Asianet Suvarna News Asianet Suvarna News

'ಯಡಿಯೂರಪ್ಪ ಬರ್ತ್‌ಡೇಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್'

ಮಹದಾಯಿ ನೀರು ಬಳಕೆಗೆ ಗೆಜೆಟ್‌ ನೋಟಿಫೀಕೇಶನ್‌ ಹೊರಡಿಸಿದ ಕೇಂದ್ರ ಸರ್ಕಾರ| ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಗೆಜೆಟ್‌ ನೋಟಿಫೀಕೇಶನ್‌ ಹೊರಡಿಸಿದ ಕೇಂದ್ರ|ಕೇಂದ್ರ ಸರಕಾರ ಗೆಜೆಟ್‌ ಹೊರಡಿಸೋ ಮೂಲಕ ಹೋರಾಟಕ್ಕೆ ನ್ಯಾಯ| 

Minister CC Patil Reacts Over Notification on Mahadayi
Author
Bengaluru, First Published Feb 28, 2020, 9:02 AM IST

ಗದಗ(ಫೆ.28): ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಮಹದಾಯಿ ನೀರು ಬಳಕೆಗೆ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫೀಕೇಶನ್‌ ಹೊರಡಿಸಿರುವುದು ಉತ್ತರ ಕರ್ನಾಟಕದ ಬಹು ದಿನಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಹೇಳಿದ್ದಾರೆ.

ಮಾಧ್ಯಮದವರ ಮಾತನಾಡಿದ ಅವರು, ಮುಖ್ಯಮಂತ್ರಿ ಯೂಡಿಯೂರಪ್ಪ ಹುಟ್ಟುಹಬ್ಬದ ದಿನದಂದೇ ಪ್ರಧಾನಿ ಮೋದಿ ಗಿಫ್ಟ್‌ ನೀಡಿದ್ದಾರೆ. ಮಹದಾಯಿ ನದಿ ನೀರು ಹಂಚಿಕೆ ವಿವಾದ 13.5 ಟಿಎಂಸಿ ನೀರು ಬಳಕೆಗೆ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಮಹದಾಯಿ: ಕರ್ನಾಟಕಕ್ಕೆ ಜಯ, ಗೋವಾದ ತಕರಾರಿಗೆ ಮಣೆ ಹಾಕದ ಕೇಂದ್ರ!

ಇದೀಗ ಕೇಂದ್ರ ಸರಕಾರ ಗೆಜೆಟ್‌ ಹೊರಡಿಸೋ ಮೂಲಕ ಹೋರಾಟಕ್ಕೆ ನ್ಯಾಯ ಒದಗಿಸುರುವುದಕ್ಕೆ ಸಚಿವ ಪಾಟೀಲರು ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
 

Follow Us:
Download App:
  • android
  • ios