ಪರವಾನಗಿಯಿಲ್ಲದೆ ಪಾರ್ಟಿ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿರುವ ಉತ್ತರ ಕನ್ನಡ ಪೊಲೀಸರು ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ.

ಕಾರವಾರ[ಫೆ.17] ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ಪರವಾನಗಿ ಇಲ್ಲದೆ ವಿದೇಶಿಗರು ನಡೆಸುತ್ತಿದ್ದ ಪಾರ್ಟಿಯ ಮೇಲೆ‌ ಪೊಲೀಸರು ದಾಳಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಡ್ಲೆ ಕಡಲ ತೀರದ ರೆಗ್ಯೂಲಸ್ ರೆಸಾರ್ಟ್ ಹಾಗೂ ಅರಣ್ಯವೊಂದರಲ್ಲಿ ಪಾರ್ಟಿ ನಡೆಸಲಾಗುತಿತ್ತು. ಈ ಪಾರ್ಟಿಯಲ್ಲಿ ಮಾದಕದ್ರವ್ಯ ಹಾಗೂ ಮಾದಕ ವಸ್ತುಗಳನ್ನ ಬಳಸಲಾಗಿತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ಅರಣ್ಯದಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮಾದಕವಸ್ತುಗಳಾದ ಚರಸ್ ಇಟ್ಟುಕೊಂಡಿದ್ದ ಇಬ್ಬರು ಇಸ್ರೇಲ್ ಮೂಲದವರನ್ನು ಬಂಧಿಸಲಾಗಿದೆ.

ಶಿಶ್ನದ ಮುಂದೊಗಲಿನ ಹಿಂದಿತ್ತು ಡ್ರಗ್ಸ್..

ಇನ್ನು ಎರಡು ಕಡೆ ಪಾರ್ಟಿಯಲ್ಲಿ ಬಳಸಿದ್ದ ಮದ್ಯ, ಅನುಮತಿ ಪಡೆಯದ ಹಿನ್ನಲೆಯಲ್ಲಿ ಸೌಂಡ್ ಸಿಸ್ಟಮ್ ಗಳನ್ನ ವಶಕ್ಕೆ ಸಹ ಪಡೆಯಲಾಗಿದೆ.