*  ಬೆಳಗ್ಗೆ 9ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್‌ ವ್ಯತ್ಯಯ*  ಕುಂಬಳಗೋಡು ವಿದ್ಯುತ್‌ ಉಪಸ್ಥಾವರದಲ್ಲಿ ತುರ್ತು ಕಾಮಗಾರಿ *  ವಿದ್ಯುತ್‌ ಸಂಬಂಧಿತ ದೂರುಗಳಿಗಾಗಿ 1912 ಸಂಪರ್ಕಿಸಬಹುದು 

ಬೆಂಗಳೂರು(ಜೂ.26):  ಕುಂಬಳಗೋಡು ವಿದ್ಯುತ್‌ ಉಪಸ್ಥಾವರದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಜೂನ್‌ 26ರಂದು (ಭಾನುವಾರ) ಬೆಳಗ್ಗೆ 9ರಿಂದ ಮಧ್ಯಾಹ್ನ 3 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಅಂಚೆಪಾಳ್ಯ, ಕುಂಬಳಗೋಡು ಕೈಗಾರಿಕಾ ಪ್ರದೇಶ, ಮೈಸೂರು ಮುಖ್ಯ ರಸ್ತೆ, ಹೊಸಪಾಳ್ಯ, ಗೋಣಿಪುರ, ವಿಲೇಜ್‌ ತಿಟ್ಟಹಳ್ಳಿ, ಗೊಲ್ಲಹಳ್ಳಿ, ಚಿನಕುರ್ಚಿ ತಿಪ್ಪೂರು, ಸೀಗೆಹಳ್ಳಿ, ಲಿಂಗಾಪುರ, ಬಿ.ಎಂ.ಕಾವಲ್‌, ಗಂಗಸಂದ್ರ, ಪಟಾಲಮ್ಮ ದೊಡ್ಡಿ, ಪ್ರಾವಿಡೆಂಟ್‌ ಅಪಾಟ್ರ್ಮೆಂಟ್‌, ಬ್ರಿಗೇಡ್‌ ಪನೋರಮ ಅಪಾಟ್ರ್ಮೆಂಟ್‌, ದೊಡ್ಡಬೆಲೆ ರಸ್ತೆ, ತಗಚಗುಪ್ಪೆ, ಕಂಬೀಪುರ, ಕಾರಬೆಲೆ, ಭೀಮನಕುಪ್ಪೆ, ಗೇರುಪಾಳ್ಯ ಇಂಡಸ್ಟ್ರಿಯಲ್‌ ಏರಿಯಾ, ವಿನಾಯಕ ನಗರ, ಡಿಎಸ್‌ ಪಾಳ್ಯ, ಶ್ರೀರಾಮ ಲೇಔಟ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತವಾಗಲಿದೆ. 

Subsidy Electricity: ಕಾಫಿ ಬೆಳೆಗಾರಿಗೂ ಸಬ್ಸಿಡಿ ವಿದ್ಯುತ್‌: ಸಿಎಂ ಬೊಮ್ಮಾಯಿ

ವಿದ್ಯುತ್‌ ಸಂಬಂಧಿತ ದೂರುಗಳಿಗಾಗಿ 1912 ಸಂಪರ್ಕಿಸಬಹುದು ಎಂದು ಬೆಸ್ಕಾಂ ಪಶ್ಚಿಮ ವೃತ್ತ ಪ್ರಕಟಣೆಯಲ್ಲಿ ತಿಳಿಸಿದೆ.