Asianet Suvarna News Asianet Suvarna News

ಸಂಸದ ಡಿ.ಕೆ.​ಸು​ರೇಶ್‌ ವಿರುದ್ಧ ಹೆಚ್‌ಡಿಕೆ ಏಕ​ವ​ಚ​ನ​ದಲ್ಲಿ ವಾಗ್ದಾಳಿ

ಅರ್ಕಾ​ವತಿ ನದಿ​ ದಾಟು​ವಾಗ ಅಮಾ​ಯಕ ಜನರು ಸಾವ​ನ್ನ​ಪ್ಪು​ತ್ತಿ​ದ್ದಾರೆ. ಇದ​ಕ್ಕೆಲ್ಲ ಸಂಸ​ದನ ಚೇಲಾ​ಗಳು ನಡೆ​ಸು​ತ್ತಿ​ರುವ ಮರಳು ದಂಧೆ ಕಾರಣ| ಮರಳು ದಂಧೆಯಿಂದಾಗಿ 15ರಿಂದ 20 ಅಡಿ​ಯಷ್ಟು ಗುಂಡಿ​ಗಳು ಬಿದ್ದಿವೆ. ಅಷ್ಟಕ್ಕೂ ಮರಳು ದಂಧೆ ನಡೆ​ಸಲು ಸಂಸ​ದ​ರ​ಲ್ಲದಿದ್ದರೆ ಉತ್ತೇ​ಜನ ನೀಡಿ​ದ​ವರು ಯಾರೆಂದು ಪ್ರಶ್ನಿ​ಸಿ​ದ ಹೆಚ್‌ಡಿಕೆ| 

Former CM H D Kumaraswamy Slams On MP D K Suresh grg
Author
Bengaluru, First Published Nov 6, 2020, 11:59 AM IST

ರಾಮ​ನ​ಗ​ರ(ನ.06): ಸಂಸ​ದನ ಚೇಲಾ​ಗಳು ಮರಳು ದಂಧೆ ಮಾಡಿ​ಕೊಂಡು ಅಮಾ​ಯಕ ಜನರ ಜೀವ​ದ ಜೊತೆ ಚೆಲ್ಲಾಟ ಆಡು​ತ್ತಿ​ದ್ದಾರೆ ಎಂದು ಸಂಸದ ಡಿ.ಕೆ.​ಸು​ರೇಶ್‌ ವಿರುದ್ಧ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಏಕ ವಚ​ನ​ದಲ್ಲಿ ವಾಗ್ದಾಳಿ ನಡೆ​ಸಿ​ದ್ದಾರೆ. 

ತಾಲೂ​ಕಿನ ಕೂಗ​ನಲ್‌ನಲ್ಲಿ ಮಾತ​ನಾ​ಡಿದ ಅವರು, ಅರ್ಕಾ​ವತಿ ನದಿ​ ದಾಟು​ವಾಗ ಅಮಾ​ಯಕ ಜನರು ಸಾವ​ನ್ನ​ಪ್ಪು​ತ್ತಿ​ದ್ದಾರೆ. ಇದ​ಕ್ಕೆಲ್ಲ ಸಂಸ​ದನ ಚೇಲಾ​ಗಳು ನಡೆ​ಸು​ತ್ತಿ​ರುವ ಮರಳು ದಂಧೆ ಕಾರಣ ಎಂದು ಕಿಡಿಕಾರಿದ್ದಾರೆ. 

ಮುನಿ​ರತ್ನ ಸಿಎಂ ಆದರೆ ಖುಷಿ ಪಡುತ್ತೇನೆ : ಡಿ.ಕೆ.ಸುರೇಶ್

ಕಾಂಗ್ರೆಸ್‌ ಸರ್ಕಾ​ರದ ಐದು ವರ್ಷ​ಗಳ ಅವ​ಧಿ​ಯಲ್ಲಿ ಅವ್ಯಾ​ಹ​ತ​ವಾಗಿ ಮರಳು ದಂಧೆ ನಡೆ​ದಿದೆ. ಅರ್ಕಾ​ವತಿ ನದಿ​ಯಲ್ಲಿ ಮರಳು ದಂಧೆಯಿಂದಾಗಿ 15ರಿಂದ 20 ಅಡಿ​ಯಷ್ಟು ಗುಂಡಿ​ಗಳು ಬಿದ್ದಿವೆ. ಅಷ್ಟಕ್ಕೂ ಮರಳು ದಂಧೆ ನಡೆ​ಸಲು ಸಂಸ​ದ​ರ​ಲ್ಲದಿದ್ದರೆ ಉತ್ತೇ​ಜನ ನೀಡಿ​ದ​ವರು ಯಾರೆಂದು ಪ್ರಶ್ನಿ​ಸಿ​ದ್ದಾರೆ. 
 

Follow Us:
Download App:
  • android
  • ios