Asianet Suvarna News Asianet Suvarna News

ಗಂಡನ ಕಳೆದುಕೊಂಡ ಮಹಿಳೆಗೆ ಅಂಫಾನ್‌ ಆಘಾ​ತ: ಹೆತ್ತ ಮಕ್ಕಳ ಸೇರಲು ತಾಯಿಯ ಪರದಾಟ..!

ತಾಯಿ ಪಶ್ಚಿ​ಮ​ ಬಂಗಾ​ಳ​ದಲ್ಲಿ, ಮಕ್ಕಳು ಕೂಡ್ಲಿ​ಗಿ​ಯ​ಲ್ಲಿ| ವಯಸ್ಸಿಗೆ ಬಂದ 3 ಮಕ್ಕಳು ಕರ್ನಾಟಕದಲ್ಲಿ ಅನಾಥರಾಗಿದ್ದು, ಬೇರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ| 4 ತಿಂಗಳು ದೂರವಾಗಿರುವ ತಾಯಿ ಮಕ್ಕಳನ್ನು ಒಂದು ಮಾಡುವ ಅಗತ್ಯವಿದೆ|

Kudligi Based Woman Faces Problems due to Cyclone Amphan in West Bengal
Author
Bengaluru, First Published May 24, 2020, 9:16 AM IST

ಕೂಡ್ಲಿಗಿ(ಮೇ.24):  ಪಶ್ಚಿಮ ಬಂಗಾಳದ ಕುಟುಂಬವೊಂದು ಕೊರೋನಾ ಹೊಡೆತಕ್ಕೆ ತತ್ತರಿಸಿದೆ. ಗಂಡ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅಲ್ಲಿರುವ ಮನೆಯೂ ಈಗ ಅಂಫಾನ್‌ ಚಂಡಮಾರುತದಿಂದ ಜಖಂ ಆಗಿದೆ. ಹೀಗಾಗಿ, ತಾಯಿ (ಪರ್ಶಿಯಾ)ಗೆ ತನ್ನ ಮೂವ​ರು ಮಕ್ಕಳನ್ನು ಸೇರಲು ಕರ್ನಾಟಕಕ್ಕೆ ಬರಲು ಆಗುತ್ತಿಲ್ಲ. ಹೀಗಾಗಿ, ಸರ್ಕಾರ, ಸಂಘ-ಸಂಸ್ಥೆಗಳು ಈ ಮಹಿಳೆಗೆ ತನ್ನ ಮಕ್ಕಳನ್ನು ಸೇರಲು ಅವಕಾಶ ಮಾಡಿಕೊಡಲು ಮುಂದಾಗಬೇಕಿದೆ.

ವಯಸ್ಸಿಗೆ ಬಂದ 3 ಮಕ್ಕಳು ಕರ್ನಾಟಕದಲ್ಲಿ ಅನಾಥರಾಗಿದ್ದು, ಬೇರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ತಂದೆಯನ್ನು ಕಳೆದುಕೊಂಡು, ತಾಯಿಯಿಂದ ದೂರವಿರುವ 18 ವರ್ಷದ ಜನಾತುನ್‌ ಫಿರ್ದೋಸ್‌, 17 ವರ್ಷದ ಹಕ್ಲೀಮಾ, 14 ವರ್ಷದ ರಹಿಮಾ ಬಿಸ್ವಾಸ್‌ ತಂದೆಯ ಸಾವು, ತಾಯಿ ದೂರವಾಗಿರುವ ನೋವನ್ನು ನುಂಗಿಕೊಂಡು ಜೀವನ ದೂಡುತ್ತಿದ್ದಾರೆ. 4 ತಿಂಗಳು ದೂರವಾಗಿರುವ ತಾಯಿ ಮಕ್ಕಳನ್ನು ಒಂದು ಮಾಡುವ ಅಗತ್ಯವಿದೆ.

ಕ್ರೂರಿ ಕೊರೋನಾ ಅಟ್ಟಹಾಸಕ್ಕೆ ಮೂರು ಹೆಣ್ಣು ಮಕ್ಕಳು ಅನಾಥ..!

ಪರ್ಶಿಯಾ ಕುಟುಂಬ ಕಳೆದ 15 ವರ್ಷ​ಗ​ಳಿಂದ ಕೂಡ್ಲಿ​ಗಿ​ಯಲ್ಲಿ ವಾಸ​ವಾ​ಗಿ​ದ್ದಾರೆ. ಇವರು ಇಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಮೂರು ತಿಂಗಳ ಹಿಂದೆ ಪರ್ಶಿಯಾ ಅತ್ತೆ ಮೃತ​ಪ​ಟ್ಟಿ​ದ್ದರು. ಆಗ ದಂಪತಿ ಅಲ್ಲಿ​ಗೆ ತೆರ​ಳಿ​ದ್ದರು. ಲಾಕ್‌​ಡೌ​ನ್‌​ನಿಂದ ಅಲ್ಲೇ ಸಿಲುಕಿ​ಕೊಂಡಿ​ದ್ದರು. ಕಳೆದ ವಾರ ಪರ್ಶಿಯಾ ಪತಿ ಹೃದ​ಯಾ​ಘಾ​ತ​ದಿಂದ ತೀರಿ​ಕೊಂಡಿ​ದ್ದಾರೆ. ಇದ​ರಿಂದ ಪರ್ಶಿಯಾ ಅಲ್ಲಿ ಒಬ್ಬಂಟಿ​​ಯಾ​ಗಿ​ದ್ದಾ​ರೆ.

ನಮ್ಮ ತಂದೆ ಮೃತ​ಪ​ಟ್ಟಿ​ದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ನಮ್ಮ ಹೆಂಚಿನ ಮನೆ ಸಹ ಈಗ ಅಂಫಾನ್‌ ಚಂಡಮಾರುತದಿಂದ ಜಖಂ ಆಗಿ ಮನೆ ತುಂಬಾ ನೀರು ತುಂಬಿದೆಯಂತೆ. ತಾಯಿ ಮೊಬೈಲ್‌ ಮೂಲಕ ತಿಳಿಸಿದ್ದು ಅವ​ರ​ಲ್ಲಿ ಅತಂತ್ರರಾಗಿದ್ದಾರೆ. ನಮ್ಮ ತಾಯಿ ಕರ್ನಾಟಕಕ್ಕೆ ಬರಬೇಕೆಂದರೆ ಬಸ್ಸಿಲ್ಲ, ಕಾರು ಬಾಡಿಗೆ ಮಾಡಿಕೊಂಡು ಬರಬೇಕಾದರೆ ಹದಿನೆಂಟು ಸಾವಿರ ಆಗುತ್ತದಂತೆ. ಅಷ್ಟೊಂದು ಹಣ ನಮ್ಗೆ ಎಲ್ಲಿಂದ ಬರಬೇಕು ಎಂದು ತಮ್ಮ ಗೋಳನ್ನು ಹೇಳಿಕೊಳ್ಳುತ್ತಾರೆ ಅನಾಥವಾಗಿರುವ ಜನಾತುನ್‌ ಫಿರ್ದೋಸ್‌.
 

Follow Us:
Download App:
  • android
  • ios