ಈ ಸಲ ಕಪ್ ನಮ್ದೆ ಎಂದು ಮಾದಪ್ಪನ ತೇರಿಗೆ ಬಾಳೆ ಹಣ್ಣೆಸೆದ
ಇಲ್ಲೊಬ್ಬ ಐಪಿಎಲ್ನ ಆರ್ಸಿಬಿ ತಂಡದ ಅಭಿಮಾನಿ ಈ ಸಲ ಕಪ್ ನಮ್ದೆ ಎಂದು ಹನೂರಿನಲ್ಲಿ ಹಣ್ಣು ಜವನಕ್ಕೆ ಬರೆದು ಮಾದಪ್ಪನ ತೇರಿಗೆ ಎಸೆದಿರುವ ವಿಡಿಯೋ ಸಖತ್ ವೈರಲ್ಲಾಗಿದೆ.
ಚಾಮರಾಜನಗರ(ಫೆ.27) : ಇಲ್ಲೊಬ್ಬ ಐಪಿಎಲ್ನ ಆರ್ಸಿಬಿ ತಂಡದ ಅಭಿಮಾನಿ ಈ ಸಲ ಕಪ್ ನಮ್ದೆ ಎಂದು ಹನೂರಿನಲ್ಲಿ ಹಣ್ಣು ಜವನಕ್ಕೆ ಬರೆದು ಮಾದಪ್ಪನ ತೇರಿಗೆ ಎಸೆದಿರುವ ವಿಡಿಯೋ ಸಖತ್ ವೈರಲ್ಲಾಗಿದೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಫೆ.24 ರಂದು ರಥೋತ್ಸವ ಜರುಗಿತ್ತು. ಆ ವೇಳೆ, ಹನೂರಿನ ರಘು ಎಂಬ ಆರ್ಸಿಬಿಯ ಕಟ್ಟಾಅಭಿಮಾನಿ. ಈ ಸಲವಾದರೂ ತಮ್ಮ ನೆಚ್ಚಿನ ತಂಡ ಚಾಂಪಿಯನ್ ಆಗಲೆಂದು ಮಹದೇಶ್ವರನ ಮೊರೆ ಹೋಗಿದ್ದಾರೆ.
'BJPಯವ್ರಿಗೆ ಅಧಿಕಾರದ ಅಮಲು ತಲೆಗೇರಿದೆ'..!
ಬಾಳೆ ಹಣ್ಣಿನ ಮೇಲೆ ಈ ಸಲ ಕಪ್ ನಮ್ದೆ ಎಂದು ಬರೆದು ಮಾದಪ್ಪನ ತೇರಿಗೆ ಎಸೆದು ಬೇಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ರಥೋತ್ಸವ ಸಂದರ್ಭ ತೇರಿಗೆ ಬಾಳೆ ಹಣ್ಣು ಎಸೆಯುವ ಸಂಪ್ರದಾಯ ಹಲವು ಕಡೆ ಇದೆ.