Asianet Suvarna News Asianet Suvarna News

ಕಲಬುರಗಿ: ಸಚಿವ ಸ್ಥಾನದಿಂದ ಡಾ. ಶರಣಪ್ರಕಾಶ ವಜಾಕ್ಕೆ ತೇಲ್ಕೂರ್‌ ಆಗ್ರಹ

ಬಿಜೆಪಿ ಕಾರ್ಯಕರ್ತನ ಕುಟುಂಬದ ಮೇಲೆ ಮಾರಣಾಂತಿಕವಾಗಿ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಇಂದಿಗೂ ಕಲಬುರಗಿ ಯುನೈಟೆಡ್ ಹಾಸ್ಪಿಟಲ್ ನಲ್ಲಿ ಹಲ್ಲೆಗೊಳಗಾದವರು ಚಿಕಿತ್ಸೆ ಪಡೆಯುತ್ತಿದ್ದು ಅವರ ಕುಟುಂಬದ. ಸದಸ್ಯ ಶಿವಕುಮಾರ ಪೂಜಾರಿ ಭಯಭೀತನಾಗಿ ಮಾನಸಿಕವಾಗಿ ಘಾಸಿಗೊಳಗಾಗಿ ಸಚಿವ ಶರಣಪ್ರಕಾಶ ಪಾಟೀಲ ಅವರ ಭಯದಿಂದ ಆಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತೇಲ್ಕೂರ್‌ ದೂರಿದ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌

Rajkumar Patil Telkur Demand for position of minister dismissal of Saranaprakash Patil grg
Author
First Published Oct 20, 2023, 2:00 AM IST

ಕಲಬುರಗಿ(ಅ.20):  ಶಿರೋಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್‌ ಪೂಜಾರಿ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಪ್ರಸ್ತಾಪವಾಗಿರುವ ರಾಜ್ಯ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವರನ್ನು ಸಂಪುಟದಿಂದ ವಜಾ ಮಾಡಿ ಸದರಿ ಪ್ರಕರಣದ ಪಾರದರ್ಶಕ ತನಿಖೆ ನಡೆಸುವಂತೆ ಸರಕಾರವನ್ನು ಮಾಜಿ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ಆಗ್ರಹಿಸಿದ್ದಾರೆ.

ಹೇಳಿಕೆ ನೀಡಿರುವ ಅವರು ಬಿಜೆಪಿ ಕಾರ್ಯಕರ್ತನ ಕುಟುಂಬದ ಮೇಲೆ ಮಾರಣಾಂತಿಕವಾಗಿ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಇಂದಿಗೂ ಕಲಬುರಗಿ ಯುನೈಟೆಡ್ ಹಾಸ್ಪಿಟಲ್ ನಲ್ಲಿ ಹಲ್ಲೆಗೊಳಗಾದವರು ಚಿಕಿತ್ಸೆ ಪಡೆಯುತ್ತಿದ್ದು ಅವರ ಕುಟುಂಬದ. ಸದಸ್ಯ ಶಿವಕುಮಾರ ಪೂಜಾರಿ ಭಯಭೀತನಾಗಿ ಮಾನಸಿಕವಾಗಿ ಘಾಸಿಗೊಳಗಾಗಿ ಸಚಿವ ಶರಣಪ್ರಕಾಶ ಪಾಟೀಲ ಅವರ ಭಯದಿಂದ ಆಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತೇಲ್ಕೂರ್‌ ದೂರಿದ್ದಾರೆ.

ಗುಲ್ಬರ್ಗ ವಿವಿ 8 ವಿಭಾಗಗಳಲ್ಲಿ ಸಂಶೋಧನೆ ಬಂದ್‌..!

ಆಡಿಯೋದಲ್ಲಿ ನನ್ನ ಸಾವಿಗೆ ಡಾ ಶರಣಪ್ರಕಾಶ ಪಾಟೀಲ ಅವರ ಕಿರುಕುಳವೆ ಕಾರಣ ಅವರಿಗೆ ನಿಷ್ಠಾವಂತ ಬಿಜೆಪಿ ಕಾಯಕರ್ತರು ಹಿಂದುತ್ವ ಅಂದರೆ ಎಲ್ಲಿಲದ ಕೋಪ ಬರುತ್ತದೆ ಅಂತ ಆಡಿಯೋದಲ್ಲಿ ತಿಳಿಸಿದ್ದಾರೆ, ಹಾಗೂ ನನ್ನ ಸಾವಿಗೆ
ಡಾ ಶರಣಪ್ರಕಾಶ ಪಾಟೀಲ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಬೇಕು ಅವರನ್ನು ಪ್ರಮುಖ ಆರೋಪಿಯಾಗಿ ಮಾಡಿ ನನ್ನ ಸಾವಿಗೆ ನ್ಯಾಯ ಕೊಡಿಸಬೇಕು ಅಂತ ಕೇಳಿಕೊಂಡು ಸಾವಿಗೆ ಶರಣಾಗಿದ್ದಾನೆ. ಮುಂದೆ ನನ್ನ ಸಾವು ಕೊನೆಯಾಗಲಿ ಮುಂದೆ ಬಿಜೆಪಿ ಕಾರ್ಯಕರ್ತರ ಹಲ್ಲೆ ಸಾವು ಕೊನೆಯಾಗಲಿ ತಪ್ಪಿಸ್ಥರಿಗೆ ಶಿಕ್ಷೆಯಾಗಲಿ ಅಂತ ಹೇಳಿದ್ದಾನೆ.

ಹಿಗೆ ಇನ್ನೂ ಹತ್ತು ಹಲವಾರು ದಿನ ಬೆಳಗಾದರೆ ಕಾಂಗ್ರೆಸ್ ನವರ ದೌರ್ಜನ್ಯ. ದೌಲತ್ತು ಹೆಚ್ಚಾಗಿದ್ದು ಪೊಲೀಸ್‌ ಇಲಾಖೆ ಬಳಸಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕಲಾಗುತ್ತಿದೆ, ಇನ್ನೂ ಹಲವಾರು ಪ್ರಕರಣಗಳು ಪೊಲೀಸ್ ಸ್ಟೇಷನ್ ನಲ್ಲಿ ಮುಚ್ಚಿಹಾಕಲಾಗುತ್ತಿವೆ, ಅದ್ದರಿಂದ ತನಿಖೆ ಮುಗಿಯುವ ವರೆಗೆ ಸಾಕ್ಷಿ ನಾಶ ಆಗದಂತೆ ತನಿಖೆ ಕೈಗೊಂಡು ಸರಕಾರ ಸೇಡಂ ಶಾಸಕರು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಶರಣಪ್ರಕಾಶ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ತನಿಖೆಗೆ ಮುಕ್ಯ ಅವಕಾಶ ಕಲ್ಪಿಸಲಿ ಎಂದು ತೇಲ್ಕೂರ್‌ ಆಗ್ರಹಿಸಿದ್ದಾರೆ.

ಕಂಠಿ ಬಸವೇಶ್ವರ ದೇವಸ್ಥಾನದ ನಂದಿಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು

ಕಾಂಗ್ರೆಸ್ ಸರಕಾರ ಬಂದ ಮೇಲೆ ಸೇಡಂ ಕ್ಷೇತ್ರದಲ್ಲಿ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ದೌರ್ಜನ್ಯ ಮಾಡಿ ಜಾತಿ ನಿಂದನೆ, 307, ಪೋಸ್ಕೋ ಕೇಸ್ ಹಾಕಿ ಹತ್ತಿಕ್ಕಲಾಗುತ್ತಿದೆ ಎಂದೂ ತೇಲ್ಕೂರ್‌ ದೂರಿದ್ದಾರೆ.
ರಾಮತೀರ್ಥ ಗ್ರಾಮದಲ್ಲಿ ಬಿಜೆಪಿ ಮುಖಂಡ ಪ್ರಭುಲಿಂಗರಡ್ಡಿ ಅಪ್ರಾಪ್ತ ವಯಸ್ಕ ಮಗಳ ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿ ಪುನಃ ಹುಡಗಿ ತಂದೆ ಮೇಲೆ ಜಾತಿ ನಿಂದನೆ ಕೇಸ್ ಮತ್ತು ಫೋಸ್ಕೋ ದಾಖಲಿಸಲಾಗಿದೆ, ರುದನೂರ ಗ್ರಾಮದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ರುದನೂರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವರ ಮೇಲೆ ಕೇಸ್ 307 ಕೇಸ್ ಮಾಡಿಸಿದ್ದಾರೆ.

ಇನ್ನು ಮದನಾ ಗ್ರಾಪಂನಲ್ಲಿ ಅವವಹಾರ ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿ ಗ್ರಾಪಂ ಸದಸ್ಯರುಗಳ ಮೇಲೆ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಇವೆಲ್ಲದರ ಹಿಂದೆ ಕಾಂಗ್ರೆಸ್‌ ಪ್ರಭಾವಿಗಳ ಕೈವಾಡವಿದೆ ಎಂದೂ ತೇಲ್ಕೂರ್‌ ದೂರಿದ್ದಾರೆ.

Follow Us:
Download App:
  • android
  • ios