Asianet Suvarna News Asianet Suvarna News

'ಸಿದ್ಧರಾಮಯ್ಯ ವಿಪಕ್ಷ ನಾಯಕನಾದ್ರೆ ರಾಜ್ಯದ ಸಮಸ್ಯೆ ಪರಿಹಾರ'

ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಆದರೆ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದು ಮಾಜಿ ಸಚಿವ ಎನ್. ಚಲುವರಾಯ ಸ್ವಾಮಿ ಹೇಳಿದ್ದಾರೆ. ಅವರಿಗೆ ಎಲ್ಲ​ರನ್ನೂ ವಿಶ್ವಾ​ಸಕ್ಕೆ ತೆಗೆ​ದು​ಕೊಂಡು ಹೋಗುವ ಶಕ್ತಿ ಮತ್ತು ಎದೆ​ಗಾ​ರಿಕೆ ಇದೆ. ಭವಿ​ಷ್ಯ​ದಲ್ಲಿ ಕಾಂಗ್ರೆಸ್‌ ಪಕ್ಷದ ಸಂಘ​ಟ​ನೆಗೆ ಹೆಚ್ಚಿನ ಅನು​ಕೂ​ಲ​ವಾ​ಗ​ಲಿದೆ ಎಂದಿದ್ದಾರೆ.

problems will be solved if siddaramaiah elected as opposition leader
Author
Bangalore, First Published Oct 7, 2019, 11:34 AM IST

ಮಂಡ್ಯ(ಅ.07): ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವ​ರನ್ನು ವಿರೋಧ ಪಕ್ಷದ ನಾಯ​ಕ​ರ​ನ್ನಾಗಿ ಆಯ್ಕೆ ಮಾಡಿ​ದಲ್ಲಿ ರಾಜ್ಯದ ಸಮ​ಸ್ಯೆ​ಗ​ಳಿಗೆ ಪರಿ​ಹಾರ ಸಾಧ್ಯ ಎಂದು ಮಾಜಿ ಸಚಿ​ವ ಎನ್‌.ಚಲು​ವ​ರಾ​ಯ​ಸ್ವಾಮಿ ಭಾನು​ವಾರ ಮದ್ದೂರಿನಲ್ಲಿ ಹೇಳಿದ್ದಾರೆ.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ವರಿ​ಷ್ಠರು ಸಿದ್ದ​ರಾ​ಮಯ್ಯ ಅವ​ರಿಗೆ ಸಾಮೂ​ಹಿಕ ನಾಯ​ಕ​ತ್ವದ ಜವಾ​ಬ್ದಾರಿ ನೀಡ​ಬೇಕು. ಅವರಿಗೆ ಎಲ್ಲ​ರನ್ನೂ ವಿಶ್ವಾ​ಸಕ್ಕೆ ತೆಗೆ​ದು​ಕೊಂಡು ಹೋಗುವ ಶಕ್ತಿ ಮತ್ತು ಎದೆ​ಗಾ​ರಿಕೆ ಇದೆ. ಭವಿ​ಷ್ಯ​ದಲ್ಲಿ ಕಾಂಗ್ರೆಸ್‌ ಪಕ್ಷದ ಸಂಘ​ಟ​ನೆಗೆ ಹೆಚ್ಚಿನ ಅನು​ಕೂ​ಲ​ವಾ​ಗ​ಲಿದೆ ಎಂದಿದ್ದಾರೆ.

ದಸರಾ ಉದ್ಯೋಗ ಮೇಳದಲ್ಲಿ 49 ಜನಕ್ಕೆ ಕೆಲಸ

ಪ್ರಸ್ತುತ ಪರಿ​ಸ್ಥಿ​ತಿ​ಯ​ಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಿದ್ದ​ರಾ​ಮಯ್ಯ ಅನಿ​ವಾರ‍್ಯ. ಅವರು ವಿರೋಧ ಪಕ್ಷದ ನಾಯ​ಕ​ರಾಗಿ ಆಯ್ಕೆ​ಯಾ​ಗು​ವು​ದ​ರಿಂದ ರಾಜ್ಯದ ರೈತರು ಮತ್ತು ಜನ​ಸಾ​ಮಾ​ನ್ಯರ ಸಮ​ಸ್ಯೆ​ಗ​ಳಿಗೆ ಸದ​ನ​ದಲ್ಲಿ ಹೋರಾಟ ನಡೆ​ಸ​ಲಿ​ದ್ದಾರೆ ಎಂದು ಅಭಿ​ಪ್ರಾ​ಯ​ಪ​ಟ್ಟರು. ಕಾಂಗ್ರೆಸ್‌ ಪಕ್ಷದ ಹಿರಿಯ ನಾಯ​ಕ​ರಾದ ಮಲ್ಲಿ​ಕಾರ್ಜುನ ಖರ್ಗೆ ಸೇರಿ​ದಂತೆ ಪಕ್ಷದ ಹಿರಿಯ ನಾಯ​ಕ​ರು​ಗಳು ಒಂದೆಡೆ ಕಲೆತು ಸಣ್ಣ ಪುಟ್ಟಭಿನ್ನಾ​ಭಿ​ಪ್ರಾ​ಯ​ಗ​ಳನ್ನು ಮಾತು​ಕತೆ ಮೂಲಕ ಬಗೆ​ಹ​ರಿ​ಸಿ​ಕೊ​ಳ್ಳ​ಬೇಕು ಎಂದಿದ್ದಾರೆ.

ಅನುಕಂಪ ಗಿಟ್ಟಿಸೋದು ಇನ್ನಾದ್ರು ಬಿಡಿ: ಎಚ್‌ಡಿಕೆ ನಡೆಗೆ ಚೆಲುವರಾಯಸ್ವಾಮಿ ಕಿಡಿ

ಈ ಬಗ್ಗೆ ಹೈಕ​ಮಾಂಡ್‌ ಸಿದ್ದ​ರಾ​ಮಯ್ಯ ಅವರನ್ನು ಸಾಮೂ​ಹಿಕ ನಾಯ​ಕ​ತ್ವ​ದ​ಲ್ಲಿ ಹೋಗು​ವಂತೆ ನಿರ್ದೇಶನ ನೀಡ​ಬೇಕು ಎಂದು ಒತ್ತಾ​ಯಿ​ಸಿ​ದರು. ಮುಂದಿನ ದಿನ​ಗ​ಳಲ್ಲಿ ವಿಧಾನ ಸಭೆ ಸಾರ್ವತ್ರಿಕ ಚುನಾ​ವಣೆ ಎದು​ರಾ​ಗ​ಲಿ​ರುವ ಸಾಧ್ಯತೆ ಇದೆ. ಸಿದ್ದ​ರಾ​ಮ​ಯ್ಯ​​ರಿಗೆ ವಿರೋಧ ಪಕ್ಷದ ನಾಯ​ಕ​ರ​ನ್ನಾಗಿ ಆಯ್ಕೆ ಮಾಡು​ವುದು ಸೂಕ್ತ ಎಂದು ಮಾಜಿ ಸಚಿವ ಚಲು​ವ​ರಾ​ಯ​ಸ್ವಾಮಿ ಮನವಿ ಮಾಡಿ​ದರು.

ಮಂಡ್ಯ: 'ಮೋದಿ- ಬಿಎಸ್‌ವೈ ಸಂಬಂಧ ಹಳಸಿದೆ'..!

Follow Us:
Download App:
  • android
  • ios