MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಚಿಕ್ಕಬಾಣಾವರ ಅಪ್ಪ-ಮಗನ ಸಾವಿನ ಕೇಸಿಗೆ ಬಿಗ್ ಟ್ವಿಸ್ಟ್; ಪ್ರಿಯಕರನೊಂದಿಗೆ ಮಾಡಿದ ಮಸಲತ್ತು ಬಿಚ್ಚಿಟ್ಟ ಹೆಂಡತಿ!

ಚಿಕ್ಕಬಾಣಾವರ ಅಪ್ಪ-ಮಗನ ಸಾವಿನ ಕೇಸಿಗೆ ಬಿಗ್ ಟ್ವಿಸ್ಟ್; ಪ್ರಿಯಕರನೊಂದಿಗೆ ಮಾಡಿದ ಮಸಲತ್ತು ಬಿಚ್ಚಿಟ್ಟ ಹೆಂಡತಿ!

ಚಿಕ್ಕಬಾಣಾವರದಲ್ಲಿ ಗಂಡ ಹಾಗೂ 5 ವರ್ಷದ ಮಗ ಸತ್ತಿದ್ದರೂ ತನಗೆ ಗೊತ್ತೇ ಇಲ್ಲವೆಂದು ಕಥೆ ಕಟ್ಟಿದ್ದ ಹೆಂಡತಿ ಪೊಲೀಸರು ಚೆನ್ನಾಗಿ ರುಬ್ಬುತ್ತಿದ್ದಂತೆ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಪ್ರಿಯಕರನೊಂದಿಗೆ ಸೇರಿಕೊಂಡು ಗಂಡ ಹಾಗೂ ಮಗುವಿನ ಕಥೆ ಮುಗಿಸಿದ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

2 Min read
Author : Suvarna News
Published : Aug 18 2026, 09:35 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಗಂಡ ಹಾಗೂ 5 ವರ್ಷದ ಮಗ ಸತ್ತಿದ್ದರೂ ತನಗೆ ಗೊತ್ತೇ ಇಲ್ಲವೆಂದು ಕಥೆ ಕಟ್ಟಿದ್ದ ಹೆಂಡತಿ ಪೊಲೀಸರು ಚೆನ್ನಾಗಿ ರುಬ್ಬುತ್ತಿದ್ದಂತೆ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಪ್ರಿಯಕರನೊಂದಿಗೆ ಸೇರಿಕೊಂಡು ಗಂಡ ಹಾಗೂ ಮಗುವನ್ನು ಕೊಲೆ ಮಾಡಿದ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : Asianet News

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಸಮೀಪದ ಗುಡ್ಡೆ ಬಸವಪುರದಲ್ಲಿ ಅಭಿನಂದನ್ (33) ಹಾಗೂ ಆತನ 5 ವರ್ಷದ ಪುತ್ರ ಯದುವೀರ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಮೇಲ್ನೋಟಕ್ಕೆ ಇದು ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿತ್ತು. ಈ ಘಟನೆ ಸಂಬಂಧ ಮೃತನ ಪತ್ನಿ ಹರಿಣಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಸಹಜ ಸಾವು ಎಂದು ಹೇಳುತ್ತಿದ್ದರೂ, ಪೊಲೀಸರು ತನಿಖೆಯ ಸ್ಟೈಲ್ ಚೇಂಗ್ ಮಾಡಿದಾಗ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.

Related Articles

Related image1
ಬೆಂಗಳೂರು: ಮನೆಯಿಂದ ಓಡಿಹೋಗಿ, ವಾಪಸ್ ಬಂದಿದ್ದ ಹೆಂಡತಿ; ಈಗ ಗಂಡ, 5 ವರ್ಷದ ಮಗು ಅನುಮಾನಾಸ್ಪದ ಸಾವು!
Related image2
Kalaburagi: ಕೋಪದ ಕೈಗೆ ಬುದ್ಧಿ ಕೊಟ್ಟ ಗಂಡ: ಹೆಂಡತಿ ಮೇಲಿನ ಸಿಟ್ಟಿಗೆ ಪತ್ನಿ, ಮಕ್ಕಳಿದ್ದ ರೂಮ್‌ಗೆ ನುಗ್ಗಿ..
35
Image Credit : Asianet News

ಮನೆಗೆ ಸೇರಿಸಿಕೊಂಡಿದ್ದೇ ತಪ್ಪಾಯ್ತು?

ಕೆಲವು ದಿನಗಳ ಹಿಂದೆ ಮನೆಯಿಂದ ಬೇರೊಬ್ಬನ ಜೊತೆಗೆ ಓಡಿ ಹೋಗಿದ್ದ ಹರಿಣಿ 3 ತಿಂಗಳ ಬಳಿಕ ಮನೆಗೆ ವಾಪಸ್ ಬಂದಿದ್ದಳು. ಆದರೆ, ಮನೆಯಲ್ಲಿ ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನೂ ಮತ್ತೆ ಸಂಸಾರ ಮಾಡಿಕೊಂಡು ಹೋಗುವಂತೆ ಬುದ್ಧಿ ಹೇಳಿ ಒಂದುಗೂಡಿಸಿದ್ದರು. ಆದರೆ, ಹೀಗೆ ಮನೆಯಿಂದ ಓಡಿಹೋಗಿದ್ದವಳನ್ನು ಕ್ಷಮಿಸಿ ಮನೆಗೆ ವಾಪಸ್ ಸೇರಿಸಿಕೊಂಡಿದ್ದೇ ಗಂಡನ ದೊಡ್ಡ ತಪ್ಪಾಗಿ ಹೋಯ್ತು. ಇತ್ತ ಹರಿಣಿ ಮಾತ್ರ ತನ್ನ ಪ್ರಿಯಕರನ ಸಹವಾಸವನ್ನು ಬಿಟ್ಟಿರಲಿಲ್ಲ. ಗಂಡನಿಗೆ ಚಟ್ಟ ಕಟ್ಟಿ ಪ್ರಿಯಕರನೊಂದಿಗೆ ಸುಖವಾಗಿರಬಹುದು ಎಂದು ಯೋಜನೆ ರೂಪಿಸಿದ್ದಳು. ಇದಕ್ಕೆ ಆಕೆಯ ಪ್ರಿಯಕರನೂ ಸಾಥ್ ನೀಡಿದ್ದನು.

45
Image Credit : Asianet News

ಮಗ ಕೊಲೆ ನೋಡಿದನೆಂದು ಅವನ ಉಸಿರು ನಿಲ್ಲಿಸಿದಳು

ಭಾನುವಾರ ರಾತ್ರಿ 11 ಗಂಟೆಗೆ ಪ್ರಿಯಕರ ವಿನಯ್‌ನನ್ನು ಕರೆಸಿಕೊಂಡಿದ್ದಾಳೆ. ಪ್ರಿಯಕರ ಮನೆಗೆ ಬರುವ ವೇಳೆಗೆ ಸಿಸಿ ಕ್ಯಾಮೆರಾ ಆಫ್ ಮಾಡಿದ್ದಾಳೆ. ರಾತ್ರಿ ಹಾಸಿಗೆಯಲ್ಲಿ ಮಲಗಿದ್ದ ಗಂಡ ಅಭಿನಂದನ್ ತಲೆಗೆ ದಪ್ಪನೆಯ ಸೌಟ್‌ನಿಂದ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಆದರೆ, ಗಂಡನಿಗೆ ಹೊಡೆದು ಕೊಲೆ ಮಾಡದೋದನ್ನ ತನ್ನ 5 ವರ್ಷದ ಮಗ ಯದುವೀರ್ ನೋಡಿದ್ದನು. ಈ ಮಗು ಕೊಲೆ ಮಾಡುವುದನ್ನುನೋಡಿದಗ್ದರಿಂದ ನಾಳೆ ನಮಗೆ ತೊಂದರೆಯಾಗ್ತಾನೆ ಎಂದು ಪ್ಲಾನ್ ಮಾಡಿ ಮಗನನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಇದಕ್ಕೆ ಆಕೆಯ ಪ್ರಿಯಕರನೂ ಸಾಥ್ ನೀಡಿದ್ದಾನೆ.

55
Image Credit : Asianet News

ಇನ್ನು ಗಂಡನ ತಲೆಗೆ ಹೊಡೆತ ಬಿದ್ದು, ಮನೆಯಲ್ಲಿ ರಕ್ತಸ್ರಾವ ಉಂಟಾಗಿತ್ತು. ಪೊಲೀಸರಿಗೆ ಕೊಲೆಯ ಸುಳಿವು ಸಿಗಬಾರದೆಂದು ಎಲ್ಲ ರಕ್ತವನ್ನೂ ತೊಳೆದು ಕ್ಲೀನ್ ಮಾಡಿದ್ದರು.ಜೊತೆಗೆ, ಅಭಿನಂದನ್ ರಕ್ತದ ಕಲೆ ಬಟ್ಟೆ ಬದಲಾಯಿಸಿ ರಾತ್ರೋ ರಾತ್ರಿ ಒಗೆದುಹಾಕಿದ್ದಳು. ನಂತರ, ಗಂಡನೇ ನಿದ್ದೆಯಲ್ಲಿ ಮಗುವಿನ ಮೇಲೆ ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿದ್ದಳು. ಕೊಲೆಯ ಪ್ಲಾನ್ ಸಕ್ಸಸ್ ನಂತರ ವಿನಯ್ ಅಲ್ಲಿಂದ ಪರಾರಿಯಾಗಿದ್ದನು. ಇದೀಗ ಪೊಲೀಸರು ಆರೋಪಿ ವಿನಯ್ ಬೆನ್ನು ಬಿದ್ದಿದ್ದಾರೆ.

About the Author

SN
Suvarna News
ಬೆಂಗಳೂರು
ಕ್ರೈಮ್ ನ್ಯೂಸ್
ಗಂಡ
ಸಂಬಂಧಗಳು

Latest Videos
Recommended Stories
Recommended image1
Bengaluru: ಒಂದೇ ದಿನ ₹35 ಲಕ್ಷ ಮೌಲ್ಯದ HMT ವಾಚ್‌ ಮಾರಾಟ: ಹೆಚ್‌ಡಿ ಕುಮಾರಸ್ವಾಮಿ
Recommended image2
ನೈಸ್ ರೋಡ್ ಟೋಲ್ ಫ್ರೀ ಆಗುತ್ತಾ?: ಸರ್ಕಾರದ 6 ಸಚಿವರ ಸಮಿತಿಯಿಂದ ತನಿಖೆ ಶುರು, ನೈಸ್ ಸಂಸ್ಥೆಗೆ ಶಾಕ್!
Recommended image3
ಬೆಂಗಳೂರು ಟ್ರಾಫಿಕ್ ಪೊಲೀಸ್‌ಗೆ ಹಲ್ಲೆ, ಅರೆಸ್ಟ್ ಆಗಿದ್ದ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜಣ್ಣ ಬಿಡುಗಡೆ
Related Stories
Recommended image1
ಬೆಂಗಳೂರು: ಮನೆಯಿಂದ ಓಡಿಹೋಗಿ, ವಾಪಸ್ ಬಂದಿದ್ದ ಹೆಂಡತಿ; ಈಗ ಗಂಡ, 5 ವರ್ಷದ ಮಗು ಅನುಮಾನಾಸ್ಪದ ಸಾವು!
Recommended image2
Kalaburagi: ಕೋಪದ ಕೈಗೆ ಬುದ್ಧಿ ಕೊಟ್ಟ ಗಂಡ: ಹೆಂಡತಿ ಮೇಲಿನ ಸಿಟ್ಟಿಗೆ ಪತ್ನಿ, ಮಕ್ಕಳಿದ್ದ ರೂಮ್‌ಗೆ ನುಗ್ಗಿ..
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved