ನ್ಯಾಯಾಧೀಶರನ್ನು ವರ್ಗಾಹಿಸುವಂತೆ ಕೋರಿ ಉಚ್ಛ ನ್ಯಾಯಾಲಯದಲ್ಲಿ ದೂರು! ಮೈಸೂರಿನ ಜಿಲ್ಲಾ ನ್ಯಾಯಾಧೀಶೆಯನ್ನು ವರ್ಗಾಯಿಸುವಂತೆ ಉಚ್ಚ ನ್ಯಾಯಾಧೀಶರ ಮೊರೆ ಹೋದ ಮೈಸೂರು ವಕೀಲರ ಸಂಘ.
ಮೈಸೂರು,[ಫೆ.07]: ಮೈಸೂರಿನ ಜಿಲ್ಲಾ ನ್ಯಾಯಾಧೀಶೆಯನ್ನು ವರ್ಗಾಯಿಸುವಂತೆ ಇಲ್ಲಿನ ಸ್ಥಳೀಯ ವಕೀಲ ಸಂಘ ಹೈಕೋರ್ಟ್ ಮೆಟ್ಟಿಲೇರಿದೆ.
ಮೈಸೂರಿನ ಒಂದನೇ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಶಾಂತಿ ಅವರು ವಕೀಲರನ್ನ ಗೌರವಿಸುವುದಿಲ್ಲ, ಕಕ್ಷಿದಾರರೇ ವಾದ ಮಾಡಿ ಎಂದು ಮೈಸೂರು ವಕೀಲರ ಸಂಘ ಈ ಹಿಂದೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಿಗೆ ದೂರು ನೀಡಿಲಾಗಿತ್ತು.
ಬಳಿಕ ಕೆಲ ದಿನಗಳು ಮಾತ್ರ ಸುಗಮ ಕಲಾಪ ನಡೆದಿತ್ತು.ಇದೀಗ ಮತ್ತೆ ವಕೀಲರು ಕೆಲಸ ನಿರ್ವಹಿಸಲು ತೊಂದರೆ ಕೊಡುತ್ತಿದ್ದಾರೆಂದು ದೂರು ಉಚ್ಛ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದಾರೆ.
ನ್ಯಾಯಾಧೀಶೆಯನ್ನ ವರ್ಗಾವಣೆ ಮಾಡಬೇಕು. ಜತೆಗೆ ಮೈಸೂರಿನಲ್ಲಿರೋ 5 ಕೌಟುಂಬಿಕ ನ್ಯಾಯಾಲಯ ಅಗತ್ಯವಿಲ್ಲ. ಕೇವಲ 2 ನ್ಯಾಯಾಲಯ ಸಾಕು ಎಂದು ಮನವಿ ಮಾಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 7, 2019, 4:43 PM IST