Asianet Suvarna News Asianet Suvarna News

ರಾಮನಗರದ ಪೊಲೀಸರ ದರ್ಪ : ಅಸ್ವಸ್ಥ ತಾಯಿ ಬೈಕಲ್ಲಿ ಕರೆದೊಯ್ಯುತ್ತಿದ್ದವಗೆ ಏಟು

  •  ಉಸಿ​ರಾಟ ಸಮ​ಸ್ಯೆ​ಯಿಂದ ಬಳ​ಲು​ತ್ತಿದ್ದ ತಾಯಿ​
  • ದ್ವಿಚ​ಕ್ರ ವಾಹ​ನ​ದಲ್ಲಿ ಕರೆ​ದೊ​ಯ್ಯು​ತ್ತಿದ್ದ ಮಗ​ನನ್ನು ಅಡ್ಡ​ಗ​ಟ್ಟಿದ ಪೊಲೀ​ಸರು
  • ಮಗನೊಂದಿಗೆ ಪೊಲೀಸರ ಅಮಾ​ನ​ವೀ​ಯ​ ನಡೆ
Ramanagara Police inhuman behaviour With Youth snr
Author
Bengaluru, First Published May 9, 2021, 7:04 AM IST

ರಾಮ​ನ​ಗ​ರ (ಮೇ.09): ಉಸಿ​ರಾಟ ಸಮ​ಸ್ಯೆ​ಯಿಂದ ಬಳ​ಲು​ತ್ತಿದ್ದ ತಾಯಿ​ಯನ್ನು ದ್ವಿಚ​ಕ್ರ ವಾಹ​ನ​ದಲ್ಲಿ ಕರೆ​ದೊ​ಯ್ಯು​ತ್ತಿದ್ದ ಮಗ​ನನ್ನು ಪೊಲೀ​ಸರು ಅಡ್ಡ​ಗ​ಟ್ಟಿ​ದ್ದ​ಲ್ಲದೆ ಲಾಠಿ​ಯಲ್ಲಿ ಹೊಡೆದು ಅಮಾ​ನ​ವೀ​ಯ​ವಾಗಿ ನಡೆ​ದು​ಕೊಂಡಿ​ರುವ ಘಟನೆ ನಗ​ರ​ದಲ್ಲಿ ಶನಿ​ವಾರ ಜರು​ಗಿದೆ.

ನಗ​ರದ ಹನು​ಮಂತ​ರ​ನ​ಗರ ಬಡಾ​ವಣೆ ವಾಸಿ ನಾಗ​ರ​ತ್ನಮ್ಮ (71) ಅವ​ರಿಗೆ ಇದ್ದ​ಕ್ಕಿ​ದ್ದಂತೆ ಉಸಿ​ರಾ​ಟದ ಸಮಸ್ಯೆ ಕಾಣಿ​ಸಿ​ಕೊಂಡಿದೆ. ತಕ್ಷಣ ಪುತ್ರ ಕೆ.ಮ​ಹ​ದೇವ, ತಾಯಿ​ಯನ್ನು ದ್ವಿಚಕ್ರ ವಾಹ​ನ​ದಲ್ಲಿ ಖಾಸಗಿ ಆಸ್ಪ​ತ್ರೆಗೆ ಕರೆ​ದೊ​ಯ್ದಿ​ದ್ದಾ​ರೆ. ನಾಗ​ರ​ತ್ನಮ್ಮ ಅವ​ರನ್ನು ಪರೀ​ಕ್ಷಿ​ಸಿದ ವೈದ್ಯರು, ಆಕ್ಸಿ​ಜನ್‌ ಪ್ರಮಾಣ 71 ಇದ್ದು, ಆಮ್ಲ​ಜ​ನ​ಕದ ಅವ​ಶ್ಯ​ಕ​ತೆ​ಯಿದೆ. ಸರ್ಕಾರಿ ಆಸ್ಪ​ತ್ರೆಗೆ ಕರೆ​ದೊ​ಯ್ಯು​ವಂತೆ ಸಲಹೆ ನೀಡಿ​ದ್ದಾರೆ.

ಕನಕಪುರ: 38 ಮಕ್ಕಳಿಗೆ ವಕ್ಕರಿಸಿದ ಕೊರೋನಾ, ಜೈನ್‌ ಸ್ಕೂಲ್‌ ಸೀಲ್‌ಡೌನ್‌ ...

ಅದ​ರಂತೆ ಮಹ​ದೇ​ವ​ ಅವರು ತಾಯಿ​ಯನ್ನು ದ್ವಿಚಕ್ರ ವಾಹ​ನ​ದಲ್ಲೇ ಕೂರಿ​ಸಿ​ಕೊಂಡು ಜಿಲ್ಲಾ​ಸ್ಪತ್ರೆಗೆ ಕರೆ​ದೊ​ಯ್ಯುತ್ತಿದ್ದಾಗ ಐಜೂರು ರಸ್ತೆ​ಯ​ಲ್ಲಿನ ಚೆಕ್‌ ಪೋಸ್ಟ್‌ನಲ್ಲಿ ಪೊಲೀ​ಸರು ದ್ವಿಚಕ್ರ ವಾಹ​ನ​ವನ್ನು ಅಡ್ಡ​ಗ​ಟ್ಟಿ​ದ್ದಾರೆ. ಸ್ಥಳ​ದ​ಲ್ಲೇ ಇದ್ದ ಐಜೂರು ಪೊಲೀಸ್‌ ಠಾಣೆ ಸಬ್‌ ಇನ್ಸ್‌ ಪೆಕ್ಟರ್‌ ಶುಭಾಂಬಿಕಾ ದ್ವಿಚ​ಕ್ರ ವಾಹ​ನದ ಕೀ ಕಸಿ​ದು​ಕೊಂಡಿ​ದ್ದಾರೆ. ಇದೇ ಸಮ​ಯಕ್ಕೆ ನಾಗ​ರ​ತ್ನಮ್ಮ ಅವ​ರಿಗೆ ಸಂಬಂಧಿ​ಯಾ​ಗಿ​ರುವ ಪತ್ರ​ಕ​ರ್ತ​ರೊಬ್ಬರು ಸ್ಥಳಕ್ಕೆ ಬಂದಿ​ದ್ದಾರೆ. ನಾಗ​ರ​ತ್ನಮ್ಮ ಅವ​ರಿಗೆ ತುರ್ತು ಚಿಕಿತ್ಸೆ ಅಗ​ತ್ಯ​ವಿದ್ದು, ದ್ವಿಚಕ್ರ ವಾಹ​ನದ ಕೀ ನೀಡು​ವಂತೆ ಮಾಡಿದ ಮನ​ವಿಗೂ ಇನ್ಸ್‌ಪೆಕ್ಟರ್‌ ಕರ​ಗ​ಲಿ​ಲ್ಲ. ಲಾಠಿ​ಯಿಂದ ರುದ್ರೇ​ಶ್ವರ್‌ ಮತ್ತು ಮಹ​ದೇವ ಮೇಲೆ ಹಲ್ಲೆ ನಡೆ​ಸಿ ದರ್ಪ ಮೆರೆ​ದಿ​ದ್ದಾ​ರೆ.

ದಿನಸಿ-ತರಕಾರಿ ತರಲು ವಾಹನ ಬಳಸಂಗಿಲ್ಲ, ಮೇ.10ರಿಂದ ಕರ್ನಾಟಕ ಸಂಪೂರ್ಣ ಲಾಕ್‌ಡೌನ್ !

ನಂತರ ಸ್ಥಳ​ದ​ಲ್ಲಿದ್ದ ಪೊಲೀಸ್‌ ಸಿಬ್ಬಂದಿ ಮಧ್ಯ ಪ್ರವೇ​ಶಿಸಿ ನಾಗ​ರ​ತ್ನಮ್ಮ, ಮಹ​ದೇವ ಅವರು ಆಸ್ಪ​ತ್ರೆಗೆ ತೆರಳು ನೆರ​ವಾ​ದರು. ಜಿಲ್ಲಾ​ಸ್ಪ​ತ್ರೆ​ಯಲ್ಲಿ ಪ್ರಾಥ​ಮಿಕ ಚಿಕಿತ್ಸೆ ನಂತರ ನಾಗ​ರ​ತ್ನಮ್ಮ ಅವ​ರನ್ನು ರಾಜ​ರಾ​ಜೇ​ಶ್ವರಿ ಆಸ್ಪ​ತ್ರೆಗೆ ರವಾ​ನಿಸಿ ದಾಖಲು ಮಾಡ​ಲಾ​ಗಿ​ದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios