Asianet Suvarna News Asianet Suvarna News

ಜನ್ಮ ನೀಡಿದ ತಂದೆಯೇ ತನ್ನ ಪುಟ್ಟ ಮಗನನ್ನು ಕೊಂದ

ಸ್ವಂತ ತಂದೆಯೇ ತನ್ನ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಈ ಕೊಲೆಗೆ ಕಾರಣವೇನು..?

Man Killed His Son in Raichur snr
Author
Bengaluru, First Published Feb 4, 2021, 8:57 AM IST

ಸಿಂಧನೂರು (ಫೆ.04): ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ನಾಲ್ಕು ವರ್ಷದ ಮಗನನ್ನೇ ಕತ್ತು ಹಿಸುಕಿ ಕೊಂದಿದ್ದಾನೆ. 

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮದಲ್ಲಿ ಈ ಗಟನೆ ನಡೆದಿದೆ. 

ರಾಯಚೂರು ತಾಲೂಕಿನ ಕಲಮಂಗಿ ಗ್ರಾಮದ ಎಲ್ಲಪ್ಪ - ಪಾರ್ವತಿ ಎಂಬಾಕೆಯನ್ನು ವಿವಾಹವಾಗಿದ್ದು  ಯಲ್ಲಪ್ಪ ಕುಡಿದು ಬಂದು ನಿತ್ಯ ಹೆಂಡತಿಯ ಜೊತೆಗೆ ಜಗಳ ಮಾಡುತ್ತಿದ್ದ. 

ಕಾಲೇಜಲ್ಲಿ ಲವ್ ಮಾಡಿದ್ರು : ಸಲುಗೆಯಿಂದ ಇದ್ದು ಲೈಂಗಿಕ ದೌರ್ಜನ್ಯ ಎಸಗಿ ಈಗ ಹೀಗ್ ಮಾಡೋದಾ..?

ಇದರಿಂದ ಮನನೊಂದ ಪಾರ್ವತಿ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ತನ್ನ ತವರು ಮನೆಗೆ ಹೋಗಿದ್ದಳು. 

ಫೆ. 1 ರಂದು ಸೋಮವಾಋ ಸಂಜೆ ಹೆಂಡತಿ ಇದ್ದಲ್ಲಿಗೆ ಆಗಮಿಸಿದ ಯಲ್ಲಪ್ಪ ಜಗಳವಾಡಿ ಮಗನನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. 

ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios