ಮಾಜಿ ಸಚಿವ ಜಿ ಟಿ ದೇವೇಗೌಡ ಅವರು ಸದ್ಯ ಜೆಡಿಎಸ್  ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಅವರ ತಲೆಯಲ್ಲೀಗ ಮತ್ತೊಂದು ಹೊಸ ಪ್ಲಾನ್ ಓಡುತ್ತಿದೆ. ಏನದು ಇಲ್ಲಿದೆ ಮಾಹಿತಿ.

ಮೈಸೂರು [ಸೆ.12]: ಜೆಡಿಎಸ್ ವರಿಷ್ಠರಿಂದಲೇ ಮಾಜಿ ಸಚಿವ ಜಿ.ಟಿ.ದೇವೇಗೌಡಂ ಅತರ ಕಾಯ್ದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರಿನಲ್ಲಿ ಪಕ್ಷದ ಸಭೆ ನಡೆಯುತ್ತಿದ್ದರು, ಸಭೆಗೆ ತೆರಳದೇ ಮಾಜಿ ಸಚಿವ ಜಿ.ಟಿ.ದೇವೇಗೌಡ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ.

ಪಕ್ಷ ಸಂಘಟನೆಯನ್ನು ತ್ಯಜಿಸಿ ಇದೀಗ ಜಿ.ಟಿ ದೇವೇಗೌಡ ಅವರು ಕ್ಷೇತ್ರದ ಹಿಡಿತ ಬಿಗಿ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶೀಘ್ರದಲ್ಲೇ ವಿಶ್ವನಾಥ್ ಅನರ್ಹತೆಯಿಂದ ತೆರವಾದ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ಜಿ.ಟಿ ದೇವೇಗೌಡ ಕುಟುಂಬ ರೆಡಿಯಾಗುತ್ತಿದೆ ಎನ್ನಲಾಗಿದೆ. 

ಸದ್ಯ ಜೆಡಿಎಸ್ ಸಭೆ ಬಿಟ್ಟು ಕಾಗೇಹಳ್ಳಿಗೆ ತೆರಳಿರುವ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜಿಟಿಡಿ ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ.