ಶಿವಮೊಗ್ಗ ನಗರದ ವೆಂಕಟೇಶ್‌ ನಗರದಲ್ಲಿ ಸುಮಾರು 20 ಮನೆಗಳು ಜಲಾವೃತಗೊಂಡಿದೆ. ಜಗದಾಂಬಾ ಬಡಾವಣೆಗಳಲ್ಲಿ 4 ಮನೆ, ಟ್ಯಾಂಕ್‌ ಮಹೊಲ್ಲಾದಲ್ಲಿ 12 ಮನೆಗಳಿಗೆ ನೀರು ನುಗ್ಗಿದೆ. ಅಗತ್ಯವಿದ್ದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯುವಂತೆ ತಹಸೀಲ್ದಾರ್ ಸೂಚಿಸಿದ್ದಾರೆ.

ಶಿವಮೊಗ್ಗ(ಆ.07): ನಗರದಲ್ಲಿ ಸೋಮವಾರದಿಂದ ಸುರಿಯುತ್ತಿರುವ ಮಳೆಗೆ ನಗರದ ಕೆಲ ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿ, ಕೆಲವು ಕಡೆ ಮನೆ ಗೋಡೆಗಳು ಕುಸಿದು ಜನರನ್ನು ಸಂಕಷ್ಟಕ್ಕೀಡು ಮಾಡಿದೆ.

Add Asianetnews Kannada as a Preferred SourcegooglePreferred

ಮನೆಗಳಿಗೆ ನೀರು ನುಗ್ಗಿದ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ತಹಸೀಲ್ದಾರ್‌ ಗಿರೀಶ್‌ ಹಲವು ಎಚ್ಚರಿಕೆಯ ಕ್ರಮತೆಗೆದುಕೊಳ್ಳಲು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದ್ದು, ಅಗತ್ಯ ಬಿದ್ದಲ್ಲಿ ಗಂಜೀಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮನೆಯೊಳಗೂ ನೀರು:

ನಗರದ ವೆಂಕಟೇಶ್‌ ನಗರದಲ್ಲಿ ಸುಮಾರು 20 ಮನೆಗಳು ಜಲಾವೃತಗೊಂಡಿದೆ. ಜಗದಾಂಬಾ ಬಡಾವಣೆಗಳಲ್ಲಿ 4 ಮನೆ, ಟ್ಯಾಂಕ್‌ ಮಹೊಲ್ಲಾದಲ್ಲಿ 12 ಮನೆಗಳಿಗೆ ನೀರು ನುಗ್ಗಿದೆ. ಕೆಲ ಚರಂಡಿಗಳು ಬ್ಲಾಕ್‌ ಆಗಿರುವುದರಿಂದ ರಸ್ತೆಯ ಮೇಲೆ ನೀರು ಹರಿದು ಮನೆಗಳಿಗೆ ನುಗ್ಗುತ್ತಿವೆ. ಕೂಡ್ಲಿಯಲ್ಲಿ ನಾಟಿ ಮಾಡಲಾದ ಗದ್ದೆಯಲ್ಲಿ 5 ಅಡಿ ನೀರು ನಿಂತು ಸಂಪೂರ್ಣ ಜಲಾವೃತಗೊಂಡಿದೆ.

ಶಿವಮೊಗ್ಗದ ಪ್ರತಿ ಹೋಬಳಿಗಳಲ್ಲೂ ಗಂಜೀಕೇಂದ್ರ ತೆರೆಯಲಾಗುತ್ತಿದೆ. ಜನರಿಗೆ ಅವಶ್ಯಕವಾಗಿರುವ ಊಟ ವಸತಿ ಮತ್ತು ಬಟ್ಟೆಗಳನ್ನೂ ನೀಡಲು ಸೂಚಿಸಿದ್ದಾರೆ.

ತುಂಬಿ ಹರಿಯುತ್ತಿದ್ದಾಳೆ ತುಂಗೆ, ಪ್ರವಾಹ ಭೀತಿಯಲ್ಲಿ ಜನ

ಮಳೆಯಿಂದ ತೊಂದರೆಗೊಳಗಾದವರು ಈ ಕೂಡಲೇ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಂಖ್ಯೆ 08182261413, ಅಥವಾ 100, ಶಿವಮೊಗ್ಗ ತಹಸೀಲ್ದಾರ್‌ ಕಚೇರಿ ಸಂಖ್ಯೆ 081882-279312, ಭದ್ರಾವತಿ ತಹಸೀಲ್ದಾರ್‌ ಕಚೇರಿ 08282-267283, ತೀರ್ಥಹಳ್ಳಿ ತಹಸೀಲ್ದಾರ್‌ ಕಚೇರಿ 08181 228239, ಸೊರಬ ತಹಸೀಲ್ದಾರ್‌ ಕಚೇರಿ 08184-272241, ಹೊಸನಗರ ತಹಸೀಲ್ದಾರ್‌ ಕಚೇರಿ 08185-221235, ಶಿಕಾರಿಪುರ ತಹಸೀಲ್ದಾರ್‌ ಕಚೇರಿ 08187-222239 ಹಾಗೂ ಸಾಗರ ತಹಸೀಲ್ದಾರ್‌ ಕಚೇರಿ 08183-226074 ಇಲ್ಲಿ ಸಂಪರ್ಕಿಸಬಹುದಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ