Asianet Suvarna News Asianet Suvarna News

ಮಂಗಳೂರು: ಅಂಗಾಂಗ ದಾನ​ ಘೋಷಿಸಿದ ಅಭ​ಯ​ಚಂದ್ರ ಜೈನ್‌​

* ವಿಜ​ಯ್‌ ಭಾ​ವ​ಚಿ​ತ್ರ​ಕ್ಕೆ ಹೂಮಾ​ಲೆ ಅರ್ಪಿ​ಸಿ ಶ್ರದ್ಧಾಂಜ​ಲಿ ಸಲ್ಲಿ​ಸಿ​ದ ಜೈನ್‌
* ಮರ​ಣಾ​ನಂತ​ರ ತನ್ನ ಅಂಗಾಂಗ​​ ದಾನ ಮಾಡ​ಲು ನಿರ್ಧಾರ
* ಯುವ​ಕ​ರು, ರಾಜ​ಕಾ​ರ​ಣಿ​ಗ​ಳು ಅಂಗಾಂಗ​​ ದಾನಕ್ಕೆ ಮುಂದಾ​ಗ​ಬೇ​ಕು 
 

Former Minister Abhayachandra Jain Announces Organ Donation grg
Author
Bengaluru, First Published Jun 19, 2021, 11:23 AM IST

ಮಂಗಳೂರು(ಜೂ.19): ನ​ಟ ಸಂಚಾ​ರಿ ವಿಜ​ಯ್‌ ಮರ​ಣ ನಂತ​ರ​ವೂ ಹಲ​ವು ಬದು​ಕಿ​ಗೆ ​ಜೀ​ವ​ದಾ​ನ ಮಾದ​ರಿ​ಯಾ​ಗಿ​ದ್ದಾ​ರೆ. ಅವ​ರ ನಡೆ ಸಮಾ​ಜ​​ದ ಯುವಜ​ನ​ರು ಹಾಗೂ ರಾಜ​ಕಾ​ರ​ಣಿ​ಗ​ಳಿ​ಗೆ ​ಪ್ರೇ​ರ​ಣೆ​ಯಾ​ಗಿ​ದೆ ಎಂದು ಮಾಜಿ ಸಚಿ​ವ ಅ​ಭ​ಯ​​ ಚಂದ್ರ ಜೈನ್‌ ತಿಳಿ​ಸಿ​ದ್ದಾ​ರೆ.

ದ.ಕ. ಜಿಲ್ಲಾ ಕಾಂಗ್ರೆ​ಸ್‌​ ಕ​ಚೇ​ರಿ​ಯ​ಲ್ಲಿ ಶುಕ್ರವಾರ ಸುದ್ದಿ​ಗೋ​ಷ್ಠಿ​ಯ​ಲ್ಲಿ ಸಂಚಾ​ರಿ ವಿಜ​ಯ್‌ ಭಾ​ವ​ಚಿ​ತ್ರ​ಕ್ಕೆ ಹೂಮಾ​ಲೆ ಅರ್ಪಿ​ಸಿ ಶ್ರದ್ಧಾಂಜ​ಲಿ ಸಲ್ಲಿ​ಸಿ​ದ ಅವ​ರು, ಮರ​ಣಾ​ನಂತ​ರ ತಾನೂ ಕೂಡಾ ತನ್ನ ಅಂಗಾಂಗ​ಗ​ಳ​ನ್ನು ದಾನ ಮಾಡ​ಲು ನಿರ್ಧ​ರಿ​​​ಸಿ​ರು​ವು​ದಾ​ಗಿ ಪ್ರಕ​ಟಿ​ಸಿ​ದ​ರು.

7 ಜನರಿಗೆ ಬದುಕು ಕೊಟ್ಟು ಉಸಿರು ನಿಲ್ಲಿಸಿದ ಸಂಚಾರಿ ವಿಜಯ್!

‘​ನ​ನ್ನ ಮರ​ಣ​ದ ಬಳಿ​ಕ ನನ್ನ ಅಂಗಾಂಗ​ಳ​ನ್ನು ದಾನ ಮಾಡು​ವಂತೆ ಉಯಿ​ಲು ಬರೆ​ಯ​ಲು ನಿರ್ಧರಿ​ಸಿ​ದ್ದೇ​ನೆ​’​ ಎಂದು ಹೇಳಿ​ದ ಅವ​ರು, ದ.ಕ. ಜಿಲ್ಲಾ ಕಾಂಗ್ರೆ​ಸ್‌​ನ ಯುವ​ಕ​ರು, ರಾಜ​ಕಾ​ರ​ಣಿ​ಗ​ಳು ಕೂಡಾ ಈ ಕಾರ್ಯ​ಕ್ಕೆ ಮುಂದಾ​ಗ​ಬೇ​ಕು ಎಂದು ಅವ​ರು ಹೇಳಿ​ದ​ರು.

ಪಾಶ್ಚಾ​ತ್ಯ ದೇಶ​ಗ​ಳ​ಲ್ಲಿ ಈ ಅಂಗಾಂಗ ದಾನ ಪ್ರಕ್ರಿ​ಯೆ ಸಹ​ಜ​ವಾ​ಗಿ ನಡೆ​ಯು​ತ್ತ​ದೆ. ನಮ್ಮ​ಲ್ಲಿ​ಯೂ ಇಂತ​ಹ ​ಪ್ರ​ಕ್ರಿ​ಯೆ ಮೂಲ​ಕ ​ಕ​ಣ್ಣು, ಹೃದ​ಯ, ​ಕಿ​ಡ್ನಿ ​ಸೇ​ರಿ​ದಂತೆ ದೇಹ​ದ ವಿವಿ​ಧ ಭಾಗ​ಗ​ಳಿಗಾ​ಗಿ ಹಾ​​ತೊ​ರೆ​ಯು​ತ್ತಿ​ರು​ವ​ವ​ರ ಬಾಳಿ​ಗೆ ನಾವು ಬೆಳ​ಕಾ​ಗ​ಬ​ಹು​ದು. ಅದ​ನ್ನು ಸಂಚಾ​ರಿ ವಿ​ಜ​ಯ್‌ ಮಾಡಿ​ ತೋರಿ​ಸಿ​ದ್ದಾ​ರೆ ಎಂದು ಅವ​ರು ಹೇಳಿ​ದರು.

ಯುವ ಜಿಲ್ಲಾ ಕಾಂಗ್ರೆ​ಸ್‌ ಮಾಜಿ ಅಧ್ಯ​ಕ್ಷ ಮಿಥು​ನ್‌ ರೈ, ಮುಖಂಡ​ರಾ​ದ ವಿನ​ಯ್‌​ರಾ​ಜ್‌,​ ಶಾಲೆ​ಟ್‌ ಪಿಂಟೋ, ಸದಾ​ಶಿ​ವ ಉಳ್ಳಾ​ಲ್‌, ಲಾರೆ​ನ್ಸ್‌, ​ಪ್ರ​ಕಾ​ಶ್‌ ಸಾಲ್ಯಾ​ನ್‌, ಸವ​ದ್‌ ಸುಳ್ಯ, ನಿಖಿಲ್‌ ಪೂಜಾ​ರಿ, ಫಾರೂ​ಕ್‌, ಪದ್ಮ​ನಾ​ಭ ಇ​ದ್ದ​ರು.
 

Follow Us:
Download App:
  • android
  • ios