Asianet Suvarna News Asianet Suvarna News

ತುಂಬಿ ಹರಿಯುತ್ತಿದ್ದಾಳೆ ತುಂಗೆ, ಪ್ರವಾಹ ಭೀತಿಯಲ್ಲಿ ಜನ

ಮಂಗ​ಳ​ವಾರ ಬೆಳಗ್ಗೆ ಸುರಿದ ಆಶ್ಲೇಷಾ ಮಳೆಗೆ ತುಂಗೆ ಪ್ರವಾ​ಹದ ಮಟ್ಟ​ವಾದ ರಾಮ ಮಂಟಪ ಮುಳು​ಗಲು ಕೇವಲ 1 ಅಡಿ ಬಾಕಿ ಇದೆ. ಮಂಗ​ಳ​ವಾರ ಸಂಜೆ 5ರ ಹೊತ್ತಿಗೆ ಸುಮಾರು 84 ಅಡಿ​ಗ​ಳಿಗೂ ಮಿಕ್ಕಿ ಹರಿ​ಯು​ತ್ತಿದೆ. ತೀರ್ಥ​ಹ​ಳ್ಳಿಯಲ್ಲಿಎಡೆ​ಬಿ​ಡದೆ ಸುರಿದ ಆಶ್ಲೇಷಾ ಮಳೆಯಿಂದ ತುಂಗೆ ತುಂಬಿ ಹರಿ​ಯುತ್ತಿದ್ದು, ಪ್ರವಾ​ಹದ ಭೀತಿ​ಉಂಟು​ಮಾ​ಡಿದೆ.

Tunga river swells due to heavy rain in Shivamogga
Author
Bangalore, First Published Aug 7, 2019, 8:47 AM IST

ಶಿವಮೊಗ್ಗ(ಆ.07): ತೀರ್ಥ​ಹ​ಳ್ಳಿಯಲ್ಲಿಎಡೆ​ಬಿ​ಡದೆ ಸುರಿದ ಆಶ್ಲೇಷಾ ಮಳೆಯಿಂದ ತುಂಗೆ ತುಂಬಿ ಹರಿ​ಯುತ್ತಿದ್ದು, ಪ್ರವಾ​ಹದ ಭೀತಿ​ಉಂಟು​ಮಾ​ಡಿದೆ.

ಮಂಗ​ಳ​ವಾರ ಬೆಳಗ್ಗೆ ಸುರಿದ ಆಶ್ಲೇಷಾ ಮಳೆಗೆ ತುಂಗೆ ಪ್ರವಾ​ಹದ ಮಟ್ಟ​ವಾದ ರಾಮ ಮಂಟಪ ಮುಳು​ಗಲು ಕೇವಲ 1 ಅಡಿ ಬಾಕಿ ಇದೆ. ಮಂಗ​ಳ​ವಾರ ಸಂಜೆ 5ರ ಹೊತ್ತಿಗೆ ಸುಮಾರು 84 ಅಡಿ​ಗ​ಳಿಗೂ ಮಿಕ್ಕಿ ಹರಿ​ಯು​ತ್ತಿದೆ.

ತುಂಗಾ ಸೇತು​ವೆಯ ಪಕ್ಕ​ದಲ್ಲಿ ಬಿಡಾರ ಕಟಿ​ಕೊಂಡು ವಾಸಿ​ಸು​ತ್ತಿದ್ದ 10ಕ್ಕೂ ಹೆಚ್ಚು ಕುಟುಂಬ​ಗ​ಳನ್ನು ಮುನ್ನೆ​ಚ್ಚ​ರಿ​ಕೆಯ ದೃಷ್ಟಿಯಿಂದ ಸ್ಥಳಾಂತ​ರಿ​ಸ​ಲಾ​ಗುವುದು ಎಂದು ಕಂದಾಯ ಇಲಾ​ಖೆಯ ಮೂಲ​ಗಳು ತಿಳಿ​ಸಿವೆ. ಕುಟುಂಬ​ಸ್ಥ​ರಿಗೆ ಗಂಜಿ ಕೇಂದ್ರ ತೆರೆ​ಯ​ಲಾ​ಗಿದೆ.

ಆಗಸ್ಟ್‌ನಲ್ಲಿ ಅತಿ ಹೆಚ್ಚು ಮಳೆ:

ಕಳೆದ ವರ್ಷದ ಮಳೆ​ಗಾ​ಲ​ಕ್ಕಿಂತ ಈ ಬಾರಿ ಆಗಸ್ಟ್‌ ತಿಂಗಳ ಮೊದ​ಲ​ವಾ​ರ​ದಲ್ಲಿ ಅತಿ ಹೆಚ್ಚು ಮಳೆ ದಾಖ​ಲಾ​ಗಿದೆ. ಮಂಗ​ಳವಾರ ಬೆಳಗ್ಗೆ ಆಗುಂಬೆ 321 ಮಿ.ಮೀ, ತೀರ್ಥ​ಹಳ್ಳಿ 148.6 ಮಿ.ಮೀ ಮಳೆ ದಾಖ​ಲಾ​ಗಿದೆ. ತಾಲೂಕಿನ ಕೆಲವು ಕಡೆ ಮಳೆ, ಗಾಳಿ​ಯಿಂದ ಪ್ರಕೃತಿ ವಿಕೋ​ಪಕ್ಕೆ ಸಣ್ಣ ಸೇತು​ವೆ​ಗಳು ಜಖಂ ಆಗಿವೆ.

30ವರ್ಷ ಬಳಿಕ ಮುಳುಗಿದ ಸೇತುವೆ ಮೇಲೆ ಹರಿಯುತ್ತಿದೆ 5 ಅಡಿ ನೀರು..!

ದಿನ​ವಿಡೀ ಕಂದಾಯ ಇಲಾಖೆ ಹಾಗೂ ಆರ​ಕ್ಷಕ ಇಲಾಖೆ ಎಚ್ಚರಿಕೆಯಿಂದ ಪರಿ​ಸ್ಥಿ​ತಿಯನ್ನು ಅವ​ಲೋ​ಕಿ​ಸು​ತ್ತಿದ್ದು, ನದಿ ದಂಡೆಯ ಅಕ್ಕ​ಪ​ಕ್ಕದ ಗ್ರಾಮ​ಸ್ಥ​ರಿಗೆ ಹೊಳೆಗೆ ಇಳಿ​ಯ​ದಂತೆ ಎಚ್ಚ​ರಿ​ಸು​ತ್ತಿ​ದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios