ಲಾಕ್‌ ಡೌನ್‌ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ನಗದು ಪಡೆದುಕೊಳ್ಳಲು ಅನುಕೂಲ ಮಾಡಿಕೊಂಡುವ ಸಂಬಂಧ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಗ್ರಾಹಕರ ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ನೀಡಲು ಮುಂದಾಗಿದೆ.

ಚಿತ್ರದುರ್ಗ(ಏ.18): ಲಾಕ್‌ ಡೌನ್‌ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ನಗದು ಪಡೆದುಕೊಳ್ಳಲು ಅನುಕೂಲ ಮಾಡಿಕೊಂಡುವ ಸಂಬಂಧ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಗ್ರಾಹಕರ ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ನೀಡಲು ಮುಂದಾಗಿದೆ.

Add Asianetnews Kannada as a Preferred SourcegooglePreferred

ಮೊಬೈಲ್‌ ಎಟಿಎಂ ವಾಹನ ಚಿತ್ರದುರ್ಗ ನಗರದ ಎಲ್ಲಾ ವಾರ್ಡ್‌ ಹಾಗೂ ಬಡಾವಣೆಗಳಲ್ಲಿ ಸಂಚರಿಸಲಿದೆ. ಯಾವುದೇ ಬ್ಯಾಂಕಿನ ಎಟಿಎಂ ಕಾರ್ಡ್‌ ಬಳಸಿ ತಮ್ಮ ಖಾತೆಯಲ್ಲಿನ ಹಣವನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದಾಗಿದೆ. ಎಟಿಎಂ ವಾಹನವು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಸಂಚಾರ ನಡೆಸಲಿದೆ.

'ATM ಮುಂದೆ ಮುಗಿಬೀಳಬೇಡಿ: ಜನಧನ್‌ ಖಾತೆ ಹಣ ಹಿಂಪಡೆಯಲು ಕಾಲಮಿತಿಯಿಲ್ಲ'

ಬೆಳಗ್ಗೆ 7ರಿಂದ 8ರವರೆಗೆ ಸರ್ಕಾರಿ ವಿಜ್ಞಾನ ಕಾಲೇಜು ಆವರಣ. ಬೆಳಗ್ಗೆ 8 ರಿಂದ 9 ರವರಗೆ ಹಳೇ ಮಾಧ್ಯಮಿಕ ಶಾಲಾ ಆವರಣ. 9 ರಿಂದ 10.30 ರವರೆಗೆ ಹೊಳಲ್ಕೆರೆ ರಸ್ತೆಯ ಮೋರ್‌ ಶಾಪ್‌ ಹತ್ತಿರ. 10.30 ರಿಂದ 12 ರವರೆಗೆ ಸಂತೆ ಹೊಂಡದ ವೃತ್ತ. ಪ್ರಸನ್ನ ಚಿತ್ರಮಂದಿರ. ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಎಪಿಎಂಸಿ ಮಾರುಕಟ್ಟೆಆವರಣ.

ಕೊರೋನಾ ವೈರಸ್: ಎಟಿಎಂಗಳಿಗೆ ಔಷಧಿ ಸಿಂಪಡಣೆ

1.30 ರಿಂದ 3 ರವರೆಗೆ ಜೆಸಿಆರ್‌ ಹಾಗೂ ವಿ.ಪಿ. ಬಡಾವಣೆ. ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ ಮೈಸೂರು ಬ್ಯಾಂಕ್‌ ವೃತ್ತ. 4 ರಿಂದ 5 ರವರೆಗೆ ಒನಕೆ ಓಬವ್ವ ಕ್ರೀಡಾಂಗಣ ಹತ್ತಿರ. 5 ರಿಂದ 6 ರವರೆಗೆ ಐಯುಡಿಪಿ ಬಡಾವಣೆಯಲ್ಲಿ ಸಂಚಾರಿ ಎಟಿಎಂ ಸಂಚರಿಸಲಿದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಯ್ಯ ತಿಳಿಸಿದ್ದಾರೆ.