Asianet Suvarna News Asianet Suvarna News

ಗಣಿ, ಕಲ್ಲು, ಮರಳುಗಾರಿಕೆ, ಸಾಗಾಣಿಕೆಗೆ ಅನುಮತಿ

ವೈರಸ್‌ ಹರಡುವಿಕೆ ತಡೆಯಲು ಸ್ಥಗಿತಗೊಂಡಿದ್ದ ಗಣಿ, ಕಲ್ಲು, ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಕಾರ್ಯವನ್ನು ಷರತ್ತುಗಳೊಂದಿಗೆ ಪುನಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ತಿಳಿಸಿದ್ದಾರೆ.

 

Mining and transport can be started with conditions in davanagere
Author
Bangalore, First Published Apr 30, 2020, 12:15 PM IST

ದಾವಣಗೆರೆ(ಏ.30): ವೈರಸ್‌ ಹರಡುವಿಕೆ ತಡೆಯಲು ಸ್ಥಗಿತಗೊಂಡಿದ್ದ ಗಣಿ, ಕಲ್ಲು, ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಕಾರ್ಯವನ್ನು ಷರತ್ತುಗಳೊಂದಿಗೆ ಪುನಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ತಿಳಿಸಿದ್ದಾರೆ.

ಜಿಲ್ಲೆಯ ಗಣಿ, ಕಲ್ಲು, ಮರಳು ಗುತ್ತಿಗೆ ಪ್ರದೇಶಗಳು ಹಾಗೂ ಕ್ರಷರ್‌ ಘಟಕ ಕಾರ್ಯ ಚಟುವಟಿಕೆಗಳಿಗೆ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೆಲ ನಿಬಂಧನೆ, ಷರತ್ತುಗಳೊಂದಿಗೆ ಆರಂಭಿಸಲು ಅನುಮತಿಸಲಾಗಿದೆ. ವೈರಸ್‌ ತಡೆಗೆ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಜಾರಿಗೊಳಿಸಿದ ಎಲ್ಲಾ ವಿಧಾನಗಳನ್ನು ಕಾರ್ಮಿಕರು ಅಳವಡಿಸಿಕೊಂಡು ಸುರಕ್ಷತೆ ಕಾಪಾಡಿಕೊಳ್ಳಬೇಕು. ಗುತ್ತಿಗೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿದ್ರೆ ಹೊಡಿಯಲ್ಲ, ಬಡಿಯಲ್ಲ..! ಪೊಲೀಸರ ಹೊಸ ಐಡಿಯಾ

ಗಣಿ, ಕಲ್ಲು, ಮರಳು ಗುತ್ತಿಗೆ ಪ್ರದೇಶ, ಕ್ರಷರ್‌ ಘಟಕಗಳಲ್ಲಿ ಬಳಸುವ ವಾಹನಗಳು ಹಾಗೂ ಉಪಕರಣಗಳಿಗೆ ಆಗಿಂದಾಗ್ಗೆ ಡಿಸ್‌ ಇನ್ಫೆಕ್ಷನ್‌ ದ್ರಾವಣ ಸಿಂಪಡಿಸಿ, ವೈರಸ್‌ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಶೌಚಾಲಯ, ವಾಟರ್‌ ಪಂಪ್‌ ಮತ್ತಿತರೆ ಕಡೆ ಕಡ್ಡಾಯವಾಗಿ ಸೋಪ್‌ ಮತ್ತು ಸ್ಯಾನಿಟೈಸರ್‌ ಬಳಸಬೇಕು. ಸ್ಥಳೀಯ ಕಾರ್ಮಿಕರನ್ನು ಬಳಸಿ, ಕಾರ್ಯ ನಿರ್ವಹಿಸಬೇಕು. ಹೊರ ಪ್ರದೇಶದಿಂದ ಕಾರ್ಮಿಕರನ್ನು ಕರೆ ತರುವಂತಿಲ್ಲ ಎಂದು ತಿಳಿಸಿದ್ದಾರೆ.

ಎಲ್ಲಾ ಕಾರ್ಮಿಕರೂ ಕಡ್ಡಾಯವಾಗಿ ಮಾಸ್ಕ್‌, ಗ್ಲೌಸ್‌ ಧರಿಸಬೇಕು. ಕಾರ್ಮಿಕರು, ಸಿಬ್ಬಂದಿ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ವಿವರಗಳನ್ನು ಅಪ್ಲಿಕೇಷನ್‌ನಲ್ಲಿ ದಾಖಲಿಸಬೇಕು. ಗಣಿಗಾರಿಕೆ, ಕ್ರಷರ್‌ ಪ್ರದೇಶದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟಾಗಿ ಸೇರುವುದನ್ನು ನಿರ್ಬಂಧಿಸಿದೆ. ಕಾರ್ಮಿಕರ ಸುರಕ್ಷತಾ ದೃಷ್ಟಿಯಿಂದ ಗುಟ್ಕಾ, ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಉಗುಳುವುದನ್ನು ನಿಷೇಧಿಸಿದೆ ಎಂದು ಹೇಳಿದರು.

ಸಿಎಂ, ಕೊರೋನಾ ವಾಯರಿಯರ್ಸ್‌ಗೆ ಉಪನ್ಯಾಸಕನಿಂದ ಅವಮಾನ

ಗಣಿ ಮಾಲೀಕರು, ಕಾರ್ಮಿಕರನ್ನು ಹೊರತುಪಡಿಸಿ ಇತರೆ ಸಾರ್ವಜನಿಕರು, ಸಂದರ್ಶಕರನ್ನು ಗಣಿಗಾರಿಕೆ ಪ್ರದೇಶಗಳಲ್ಲಿ ನಿಷೇಧಿಸಿದೆ. ಎಲ್ಲಾ ಕಾರ್ಮಿಕರಿಗೆ ಪ್ರತಿದಿನ ಊಟದ ವ್ಯವಸ್ಥೆ ಅಥವಾ ಮೂಲ ಸೌಕರ್ಯ, ಟೆಂಪರೇಚರ್‌ ಸ್ಕ್ರೀನಿಂಗ್‌ ನಡೆಸಬೇಕು. ಸ್ಯಾನಿಟೈಸರ್‌, ಸೋಪ್‌ ನೀಡಿ, ಆಗಿಂದಾಗೆ ಕೈ ತೊಳೆದುಕೊಳ್ಳುವಂತೆ, ಶುಚಿತ್ವಕ್ಕೆ ಆದ್ಯತೆ ನೀಡುವಂತೆ ನೋಡಿಕೊಳ್ಳಬೇಕು ಎಂದು ಅವರು ಆದೇಶಿಸಿದ್ದಾರೆ.

ಅರವತು ವರ್ಷ ಮೇಲ್ಪಟ್ಟವರು, ದೃಷ್ಟಿಹೀನ, ಅಂಗವಿಕಲತೆ ಹೊಂದಿರುವ ಹಾಗ 14 ವರ್ಷ ಒಳಪಟ್ಟಮಕ್ಕಳನ್ನು, ಅನಾರೋಗ್ಯ ಪೀಡಿತರನ್ನು ಕಾರ್ಮಿಕರಾಗಿ ಕೆಲಸ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ. ಕಾರ್ಮಿಕರಿಗೆ ಕಡ್ಡಾಯವಾಗಿ ಆರೋಗ್ಯ ವಿಮೆ ಮಾಡಿಸಬೇಕು. ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಕೋವಿಡ್‌ ತಡೆಗಟ್ಟುವ ಬಗ್ಗೆ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.

ಅತಿಕ್ರಮ ಪ್ರವೇಶ, ಶಾಸಕಿಯನ್ನು ಜೈಲಿಗಟ್ಟುವಂತೆ ರೈತರ ಒತ್ತಾಯ

ಶೀತ, ಕೆಮ್ಮು, ಜ್ವರ ರೋಗ ಲಕ್ಷಣಗಳು ಕಾರ್ಮಿಕರಲ್ಲಿ ಕಂಡು ಬಂದರೆ ತಕ್ಷಣ ಜಿಲ್ಲಾ ಕಂಟ್ರೋಲ್‌ ರೂಂ ಸಂಖ್ಯೆ-1077 ಕ್ಕೆ ಹಾಗೂ ಸ್ಥಳೀಯ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಬೇಕು. ನಿತ್ಯ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಕೆಲಸ ಮಾಡಬೇಕು. ಈ ಸೂಚನೆ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿ ಎಚ್ಚರಿಸಿದರು.

Follow Us:
Download App:
  • android
  • ios