36 ಲಕ್ಷ ರು. ಅನುದಾನದಲ್ಲಿ ಚಳ್ಳಕೆರೆ ಅಭಿಷೇಕ್ ನಗರದಲ್ಲಿ ಸಿಸಿ ರಸ್ತೆ, ಒಳ ಚರಂಡಿ ಕಾಮಗಾರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮ
ಚಳ್ಳಕೆರೆ (ಆ.05): ಇಲ್ಲಿನ ನಗರಸಭಾ ನಿಧಿಯ 26 ಲಕ್ಷ ರೂಪಾಯಿ ಮತ್ತು ಅಲೆಮಾರಿ-ಅರೆ ಅಲೆಮಾರಿ ಅನುದಾನದ 10 ಲಕ್ಷ ರು. ಸೇರಿ ಒಟ್ಟು 36 ಲಕ್ಷ ರು. ಅನುದಾನದಲ್ಲಿ ಚಳ್ಳಕೆರೆ ಅಭಿಷೇಕ್ ನಗರದಲ್ಲಿ ಸಿಸಿ ರಸ್ತೆ, ಒಳ ಚರಂಡಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು.
Add Asianetnews Kannada as a Preferred Source


ಹೊಸದುರ್ಗ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿ, ಶಹಬ್ಭಾಸ್ ಎನಿಸಿಕೊಂಡ ಗೂಳಿಹಟ್ಟಿ ಚಂದ್ರಶೇಖರ್
ಇದೇ ವೇಳೆ ಈ ಸಾರ್ವಜನಿಕರ ಕುಂದು-ಕೊರತೆಗಳ ಕುರಿತು ತಿಳಿದುಕೊಂಡು ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ಸಮಯದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಜೈ ತುಂಬಿ ಮಾಲಿಕ್ ಸಾಬ್, ನಗರಸಭಾ ಸಮಿತಿ ಅಧ್ಯಕ್ಷ ರಮೇಶ್ ಗೌಡ, ಸದಸ್ಯರಾದ ಮಲ್ಲಿಕಾರ್ಜುನ್, ನಗರಸಭಾ ಆಯುಕ್ತ ಪಾಲಯ್ಯ, ಬೆಸ್ಕಾಂ ಎಇಇ ರಾಜಣ್ಣ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.
