ಬೇಕು ಎಂದು ಕೇಂದ್ರಕ್ಕೆ ಪತ್ರ ಬರೆ​ದಿ​ರುವ ಸಿಎಂ ಸಿದ್ದ​ರಾ​ಮಯ್ಯ ಅವರು ಆ ಸಂಸ್ಥೆ ಸ್ಥಾಪ​ನೆಗೆ ಅಗ​ತ್ಯ​ವಾದ ಸವ​ಲ​ತ್ತು​ಗಳ ಅಭಿ​ವೃ​ದ್ಧಿ ಕುರಿ​ತಂತೆ ಬಜೆ​ಟ್‌​ನಲ್ಲಿ ಪ್ರಸ್ತಾ​ಪಿ​ಸಿಲ್ಲ.

Karnataka budget 2023: ಕೊಪ್ಪಳದಲ್ಲಿ ತಲೆ ಎತ್ತಲಿದೆ ಜಾನಪದ ಲೋಕ!

ತುಂಗ​ಭದ್ರಾ ಎಡ​ದಂಡೆ ಕಾಲುವೆ ಕೆಳ​ಭಾ​ಗದ ರೈತ​ರಿಗೆ ಸಮ​ರ್ಪಕ ನೀರನ್ನು ಹರಿ​ಸುವ ವಿಚಾ​ರ​ವಾಗಿ ನವಲಿ ಬಳಿ ಜಲಾ​ಶಯ ನಿರ್ಮಿ​ಸುವ ವಿಚಾ​ರ​ವನ್ನು ಬಜೆ​ಟ್‌​ನಲ್ಲಿ ಪ್ರಸ್ತಾ​ಪಿ​ಸಿದ್ದು ಕಾರ್ಯಾ​ಗ​ತ​ಗೊ​ಳಿ​ಸುವ ಸುಳಿವು ನೀಡಿಲ್ಲ. ಇನ್ನು ಮಸ್ಕಿ ಉಪ​ಚು​ನಾ​ವ​ಣೆ​ಯಲ್ಲಿ ನೀಡಿದ ಭರ​ವ​ಸೆ​ಯಂತೆ 9ಎ ಕಾಲುವೆ ಯೋಜ​ನೆಯ ಹೆಸ​ರು ಸಹ ಬಜೆ​ಟ್‌​ನ​ಲ್ಲಿಲ್ಲ. ಹೊಸದಾಗಿ ಆರಂಭ​ಗೊಂಡಿ​ರುವ ರಾಯ​ಚೂರು ವಿಶ್ವ​ವಿ​ದ್ಯಾ​ಲ​ಯಕ್ಕೆ ವಿಶೇಷ ಅನು​ದಾನ​ ಕೊ​ಟ್ಟಿ​ಲ್ಲ. ಎನ್‌​ಆ​ರ್‌​ಬಿಸಿ ವಿಸ್ತ​ರಣಾ ಯೋಜನೆ ಪೂರ್ಣ​, ಮಂತ್ರಾ​ಲ​ಯಕ್ಕೆ ತೆರ​ಳಲು ಬಿಚ್ಚಾಲಿ ಸಮೀಪ ಸೇತುವೆ ನಿರ್ಮಾ​ಣದ ಕಾಮ​ಗಾ​ರಿಯ ಸಂಗತಿ ಪ್ರಸ್ತಾ​ಪ​ಗೊಂಡಿ​ಲ್ಲ. ಜಿಲ್ಲಾ​ಡ​ಳಿತ ಭವ​ನಕ್ಕೆ ಹೆಚ್ಚು​ವರಿ ಅನು​ದಾನದ ಅಗ​ತ್ಯ​ವಿ​ದ್ದರು ಆ ಬಗ್ಗೆ ಎಲ್ಲಿಯೂ ವಿಷ​ಯ​ವಿಲ್ಲ. ಹೀಗೆ ಎಲ್ಲ ರಂಗ​ಗ​ಳ​ಲ್ಲಿ ಅಭಿ​ವೃ​ದ್ಧಿಯ ಕಾಮ​ಗಾ​ರಿ​ಗ​ಳಿಗೆ ಅಗ​ತ್ಯ​ವಾದ ಅನು​ದಾ​ನ​ವನ್ನು ನೀಡು​ವಲ್ಲಿ ರಾಜ್ಯ ಸರ್ಕಾ​ರದ ಬಜೆಟ್‌ ವಿಫ​ಲ​ಗೊಂಡಿದೆ.

ಬಜೆ​ಟ್‌ನಲ್ಲಿ ರಾಯ​ಚೂ​ರಿಗೆ ಸಿಕ್ಕಿ​ದ್ದೇನು?

- ರಾಯಚೂರು ತಾಲೂಕು ಕಲ್ಮಲಾ ಜಂಕ್ಷನ್‌ನಿಂದ ಸಿಂಧನೂರುವರೆಗೆ 78 ಕಿಮೀಗಳ ರಸ್ತೆ ಅಭಿವೃದ್ಧಿಗೆ 1696 ಕೋಟಿ

- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ 4.71 ಕೋಟಿ

- ರಾಯಚೂರು ಕೋಟೆ ಅಭಿವೃದ್ಧಿ (ರಾಜ್ಯದ ವಿವಿಧ ಜಿಲ್ಲೆಗಳನ್ನೊಳಗೊಂಡಂತೆ)

- ಆಶಾಕಿರಣ ಕಾಯಕ್ರಮದಡಿಯಲ್ಲಿ ಕಣ್ಣಿನ ಶಿಬಿರ, ಕನ್ನಡಕ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳ ಕಾರ್ಯಕ್ರಮಕ್ಕೆ ರಾಯಚೂರು, ಚಿತ್ರದುರ್ಗ, ಉತ್ತರ ಕನ್ನಡ, ಮಂಡ್ಯ ಸೇರಿ 21 ಕೋಟಿ ರು.

ಇಬ್ಬರು ಸಚಿ​ವರು, ನಾಲ್ಕು ಜನ ಶಾಸ​ಕರ ವೈಫಲ್ಯ

ಹೊಸ ಸರ್ಕಾ​ರ​ದಿಂದ ರಾಯ​ಚೂರು ಜಿಲ್ಲೆ ಸಮಗ್ರ ಅಭಿ​ವೃ​ದ್ಧಿಗೆ ಅಗ​ತ್ಯ​ವಾದ ಯೋಜನೆ, ಕಾಮ​ಗಾ​ರಿ​ಗಳ ಜಾರಿ ಮತ್ತು ವಿಶೇಷ ಅನು​ದಾ​ನ​ವನ್ನು ತರು​ವಲ್ಲಿ ಜನ​ಪ್ರ​ತಿ​ನಿ​ಧಿ​ಗಳ ಸಂಪೂರ್ಣ ವೈಫಲ್ಯ ಕಂಡಿ​ರು​ವುದು ಬಜೆ​ಟ್‌​ನಲ್ಲಿ ಎದ್ದು ಕಾಣುತ್ತಿದೆ.

Karnataka budget 2023: ಗಣಿ ಜಿಲ್ಲೆ ಬಳ್ಳಾರಿಗೆ ನಿರಾಸೆ ಮೂಡಿಸಿದ ಬಜೆಟ್. ಯಾವುದೇ ನಿರ್ದಿಷ್ಟ ಯೋಜನೆಗಳ ಪ್ರಸ್ತಾಪವಿಲ್ಲ

ರಾಯ​ಚೂರು ಜಿಲ್ಲೆಯವ​ರಾದ ಸಚಿವ ಎನ್‌.​ಎ​ಸ್‌.​ಬೋ​ಸ​ರಾಜು ಮತ್ತು ಉಸ್ತು​ವಾರಿ ಸಚಿವ ಡಾ.ಶ​ರ​ಣ​ಪ್ರ​ಕಾಶ ಪಾಟೀಲ್‌, ಕಾಂಗ್ರೆಸ್‌ ಶಾಸ​ಕ​ರಾದ ಬಸ​ನ​ಗೌಡ ದದ್ದಲ್‌, ಜಿ.ಹಂಪಯ್ಯ ನಾಯಕ, ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಮತ್ತು ಹಂಪ​ನ​ಗೌಡ ಬಾದರ್ಲಿ ಅವರು ಜಿಲ್ಲೆಗೆ ಏನು ಬೇಕು?, ಇಲ್ಲಿನ ಜನ​ಸಾ​ಮಾ​ನ್ಯರ ಬೇಡಿ​ಕೆ​ಗ​ಳೇನು? ಎನ್ನು​ವು​ದನ್ನು ಸರ್ಕಾ​ರಕ್ಕೆ ಮನ​ವ​ರಿಕೆ ಮಾಡಿ​ಕೊಟ್ಟು ಸಿಎಂ ಅವ​ರಿಂದ ಅಗತ್ಯ ಅನು​ದಾ​ನ​ವನ್ನು ತರು​ವಲ್ಲಿ ವಿಭ​ಲ​ವಾ​ಗಿ​ದ್ದಾ​ರೆಂಬುದು ಜನರ ಅಭಿಪ್ರಾ​ಯ​ವಾ​ಗಿ​ದೆ. ಜಿಲ್ಲೆ ಪಾಲಿಗೆ ಬಜೆಟ್‌ ಇದ್ದು ಇಲ್ಲ​ದಂತಾ​ಗಿದೆ ಎಂದು ಜನ​ಸಾ​ಮಾ​ನ್ಯರು ಆಕ್ರೋ​ಶ​ವನ್ನು ಹೊರ​ಹಾ​ಕು​ತ್ತಿದ್ದಾ​ರೆ.

Follow Us:
Download App:
  • android
  • ios