Asianet Suvarna News Asianet Suvarna News

ಬೀದರ್‌ ಉತ್ಸವಕ್ಕೆ ಅಗತ್ಯ ತಯಾರಿ ಕೈಗೊಳ್ಳಿ: ಸಚಿವ ಪ್ರಭು ಚವ್ಹಾಣ್‌

ಕುಸ್ತಿ ಪಂದ್ಯಾವಳಿ, ಗಾಳಿಪಟ ಉತ್ಸವ, ವಸ್ತು ಪ್ರದರ್ಶನ, ಮಕ್ಕಳ ಆಟದ ಸ್ಥಳ, ಬೋಟಿಂಗ್‌ ಆಯೋಜಿಸಲಾಗುವ ಬೊಮ್ಮಗೊಂಡೇಶ್ವರ ಕೆರೆ ಸೇರಿದಂತೆ ಕೋಟೆ ಆವರಣದ ವಿವಿಧೆಡೆ ಭೇಟಿ ನೀಡಿ ಅಗತ್ಯ ಸಲಹೆ ನೀಡಿದ ಸಚಿವ ಪ್ರಭು ಚವ್ಹಾಣ್‌ 

Minister Prabhu Chauhan Talks Over Bidar Utsav grg
Author
First Published Jan 5, 2023, 11:00 PM IST

ಬೀದರ್‌(ಜ.05):  ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಅವರು ಬುಧವಾರ ಬೀದರ್‌ ಕೋಟೆಗೆ ಭೇಟಿ ನೀಡಿ ಬೀದರ್‌ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಚಿವ ಚವ್ಹಾಣ್‌ ಅವರು ಕೋಟೆ ಪ್ರವೇಶ ದ್ವಾರದ ಹತ್ತಿರ ಆಯೋಜಿಸಲು ಉದ್ದೇಶಿಸಿರುವ ಶ್ವಾನ ಪ್ರದರ್ಶನ ಸ್ಥಳವನ್ನು ವೀಕ್ಷಿಸಿ, ಬೇರೆ ಬೇರೆ ಪ್ರದೇಶಗಳಿಂದ ಶ್ವಾನಗಳು ಪ್ರದರ್ಶಕ್ಕಾಗಿ ಬರುತ್ತಿದ್ದು, ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಬೇಕು ಮತ್ತು ಯಾವುದೇ ರೀತಿಯ ಸಮಸ್ಯೆಯಾಗದಂತೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.

ಬೀದರ್‌ ಉತ್ಸವದ ಮುಖ್ಯ ವೇದಿಕೆ ಸ್ಥಳಕ್ಕೆ ಭೇಟಿ ನೀಡಿ, ಅಧಿ​ಕಾರಿಗಳಾದ ಡಾ. ಗೌತಮ ಅರಳಿ ಹಾಗೂ ಅಭಯಕುಮಾರ ಅವರರಿಂದ ವೇದಿಕೆ, ಪಾರ್ಕಿಂಗ್‌ ಕುರಿತು ಮಾಹಿತಿ ಪಡೆದರು. ಕುಸ್ತಿ ಪಂದ್ಯಾವಳಿ, ಗಾಳಿಪಟ ಉತ್ಸವ, ವಸ್ತು ಪ್ರದರ್ಶನ, ಮಕ್ಕಳ ಆಟದ ಸ್ಥಳ, ಬೋಟಿಂಗ್‌ ಆಯೋಜಿಸಲಾಗುವ ಬೊಮ್ಮಗೊಂಡೇಶ್ವರ ಕೆರೆ ಸೇರಿದಂತೆ ಕೋಟೆ ಆವರಣದ ವಿವಿಧೆಡೆ ಭೇಟಿ ನೀಡಿ ಅಗತ್ಯ ಸಲಹೆಗಳನ್ನು ನೀಡಿದರು. 

ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ: ಕೇಂದ್ರ ಸಚಿವ ಖೂಬಾ

ಧೂಳಿನ ಸಮಸ್ಯೆಯಾಗದಿರಲಿ:

ಬೀದರ್‌ ಉತ್ಸವ ಜಿಲ್ಲೆ ಜನತೆಯ ಹಬ್ಬವಾಗಿದೆ. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಆಗಮಿಸುತ್ತಾರೆ. ಯಾರಿಗೂ ತೊಂದರೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸಮಯ ಕಡಿಮೆಯಿದ್ದು, ಎಲ್ಲ ತಯಾರಿಗಳು ತೀವ್ರ ಗತಿಯಲ್ಲಿ ನಡೆಯಬೇಕು. ಕೋಟೆ ಆವರಣದಲ್ಲಿನ ರಸ್ತೆಗಳನ್ನು ಸರಿಪಡಿಸಿ ಧೂಳಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲ ಸಮಿತಿಗಳು ಸರಿಯಾಗಿ ಕೆಲಸ ಮಾಡಬೇಕು ಮತ್ತು ಉತ್ಸವದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಬೇಕೆಂದು ಜಿ.ಪಂ ಸಿಇಒ ಶಿಲ್ಪಾ ಎಂ, ಅಪರ ಜಿಲ್ಲಾ​ಧಿಕಾರಿ ಶಿವಕುಮಾರ ಶಿಲವಂತ್‌, ಡಿವೈಎಸ್ಪಿ ಸತೀಶ್‌ ಅವರಿಗೆ ನಿರ್ದೇಶನ ನೀಡಿದರು. ನಗರದಲ್ಲಿನ ಎಲ್ಲ ರಸ್ತೆ ಮತ್ತು ಚರಂಡಿ ಸ್ವಚ್ಛಗೊಳಿಸಿ, ಫಾಗಿಂಗ್‌ ಮಾಡಿಸಬೇಕೆಂದು ನಗರಸಭೆ ಪ್ರಭಾರಿ ಆಯುಕ್ತ ರಾಜಶೇಖರ ಮಠ ಅವರಿಗೆ ಸೂಚಿಸಿದರು.

Bidar Utsav: ಬಯಲು ಸೀಮೆಯ ಹಬ್ಬಕ್ಕೆ ಭರದ ಸಿದ್ಧತೆ

ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಬೀದರ್‌ ಐತಿಹಾಸಿಕ ಕೋಟೆ, ಗುರುದ್ವಾರ, ಪಾಪನಾಶ, ಅನುಭವ ಮಂಟಪ, ನರಸಿಂಹ ಝರನಾದಂತ ಪ್ರವಾಸಿ ತಾಣಗಳನ್ನು ಹೊಂದಿರುವ ಐತಿಹಾಸಿಕ ಪ್ರಾಮುಖ್ಯತೆ ರುವ ಜಿಲ್ಲೆಯಾಗಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಕಲೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕಾಗಿ ಅದ್ಧೂರಿಯಾಗಿ ಉತ್ಸವ ಆಯೋಜಿಸಲಾಗುತ್ತಿದೆ ಎಂದರು.

ಜ. 7ರಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್‌ರೆಡ್ಡಿ ಉತ್ಸವ ಉದ್ಘಾಟಿಸಲಿದ್ದು, 9ರಂದು ಮುಖ್ಯಮಂತ್ರಿಬೊಮ್ಮಾಯಿ ಸಮಾರೋಪ ಸಮಾರಂಭ ಭಾಗವಹಿಸಲಿದ್ದಾರೆ. ಅಧಿ​ಕಾರಿಗಳು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆಲಸಗಳು ಇನ್ನಷ್ಟುತೀವ್ರಗತಿಯಿಂದ ನಡೆಸಬೇಕೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೀದರ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯ ವಸಂತ ಬಿರಾದಾರ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಮುಖಂಡರಾದ ರಾಮಶೆಟ್ಟಿಪನ್ನಾಳೆ, ರಮೇಶ ಉಪಾಸೆ ಸೇರಿದಂತೆ ಇತರರಿದ್ದರು.

Follow Us:
Download App:
  • android
  • ios