ಮನೆಯಲ್ಲಿ ಮಗುವಿನ ಶವವಿದ್ದರೂ ರೋಗಿ ಉಳಿಸಲು ಹೋದ ಆಂಬುಲೆನ್ಸ್ ಚಾಲಕ
- ಮಗು ಸತ್ತರೂ ಕರ್ತವ್ಯ ಪ್ರಜ್ಜೆ ಮೆರೆದ ಆಂಬುಲೆನ್ಸ್ ಚಾಲಕ
- ರೋಗಿಯ ಪ್ರಾಣ ಉಳಿಸಲು ತೆರಳಿದ ಆಂಬುಲೆನ್ಸ್ ಚಾಲಕ
- ಚಾಲಕನ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ಮಹಾಪೂರ
ಮೈಸೂರು (ಜೂ.15): ಮನೆಯಲ್ಲಿ ಮಗನ ಶವ ಇಟ್ಟು ಆಂಬುಲೆನ್ಸ್ ಚಾಲಕ ರೊರ್ವರು ಕರ್ತವ್ಯಕ್ಕೆ ಓಗೊಟ್ಟು ತೆರಳಿದ ಘಟನೆ ಮೈಸೂರಲ್ಲಿ ನಡೆದಿದೆ.
ಮೈಮೆಲೆ ಬಿಸಿನೀರು ಚೆಲ್ಲಿಕೊಂಡು ಮಗು ಮೃತಪಟ್ಟಿದ್ದು, ಬಿಜೆಪಿ ಕೊವಿಡ್ ಸಹಾಯವಾಣಿ ಚಾಲಕ ಮುಬಾರಕ್ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಝೀರೋ ಟ್ರಾಫಿಕ್: ಶಸ್ತ್ರಚಿಕಿತ್ಸೆಗಾಗಿ ಹಸುಳೆ ಮಂಗ್ಳೂರಿಂದ ಬೆಂಗ್ಳೂರಿಗೆ .
ಸೋಮವಾರ ತಡರಾತ್ರಿ ಸಹಾಯವಾಣಿಗೆ ಕರೆ ಬಂದಾಗ ಚಾಮರಾಜನಗರದ ಸಿಗ್ಮಾ ಆಸ್ಪತ್ರೆಗೆ ರೋಗಿ ರವಾನಿಸಿದ್ದಾರೆ. ಮಗು ಕಳೆದುಕೊಂಡ ನೋವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ತಮ್ಮದೇ ಮಗು ಮೃತಪಟ್ಟು ಶವ ಮನೆಯಲ್ಲಿದ್ದರೂ ರೋಗಿಯ ನೆರವಿಗೆ ಧಾವಿಸಿದ ಮುಬಾರಕ್ ಸೇವೆಗೆಇದೀಗ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.