Asianet Suvarna News Asianet Suvarna News

ನಮಗೇ ನೀರಿಲ್ಲ, ತಮಿಳುನಾಡಿಗೆ ಬಿಡುವುದು ಹೇಗೆ?: ಸಚಿವ ಎಂ.ಬಿ.​ ಪಾ​ಟೀ​ಲ್‌

10 ಸಾವಿರ ಕ್ಯುಸೆಕ್‌ ನೀರು ಬಿಡುವುದಕ್ಕೆ ಆದೇಶ ಮಾಡಿದೆ. ತಮಿಳುನಾಡು 26 ಸಾವಿರ ಕ್ಯುಸೆಕ್‌ ನೀರು ಬಿಡಬೇಕು ಎಂದು ಮನವಿ ಮಾಡಿದೆ. ಆದರೆ 10 ಸಾವಿರ ಕ್ಯುಸೆಕ್ಸ್‌ ನೀರು ಬಿಡು​ವುದಕ್ಕೆ ನಮಗೆ ಕಷ್ಟವಾಗುತ್ತದೆ. ನಾವೂ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಾಡಿ ನ್ಯಾಯಯುತವಾದ ಪರಿಹಾರ ಕಂಡುಕೊಳ್ಳುತ್ತೇವೆ ಎಂದ​ ಸಚಿವ ಎಂ.ಬಿ.​ ಪಾ​ಟೀ​ಲ್‌ 

Minister MB Patil Talks Over Kaveri Water to Tamil Nadu grg
Author
First Published Aug 24, 2023, 3:30 AM IST

ಗದಗ(ಆ.24):  ನಮಗೇ ನೀರಿಲ್ಲ, ಮಂಡ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಮಳೆಯಾಗದಿದ್ದಕ್ಕೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾ​ರಿಕೆ ಸಚಿವ ಎಂ.ಬಿ.​ ಪಾ​ಟೀ​ಲ್‌ ಹೇಳಿ​ದ​ರು.

ನಗರ​ದಲ್ಲಿ ಬುಧ​ವಾ​ರ ಕಾವೇರಿ ವಿವಾದ ವಿಚಾರವಾಗಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವ​ರು, ಮಳೆಯಾದಾಗ ಸ್ವಾಭಾವಿಕ ದಿನದಲ್ಲಿ 170 ಟಿಎಂಸಿ ನೀರು ತಮಿಳುನಾಡಿ​ಗೆ ಬೀಡಬೇಕು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಆದರೂ 10 ಸಾವಿರ ಕ್ಯುಸೆಕ್‌ ನೀರು ಬಿಡುವುದಕ್ಕೆ ಆದೇಶ ಮಾಡಿದೆ. ತಮಿಳುನಾಡು 26 ಸಾವಿರ ಕ್ಯುಸೆಕ್‌ ನೀರು ಬಿಡಬೇಕು ಎಂದು ಮನವಿ ಮಾಡಿದೆ. ಆದರೆ 10 ಸಾವಿರ ಕ್ಯುಸೆಕ್ಸ್‌ ನೀರು ಬಿಡು​ವುದಕ್ಕೆ ನಮಗೆ ಕಷ್ಟವಾಗುತ್ತದೆ. ನಾವೂ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಾಡಿ ನ್ಯಾಯಯುತವಾದ ಪರಿಹಾರ ಕಂಡುಕೊಳ್ಳುತ್ತೇವೆ ಎಂದ​ರು.

ತಮಿಳುನಾಡಿಗೆ ಕೇವಲ 24 ಟಿಎಂಸಿ ಕಾವೇರಿ ನೀರು ಬಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ ಮಾಹಿತಿ

ಇಂಡಿಯಾ ಒಕ್ಕೂಟದ ಹಿತ ಕಾಪಾಡಲು ತಮಿಳುನಾಡಿಗೆ ನೀರು ಆರೋಪ ವಿಚಾರವಾಗಿ ಪ್ರತಿ​ಕ್ರಿ​ಯಿಸಿದ ಅವ​ರು, ವಿರೋಧ ಪಕ್ಷಗಳು ಅಧಿಕಾರದಲ್ಲಿ ಇದ್ದಾಗಲೂ ತಮಿಳುನಾಡಿಗೆ ನೀರು ಹರಿಸಿವೆ. ಸಿಡಬ್ಲ್ಯೂಸಿ ಆದೇಶದ ಮೇಲೆ ನೀರು ಹರಿಸಿವೆ. ನಾವಾಗಿಯೇ ಡಿಎಂಕೆ ಅವರ ಖುಷಿಗಾಗಿ ನೀರು ಹರಿಸಿಲ್ಲ. ಕೇಂದ್ರ ಸರ್ಕಾರದ ಸಿಡಬ್ಲ್ಯೂಸಿಯ ಸಂಸ್ಥೆ ಆದೇಶ ಮಾಡಿದೆ ಎಂದ​ರು.

ಪಕ್ಷಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಯಾರನ್ನು ಬಿಡಬೇಕು ಎನ್ನು​ವು​ದ​ನ್ನು ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನಿಸುತ್ತದೆ. ಯಾರು ಬರ್ತಾರೆ ಅನ್ನು​ವು​ದು ನನಗೆ ಗೊತ್ತಿಲ್ಲ. ನಾನು ಕೂಡಾ ಮಾ​ಧ್ಯಮದಲ್ಲಿ ಗಮನಿಸಿದ್ದೇನೆ ಅಷ್ಟೇ. ಕಾಂಗ್ರೆಸ್‌ ಎಲ್ಲರನ್ನೂ ಕಣ್ಣುಮುಚ್ಚಿ ತೆಗೆದುಕೊಳ್ಳುವುದಿಲ್ಲ. ಸ್ಥಳೀಯವಾಗಿ ಚರ್ಚಿಸಿ ಸೇರ್ಪಡೆ ಮಾಡಿ​ಕೊ​ಳ್ಳು​ತ್ತ​ದೆ. ಕಾರ್ಯಕರ್ತರ ಒಪ್ಪಿಗೆ ಪಡೆದು, ಇಂಥವರನ್ನು ಸೇರ್ಪಡೆ ಮಾಡಿ​ಕೊಂಡ​ರೆ ಪಕ್ಷಕ್ಕೆ ಬಲ ಬರುತ್ತದೆ ಎನ್ನುವವರನ್ನು ಮಾತ್ರ ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂದು ತಿಳಿ​ಸಿ​ದ​ರು.

ಮತ್ತೆ ಕಾಂಗ್ರೆಸ್‌ಗೆ ಹೋಗುವುದೆಂದರೆ ಮರ್ಯಾದೆಗೇಡು ಎಂಬ ಸಿ.ಟಿ. ರವಿ ಹೇಳಿಕೆ ವಿಚಾರವಾಗಿ ಪ್ರತಿ​ಕ್ರಿಯಿಸಿದ ಅವ​ರು, ಅವರಿಗೆ ಮರ್ಯಾದೆ ಬಹಳ ಇದೆ ಎಂದು ಹೇಳಿ ಜನ ಮರ್ಯಾದೆ ಕೊಟ್ಟು ಸಿ.ಟಿ. ರವಿ ಅವರನ್ನು ಮನೆಗೆ ಕಳುಹಿಸಿದ್ದಾರೆ. 40% ಸರ್ಕಾರ ಎಂದು ಮರ್ಯಾದೆ ಜಾಸ್ತಿ ಕೊಟ್ಟು ಜನರು ಅವರನ್ನು ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್‌ಗೆ 136 ಸೀಟು ಕೊಟ್ಟು ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂದು ಹೇಳಿದರು. ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸುವ ಕುರಿತು ಮುನಿಯಪ್ಪ ಅವರ ಹೇಳಿಕೆ ಬಗ್ಗೆ ಪ್ರಕ್ರಿಯಿಸಿ, ಅದನ್ನು ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದ​ರು.

Follow Us:
Download App:
  • android
  • ios