Asianet Suvarna News Asianet Suvarna News

ಕಿ.ಮೀ ದೂರ ನಡೆದೇ ಸಾಗಿದ ನಿಖಿಲ್ : ಬಿರುಸುಗೊಂಡ ಚಟುವಟಿಕೆ

ನಿಖಿಲ್ ಕುಮಾರಸ್ವಾಮಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ನಡೆದುಕೊಂಡೇ ಹೋಗಿದ್ದಾರೆ

nikhil Kumaraswamy Visits Kanakapura Villages snr
Author
Bengaluru, First Published Nov 11, 2020, 7:04 AM IST

ಕನಕಪುರ (ನ.11):  ತಾಲೂಕಿನ ಮರಳವಾಡಿ ಹೋಬಳಿಯ ವಿವಿಧ ಹಳ್ಳಿಗಳಿಗೆ ಜೆಡಿಎಸ್‌ ಯುವ ಘಟಕದ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ​ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರದ ಭರವಸೆ ನೀಡಿದರು.

ಶಿವನಹಳ್ಳಿದೊಡ್ಡಿ ಗ್ರಾಮದಲ್ಲಿ ಅರ್ಧಕ್ಕೆ ನಿಂತಿ​ರುವ ಸೇತುವೆ ಕಾಮ​ಗಾರಿ ವೀಕ್ಷಿಸಿದ ನಿಖಿಲ್‌ ಅವ​ರು, ಆದಷ್ಟುಬೇಗ ಸೇತುವೆ ನಿರ್ಮಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿ​ಕೊ​ಡು​ವು​ದಾಗಿ ತಿಳಿ​ಸಿ​ದರು.

 ಸೇತುವೆ ಬಳಿ ಭೇಟಿ ನೀಡಿದ ನಿಖಿಲ್ ಅವರನ್ನು ಗ್ರಾಮಸ್ಥರು ಗ್ರಾಮಕ್ಕೆ ಭೇಟಿ ನೀಡಬೇಕೆಂದು ಪಟ್ಟುಹಿಡಿದು ನಾವು ದಿನನಿತ್ಯ ಪಡುವ ಕಷ್ಟವನ್ನು ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.

ಜನರ ಮನವಿಗೆ ಸ್ಪಂದಿಸಿದ ನಿಖಿಲ್ ಹಳ್ಳವನ್ನು ದಾಟಿ ಸುಮಾರು 1 ಕಿ.ಮೀ. ನಡೆದುಕೊಂಡು ಹೋಗಿ ಗ್ರಾಮದ ಜನರ ಸಮಸ್ಯೆ ಆಲಿಸಿ ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

Follow Us:
Download App:
  • android
  • ios