Asianet Suvarna News Asianet Suvarna News

ಈ ಸಲ ಕಪ್‌ ನಮ್ದೆ ಎಂದು ಮಾದಪ್ಪನ ತೇರಿಗೆ ಬಾಳೆ ಹಣ್ಣೆಸೆದ

ಇಲ್ಲೊಬ್ಬ ಐಪಿಎಲ್‌ನ ಆರ್‌ಸಿಬಿ ತಂಡದ ಅಭಿಮಾನಿ ಈ ಸಲ ಕಪ್‌ ನಮ್ದೆ ಎಂದು ಹನೂರಿನಲ್ಲಿ ಹಣ್ಣು ಜವನಕ್ಕೆ ಬರೆದು ಮಾದಪ್ಪನ ತೇರಿಗೆ ಎಸೆದಿರುವ ವಿಡಿಯೋ ಸಖತ್‌ ವೈರಲ್ಲಾಗಿದೆ.

 

RCB Fan throws banana in rathothsava in chamarajnagar
Author
Bangalore, First Published Feb 27, 2020, 11:24 AM IST

ಚಾಮರಾಜನಗರ(ಫೆ.27) : ಇಲ್ಲೊಬ್ಬ ಐಪಿಎಲ್‌ನ ಆರ್‌ಸಿಬಿ ತಂಡದ ಅಭಿಮಾನಿ ಈ ಸಲ ಕಪ್‌ ನಮ್ದೆ ಎಂದು ಹನೂರಿನಲ್ಲಿ ಹಣ್ಣು ಜವನಕ್ಕೆ ಬರೆದು ಮಾದಪ್ಪನ ತೇರಿಗೆ ಎಸೆದಿರುವ ವಿಡಿಯೋ ಸಖತ್‌ ವೈರಲ್ಲಾಗಿದೆ.

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಫೆ.24 ರಂದು ರಥೋತ್ಸವ ಜರುಗಿತ್ತು. ಆ ವೇಳೆ, ಹನೂರಿನ ರಘು ಎಂಬ ಆರ್‌ಸಿಬಿಯ ಕಟ್ಟಾಅಭಿಮಾನಿ. ಈ ಸಲವಾದರೂ ತಮ್ಮ ನೆಚ್ಚಿನ ತಂಡ ಚಾಂಪಿಯನ್‌ ಆಗಲೆಂದು ಮಹದೇಶ್ವರನ ಮೊರೆ ಹೋಗಿದ್ದಾರೆ.

'BJPಯವ್ರಿಗೆ ಅಧಿಕಾರದ ಅಮಲು ತಲೆಗೇರಿದೆ'..!

ಬಾಳೆ ಹಣ್ಣಿನ ಮೇಲೆ ಈ ಸಲ ಕಪ್‌ ನಮ್ದೆ ಎಂದು ಬರೆದು ಮಾದಪ್ಪನ ತೇರಿಗೆ ಎಸೆದು ಬೇಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್‌ ಆಗಿದೆ. ರಥೋತ್ಸವ ಸಂದರ್ಭ ತೇರಿಗೆ ಬಾಳೆ ಹಣ್ಣು ಎಸೆಯುವ ಸಂಪ್ರದಾಯ ಹಲವು ಕಡೆ ಇದೆ.

Follow Us:
Download App:
  • android
  • ios