ತಲಕಾವೇರಿಯಲ್ಲಿ ಮೃತಪಟ್ಟ ಅರ್ಚಕರ ಕುಟುಂಬದ ವಿರುದ್ಧ ಒಂದೊಂದೇ ಆರೋಪಗಳು ಕೇಳಿ ಬರುತ್ತಿವೆ. ಆದರೆ ಈ ಆರೋಪದ ಬಗ್ಗೆ ಅವರ ಕುಟುಂಬಸ್ಥರು ಹೇಳೋದೇ ಬೇರೆ..

ಮಡಿಕೇರಿ (ಸೆ.01) : ಕೊಡಗಿನ ತಲಕಾವೇರಿ ಬಳಿಯ ಗಜಗಿರಿ ಗುಡ್ಡ ಕುಸಿದು ಮೃತಪಟ್ಟ ಅರ್ಚಕ ನಾರಾಯಣಾಚಾರ್‌ ಚಾರಿತ್ರ್ಯಹರಣ ಮಾಡಲಾಗಿದ್ದು, ಪ್ರಧಾನ ಅರ್ಚಕರ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಆಚಾರ್‌ ಕುಟುಂಬದ ವಕ್ತಾರ ಜಯಪ್ರಕಾಶ್‌ ರಾವ್‌ ಸ್ಪಷ್ಟಪಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 300 ವರ್ಷಗಳಿಂದ ತಲಕಾವೇರಿಯಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿರುವ ನಾರಾಯಣಾಚಾರ್ಯ ಅವರ ಕುಟುಂಬಸ್ಥರಿಗೆ ಆಗಿನ ಲಿಂಗರಾಗ ಅರಸರು ತಲಕಾವೇರಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಜಮ್ಮಾ, ಉಂಬಳಿಯಾಗಿ ನೂರಾರು ಎಕರೆ ಜಾಗವನ್ನು ನೀಡಿದ್ದಾರೆ. 

ತಲ​ಕಾ​ವೇರಿ ಅರ್ಚಕರ ಪುತ್ರಿಯರು ಮತಾಂತರ, ಬದಲಾದ ಹೆಸರು:​ ಚೆಕ್‌ ವಾಪ​ಸ್‌

ಆದರೂ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊರಿಸಲಾಗಿದೆ ಎಂದರು. ಇನ್ನು ಅಮ್ಮಕೊಡವರು ಇತಿಹಾಸ ಸೃಷ್ಟಿಸಿಕೊಂಡು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಲು ಹಕ್ಕು ಪ್ರಸ್ತಾಪಿಸಿದ್ದಾರೆ. 
ಅವರ ಬಳಿ ಇರುವ ದಾಖಲೆಗಳನ್ನು ಅವರು ನೀಡಲಿ, ನಮ್ಮ ಬಳಿ ಇರುವ ದಾಖಲೆಯನ್ನು ನಾವು ನೀಡುತ್ತೇವೆ. ಈ ವಿಚಾರದಲ್ಲೂ ನ್ಯಾಯ ತೀರ್ಮಾನಕ್ಕೆ ಸಿದ್ಧರಿದ್ದೇವೆ ಎಂದು ಜಯಪ್ರಕಾಶ್‌ರಾವ್‌ ಹೇಳಿದರು.

"