Asianet Suvarna News Asianet Suvarna News

ಪ್ರತಾಪ್ ಸಿಂಹ VS ಪ್ರಕಾಶ್ ರೈ, ಒಂದು ರೂಪಾಯಿ ಕೇಸ್  ಹಾಕಿದ ಅಸಲಿ ಕಾರಣ

ಸಂಸದ ಪ್ರತಾಪ್ ಸಿಂಹ ಮತ್ತು ಪ್ರಕಾಶ್ ರಾಜ್ ನಡುವಿನ ಕಿತ್ತಾಟ ನ್ಯಾಯಾಲಯದ ಮೆಟ್ಟಿಲು ಏರಿದ್ದು  ನಂತರ ಕೋರ್ಟ್  ಪ್ರತಾಪ್ ಸಿಂಹ ಅವರಿಗೆ ವಾರೆಂಟ್ ಸಹ ಜಾರಿ ಮಾಡಿತ್ತು. ಈಗ ಪ್ರತಾಪ್ ಸಿಂಹ ಪ್ರತಿಕ್ರೆಯೆ ಒಂದನ್ನು ನೀಡಿದ್ದಾರೆ.

Mysuru MP Pratap Simha Reaction on Prakash Raj defamation case Warrant
Author
Bengaluru, First Published Feb 25, 2019, 6:55 PM IST

ಮೈಸೂರು[ಫೆ. 25]  ಸಂಸದ ಪ್ರತಾಪ್ ಸಿಂಹ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ವಾರೆಂಟ್ ನೀಡಿತ್ತು.  ಈ ಬಗ್ಗೆ ಪ್ರತಾಪ್ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.

ನಟ ಪ್ರಕಾಶ್ ರೈ ಹಾಕಿರೋ ಕೇಸ್ ಟೊಳ್ಳು ಕೇಸ್.  ನಮ್ಮ ಕಚೇರಿಗೆ ಸಮನ್ಸ್ ಬಂದಿದೆ , ಅದನ್ನು ಕಚೇರಿ ಸಿಬ್ಬಂದಿ ರಿಸೀವ್ ಮಾಡಿದ್ದಾರೆ. ಆದ್ರೆ ನನ್ನ ಗಮನಕ್ಕೆ ಬಂದಿರಲಿಲ್ಲ, ಹೀಗಾಗಿ ನಾನು ಕೂಡ ಹಾಜರಾಗಿಲ್ಲ. ಆ ಕೇಸ್ ನಿಲ್ಲೊದಿಲ್ಲ, ಅದ್ರಲ್ಲಿ ಯಾವುದೇ ಹುರುಳಿಲ್ಲ. ನಾನು ಮತ್ತೆ ಆ ಕೇಸ್ ರೀ ಕಾಲ್ ಮಾಡಿಸುತ್ತೇನೆ ಎಂದಿದ್ದಾರೆ.

 

ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ವಾರೆಂಟ್​ ಜಾರಿ

ಕೇವಲ ಪ್ರಚಾರಕ್ಕೆ ಪ್ರಕಾಶ್ ರೈ ಕೇಸ್ ಹಾಕಿದ್ದಾರೆ ಅಷ್ಟೇ. ಮಾರ್ಚ್ 19 ಕ್ಕೆ ನಾನು ಜನಪ್ರತಿನಿಗಳ ನ್ಯಾಯಾಲಕ್ಕೆ ಕೇಸ್ ಸಂಬಂಧ ಹಾಜರಾಗ್ತೀನಿ. ನಾನು ಸಾಮಾಜಿಕ ಜಾಲತಾಣದಲ್ಲಿ ಆ ಪೋಸ್ಟ್ ಶೇರ್ ಮಾಡಿದ್ದೆ ಅಷ್ಟೇ. ಹೀಗೆ ನೋಡಿದ್ರೆ ಆ ಬರವಣಿಗೆ ಬರದವರ ಮೇಲೆ ಕೇಸ್ ಹಾಕಬಹುದಿತ್ತು ಎಂದರು.

ಜನಸಾಮಾನ್ಯ ಮಾಡೋ ತರ ನಾನ್ ಶೇರ್ ಮಾಡಿದ್ದಕ್ಕೆ ನನ್ನ ಮೇಲೆ 1 ರೂಪಾಯಿಗೆ ರೈ ಕೇಸ್ ಹಾಕಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

Follow Us:
Download App:
  • android
  • ios