ದೇಹದಾನ ಮಾಡಿದ ಹಿನ್ನೆಲೆಯಲ್ಲಿ ರಿಮ್ಸ್‌ ಆಸ್ಪತ್ರೆಯ ಸಿಬ್ಬಂದಿ ಆಗಮಿಸಿ ನಾಗವೇಣಿ ಅವರ ಮೃತದೇಹವನ್ನು ಆಸ್ಪತ್ರೆ ವಶಕ್ಕೆ ಪಡೆದರು.

ಸಿಂಧನೂರು(ಜೂ.22): ಕಳೆದ ಹತ್ತು ವರ್ಷದ ಹಿಂದೆಯೇ ರಿಮ್ಸ್‌ ಆಸ್ಪತ್ರೆಗೆ ದೇಹದಾನ ಮಾಡುವ ಮೂಲಕ ತಾಲೂಕಿನ ವೈದ್ಯಕೀಯ ವಲಯದಲ್ಲಿ ಮೆಚ್ಚುಗೆ ಗಳಿಸಿದ್ದ ನಾಗವೇಣಿ ಅಮರೇಶಪ್ಪ ಮೈಲಾರ (58) ಬುಧವಾರ ಬೆಳಗಿನ ಜಾವ 4 ಗಂಟೆಗೆ ನಿಧನರಾದರು. 

Add Asianetnews Kannada as a Preferred SourcegooglePreferred

ಮೃತರು ಪತಿ ಅಮರೇಶಪ್ಪ ಮೈಲಾರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಾಗವೇಣಿ ಅವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ನಗರದ ಗಣ್ಯರು, ಮೈಲಾರ ಅವರ ಸ್ನೇಹಿತರು, ವಿವಿಧ ಪಕ್ಷಗಳ ಮುಖಂಡರು ಅವರ ನಿವಾಸಕ್ಕೆ ತೆರಳಿ ಕಂಬನಿ ಮಿಡಿದರು. 

ಮಗನ ಸಾವಿನ ದುಃಖದಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

ದೇಹದಾನ ಮಾಡಿದ ಹಿನ್ನೆಲೆಯಲ್ಲಿ ರಿಮ್ಸ್‌ ಆಸ್ಪತ್ರೆಯ ಸಿಬ್ಬಂದಿ ಆಗಮಿಸಿ ನಾಗವೇಣಿ ಅವರ ಮೃತದೇಹವನ್ನು ಆಸ್ಪತ್ರೆ ವಶಕ್ಕೆ ಪಡೆದರು.