Asianet Suvarna News Asianet Suvarna News

ಧಾರವಾಡ ತಹಶಿಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳದ್ದೇ ಆಟ!

ಧಾರವಾಡ ತಹಶೀಲ್ದಾರ್ ಕಚೇರಿಯಲ್ಲಿ ಎನೆ ಕೆಲಸ ಆಗಬೇಕು ಎಂದರೆ ಅಧಿಕಾರಿಗಳ ಕೈ ಬಿಸಿ ಮಾಡಿದಾಗ ಮಾತ್ರವೇ ಕೆಲಸಗಳು ಆಗುತ್ತಿವೆ ಎಂದು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.

Govt officials not responding to farmers in  Dharwad Tahsildar office Kannada news  gow
Author
First Published May 30, 2023, 3:38 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಮೇ.30): ವಿದ್ಯಾಕಾಶಿ ಧಾರವಾಡದಲ್ಲಿ ಅಧಿಕಾರಿಗಳು ಮತ್ತು ಏಜಂಟರು ಮಾಡಿದ್ದೆ ಆಟವಾಗಿದೆ. ಧಾರವಾಡ ತಹಶೀಲ್ದಾರ್ ಕಚೇರಿಯಲ್ಲಿ ಎನೆ ಕೆಲಸ ಆಗಬೇಕು ಎಂದರೆ ಅಧಿಕಾರಿಗಳ ಕೈ ಬಿಸಿ ಮಾಡಿದಾಗ ಮಾತ್ರವೇ ಕೆಲಸಗಳು ಆಗುತ್ತಿವೆ ಎಂದು ರೈತರು ಧಾರವಾಡ ತಹಶೀಲ್ದಾರ್ ಕಚೇರಿ ಎದುರು ರೈತ ಮುರಗೆಪ್ಪ, ಏಜಂಟರೊಬ್ಬರಿಗೆ ತರಾಟಗೆ ತೆಗೆದುಕೊಂಡು ಘಟನೆ ನಿನ್ನೆ ಸಂಜೆ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

ಧಾರವಾಡದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಪಹಣಿ ಪತ್ರದಲ್ಲಿ ಸರಕಾರ ಎಂದು ನಮೂದು ಇರುವ ಹಿನ್ನಲೆಯಿಂದ ಮುರಗೆಪ್ಪ ಸೇರಿದಂತೆ ಧಾರವಾಡ ತಾಲೂಕಿನ ಶಿಬಾರಗಟ್ಟಿ, ಮತ್ತು ಅಮ್ಮಿನಭಾವಿ ರೈತರು ಸರಕಾರಿ ಎಂದು ನಮೂದಾಗಿರುವ ಹೆಸರನ್ನು ಕಡಿಮೆ ಮಾಡಲು ಅಧಿಕಾರಿಗಳು ವಿಳಂಭ ದೋರಣೆ ಮಾಡುತ್ತಿದ್ದಾರೆ..ಇನ್ನು ಅಧಿಕಾರಿಗಳ ಕೈ ಬಿಸಿ ಮಾಡಿದಾಗ ಮಾತ್ರ ಅಧಿಕಾರಿಗಳು ಕೆಲಸವನ್ನ ಮಾಡುತ್ತಿದ್ದಾರೆ ಎಂದು ತಹಶೀಲ್ದಾರ್ ಕಚೇರಿ ಎದುರೆ ಒಬ್ಬರಿಗೊಬ್ಬರು ಏಕ ವಚನದಲ್ಲಿ ಬೈದಾಡಿಕ್ಕೊಂಡಿದ್ದಾರೆ. ಅದರಲ್ಲೂ ಶಿರಸ್ತೆದಾರ ರಮೇಶ ಬಂಡಿ ಅವರ ಉದ್ದೇಶ ಪೂರ್ವಕವಾಗಿ ಈ ರೀತಿಯಾಗಿ ಮಾಡುತ್ತಿದ್ದಾರೆ. ಅಧಿಕಾರಿಗಳು ಯಾಕೆ ಈ ವಿಳಂಭ ದೋರಣೆ ರೀತಿಯನ್ನ ಅನುಸರಿಸುತ್ತಿದ್ದಾರೆ. ಇದರಿಂದ ರೈತರಿಗೆ ತಹಶೀಲ್ದಾರ್ ಕಚೇರಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ ಎಂದು ಕೆಲ ಅನ್ನದಾತರು ತಹಶೀಲ್ದಾರ್ ಕೋಠಡಿಯ ಎದುರೆ ಶಿರಸ್ತೆದಾರ ರಮೇಶ ಬಂಡಿಯವನ್ನ ತರಾಡಗೆ ತೆಗೆದುಕ್ಕೊಂಡಿದ್ದಾರೆ..

ಏನಿದು ಪ್ರಕರಣ : 1986 ರಲ್ಲಿ ಇಂದಿರಾ ಗಾಂಧಿ ಕಾಲದಲ್ಲಿ ಊಳುವವನೆ ಒಡೆಯ ಎಂದು ಘೋಷಣೆ ಆದ ಬಳಿಕ ಕೆಲ ದೇಶಗತಿ ಮನೆಯನದವರು, ಧಣಿಗಳು ಕೆಲವೊಂದಿಷ್ಡು ಭೂಮಿಯನ್ನ ಬಿಟ್ಟು ಕೊಡಬೇಕಾದ ಪರಿಸ್ತಿತಿ ನಿರ್ಮಾಣವಾಗಿತ್ತು. ಇದರಿಂದ ರೈತರ ಹೆಸರಿಗೆ ಹೈಕೋರ್ಟ ಮತ್ತು ಸುಪ್ರಿಂ ಕೋರ್ಟನಲ್ಲಿ ರೈತರಂತೆ ಜಮೀನು ಆದವು,ಆದರೆ ಅಂದಿನಿಂದ ಇಂದಿನವರೆಗೆ ರೈತರ ಹೆಸರಲ್ಲಿ ಇರುವ ಪಹಣಿ ಪತ್ರದಲ್ಲಿ ಸರಕಾರ ಎಂಬುದ ನಮೂದು ಇರುವ ಹಿನ್ನಲೆ ರೈತರು ಸರಕಾರಿ ಎಂಬ ಪದವನ್ನ ತೆಗೆಯಬೇಕು ಎಂದು ಕಳೆದ 10 ವರ್ಷದಿಂದ ಹೂರಾಟ ಮಾಡುತ್ತಲೆ ಬಂದಿದ್ದಾರೆ.ಆದರೆ ಅಧಿಕಾರಿಗಳಿಗೆ ಸರಕಾರ ಎಂಬ ಪದವನ್ನ ತೆಗೆದು ಹಾಕಲು ಮನವಿ ಮಾಡಿಕ್ಕೋಂಡರೆ 9 ಎಕರೆಯಲ್ಲಿ ಕೇವಲ 4 ಎಕರೆ ಜಮೀನಿನ ಪಹಣಿಯಲ್ಲಿ ಮಾತ್ರ ತೆಗೆಯಲಾಗಿದೆ ಆದರೆ ಇನ್ನುಳಿದ 5 ಎಕರೆ ಜಮೀನಿನಲ್ಲಿ ಸರಕಾರ ಇದೆ ಎಂದು ಅದನ್ನ ತೆಗೆಯಲು ಅಧಿಕಾರಿಗಳು ಹಿಂದೆಟು ಹಾಕುತ್ತಿದ್ದಾರೆ. ಅಧಿಕಾರಿಗಳು ಕೈ ಬಿಸಿ ಮಾಡಿದಾಗ ಮಾತ್ರ ಕೆಲಸ ಮಾಡ್ತಾರೆ ಎಂದು ಮುರಗೇಶ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು.

ಬಂಧನ ಭಯದಿಂದ ಮುಕ್ತಿ, 4 ವಾರ ರಿಲೀಫ್ ಪಡೆದ ಅಶ್ವಥ್ ನಾರಾಯಣ್

ಇನ್ನು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಧಾರವಾಡಕ್ಕೆ ಬಾರದೆ ಇರೋದಕ್ಕೆ ಅಧಿಕಾರಿಗಳಿಗೆ ಹೇಳೊರಿಲ್ಲ, ಕೆಳೋರಿಲ್ಲ, ಅನ್ನೋ ಮಾತುಗಳು ಕೇಳಿ ಬರುತ್ತಿವೆ.ಅಧಿಕಾರಿಗಳು ಮಾಡಿದ್ದೆ ಆಟವಾಗಿದೆ ರೈತರು ಎಷ್ಡೆ ಭಾರಿ ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಬೇಸತ್ತು ಹೋಗಿದ್ದಾರೆ.ಅಧಿಕಾರಿಗಳು ಹಿರಿಯ ಅಧಿಕಾರಿಗಳು ಹೇಳಿದರೆ ಮಾತ್ರ ಕೆಲಸ ಮಾಡುತ್ತಾರಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ..ಇನ್ನು ಶಿರಸ್ತೆ ದಾರರ ರಮೇಶ ಬಂಡಿ ಅವರು ಏಜಂಟರನ್ನಿಟ್ಡುಕ್ಕೊಂಡು ಕೆಲಸವನ್ನ ಮಾಡುತ್ತಿದ್ದಾರೆ ಇವರಿಗೆ ಯಾರು ಹೇಳೋರಿಲ್ಲ ಕೇಳೋರಿಲ್ಲ ಎಂದು ರೈತ , ಗ್ರಾಮ ಪಂಚಾಯತಿ ಸದಸ್ಯ ಮುರಗೇಪ್ಪ ಗಂಭೀರ ಆರೋಪವನ್ನ ಮಾಡುತ್ತಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗ್ತಿದ್ದಂತೆ ಅರ್ಬನ್ ನಕ್ಸಲ್ ಚಟುವಟಿಕೆ ಆರಂಭ: ಸಿಟಿ ರವಿ

ತಹಶೀಲ್ದಾರ್ ಕಚೇರಿ ಎದುರೆ ರೈತರು ಈ ರೀತಿ ಒಬ್ಬರೊಗೊಬ್ಬರು ಏಕವನನದಲ್ಲಿ ಅವ್ಯಾವ್ಯ ಶಬ್ದಗಳೀಂದ ಬೈದಾಡಿಕ್ಕೊಂಡಿದ್ದಾರೆ.ಇನ್ನು ಈ ಕುರಿತು ಧಾರವಾಡ ತಹಶೀಲ್ದಾರ್ ಕಚೇರಿಯಲ್ಲಿ ಏನ್ ಆಗ್ತಾ ಇದೆ ಎಂಬುದನ್ನ ಜಿಲ್ಲಾಧಿಕಾರಿ ಗುರುದತ್ತ ಹಧಗಡೆ ಅವರು ಗಮನ ಹರಿಸಬೇಕು ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿಗೆ ಅನ್ನದಾತರ ಬಂದು ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ತಪ್ಪಿತಸ್ಥ ಅಧಿಕಾರಿಗಳಿಗೆ ಕ್ರಮ ಕೈಗೊಂಡು ಸಮಸ್ಯ ಬಗೆ ಹರಿಸ್ತಾರಾ ಎಂಬುದು ಕಾದ ನೋಡಬೇಕಿದೆ. 

Follow Us:
Download App:
  • android
  • ios