ಮುನಿರತ್ನ ಸಿಎಂ ಆದರೆ ನಾನು ಖುಷಿ ಪಡುತ್ತೇನೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ
ರಾಮನಗರ (ನ.05): ರಾಜರಾಜೇಶ್ವರಿ ನಗರ ಕ್ಷೇತ್ರ ಉಪಚುನಾವಣೆಯಲ್ಲಿ ಜನರ ತೀರ್ಪು ನಮ್ಮ ಪರವಾಗಿರಲಿದೆ ಎಂದು ಭಾವಿಸಿದ್ದೇವೆ.
Add Asianetnews Kannada as a Preferred Source

ಹಾಗೊಂದು ವೇಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆದ್ದು ಪವರ್, ಹೋಂ ಮಿನಿಸ್ಟರ್ ಅಥವಾ ಸಿಎಂ ಆಗಲಿ ನನಗೇನು.
ನನ್ನ ಕ್ಷೇತ್ರದವರು ಸಿಎಂ ಆದರೆಂದು ಸಂತೋಷ ಪಡುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.
‘ನಾನೊಬ್ಬ ಆಶಾವಾದಿ, ಜನರ ತೀರ್ಪು ನಮ್ಮ ಪರವಾಗಿ ಬರಲಿದೆ ಎನ್ನುವ ವಿಶ್ವಾಸವಿದೆ. ಗೆದ್ದ ಮೇಲೆ ಮುನಿರತ್ನಗೆ ಮಂತ್ರಿಗಿರಿ ಸಿಗುತ್ತದೆ. ನನ್ನ ಕ್ಷೇತ್ರದವರು ಮಂತ್ರಿಯಲ್ಲದೆ ಸಿಎಂ ಆದರೂ ಸಂತೋಷ’ ಎಂದಿದ್ದಾರೆ.
ಈಗಾಗಲೇ ಉಪ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶ ಇದೇ ನವೆಂಬರ್ 10 ರಂದು ಬರಲಿದ್ದು, ಕುತೂಹಲ ಸೃಷ್ಟಿಸಿದೆ.
