Asianet Suvarna News Asianet Suvarna News

ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಗಳಾಗುತ್ತಾರೆ : ಭವಿಷ್ಯ ನುಡಿದ ಸ್ವಾಮೀಜಿ

ಮಾಜಿ ಸಚಿವ ಡಿಕೆ ಶಿವಕುಮಾರ್ ರಾಜಕೀಯ ಜೀವನದ ಬಗ್ಗೆ ನಿರ್ಮಲಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಮುಖ್ಯಮಂತ್ರಿ ಹುದ್ದೆಗೆ ಏರುತ್ತಾರೆ ಎಂದು ಹೇಳಿದ್ದಾರೆ. 

Nirmalananda Swamiji Predicts over DK Shivakumar Political Life
Author
Bengaluru, First Published Dec 26, 2019, 2:57 PM IST

ರಾಮ​ನ​ಗ​ರ [ಡಿ.26]: ರಾಮನಗರ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಿರ್ಮಿಸಲಾಗಿರುವ ‘ಒಕ್ಕಲಿಗ ಭವನ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಚುಂಚ​ನ​ಗಿರಿ ಮಠಾ​ಧೀಶ ನಿರ್ಮ​ಲಾ​ನಂದನಾಥ ಸ್ವಾಮೀಜಿ ಹಾಗೂ ಸ್ಫಟಿ​ಕ​ಪುರಿ ಮಹಾ ಸಂಸ್ಥಾ​ನ​ಮ​ಠದ ನಂಜಾ​ವ​ಧೂತ ಸ್ವಾಮೀಜಿ ಅವರು ಮಾಜಿ ಸಚಿವ ಡಿ.ಕೆ. ​ಶಿ​ವ​ಕು​ಮಾರ್‌ ಮುಖ್ಯ​ಮಂತ್ರಿ ಗದ್ದುಗೆ ಅಲಂಕ​ರಿ​ಸಲಿ ಎಂದು ಶುಭ ಹಾರೈ​ಸಿ​ದರು.

ನಿರ್ಮ​ಲಾ​ನಂದನಾಥ ಸ್ವಾಮೀಜಿ ಮಾತ​ನಾಡಿ, ರಾಮ​ನ​ಗರ ಜಿಲ್ಲೆ​ಯಿಂದ ಕೆಂಗಲ್‌ ಹನು​ಮಂತಯ್ಯ, ಎಚ್‌.ಡಿ. ​ದೇ​ವೇ​ಗೌಡ ಹಾಗೂ ಎಚ್‌.ಡಿ. ​ಕು​ಮಾ​ರ​ಸ್ವಾಮಿ ಮುಖ್ಯ​ಮಂತ್ರಿ ಆಗಿ​ದ್ದಾರೆ. ಮುಂದೆ ಡಿ.ಕೆ. ​ಶಿ​ವ​ಕು​ಮಾರ್‌ ಅವರು ಮುಖ್ಯ​ಮಂತ್ರಿ​ಗ​ಳಾ​ಗು​ತ್ತಾರೆ. ಮುಂದೆ ಅವ​ರಿಗೆ ಏನೇನು ಬಾಕಿ ಇದೆಯೋ ಅದೆ​ಲ್ಲವು ಸಿಗ​ಲಿ​ದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಂಜಾ​ವ​ಧೂತ ಸ್ವಾಮೀಜಿ ಮಾತ​ನಾಡಿ, ಡಿ.ಕೆ. ​ಶಿ​ವ​ಕು​ಮಾರ್‌ ಒಬ್ಬ ವ್ಯಕ್ತಿ​ಯಾಗಿಲ್ಲ, ಶಕ್ತಿ​ಯಾ​ಗಿ​ದ್ದಾರೆ. ಕುಮಾ​ರ​ಸ್ವಾಮಿ ಅವ​ರನ್ನು ಎರ​ಡನೇ ಬಾರಿಗೆ ಮುಖ್ಯ​ಮಂತ್ರಿ ಮಾಡಲು ಡಿ.ಕೆ. ​ಶಿ​ವ​ಕು​ಮಾರ್‌ ಪಟ್ಟಪರಿ​ಶ್ರಮ ಎಲ್ಲ​ರಿಗೂ ಗೊತ್ತಿದೆ. ಕುಮಾ​ರ​ಸ್ವಾ​ಮಿ​ರ​ವರು ಡಿ.ಕೆ. ​ಶಿ​ವ​ಕು​ಮಾರ್‌ ಅವ​ರನ್ನು ಮುಖ್ಯ​ಮಂತ್ರಿ ಮಾಡು​ತ್ತಾರೊ ಅಥವಾ ಡಿ.ಕೆ.​ ಶಿ​ವ​ಕು​ಮಾರ್‌, ಕುಮಾ​ರ​ಸ್ವಾಮಿ ಅವ​ರನ್ನು ಮತ್ತೆ ಮುಖ್ಯ​ಮಂತ್ರಿ ಮಾಡಿ ಆನಂತರ ಮುಖ್ಯ​ಮಂತ್ರಿ​ಯಾ​ಗು​ತ್ತಾರೊ ಗೊತ್ತಿಲ್ಲ ಎಂದು ಹೇಳಿ​ದರು.

Follow Us:
Download App:
  • android
  • ios