ಡಿ.ಕೆ. ಶಿವಕುಮಾರ ಮುಂದಿನ ಮುಖ್ಯಮಂತ್ರಿ ಆಗುವುದು ನನ್ನ ಕನಸಾಗಿದೆ. ಇದಕ್ಕಾಗಿ ಜೈನ್ ಆಚಾರ್ಯರು ಆಶೀರ್ವಾದ ಮಾಡುತ್ತೇವೆ ಎಂದರು. ಆಗ ವೇದಿಕೆ ಮೇಲಿದ್ದ ಜೈನ ಮುನಿಗಳು ಕೈ ಮೇಲೆ ಮಾಡಿ ಡಿಕೆಶಿಗೆ ಆಶೀರ್ವದಿಸಿದ ಗುಣಧರ ನಂದಿ ಮಹಾರಾಜರು
ಹುಬ್ಬಳ್ಳಿ(ಜ.22): ವಿದೇಶಿಗರು ಹಿಂಸೆ ಮತ್ತು ಅತಿಕ್ರಮಣದಿಂದ ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ನಾಶಕ್ಕೆ ಸಾಕಷ್ಟು ಬಾರಿ ಪ್ರಯತ್ನಿಸಿದರು. ಇದರ ಮಧ್ಯೆಯೂ ಎಲ್ಲ ಧರ್ಮಗಳ ಸಾಧು-ಸಂತರ ಪರಿಶ್ರಮದ ಫಲವಾಗಿ ದೇಶದ ಸಂಸ್ಕೃತಿಯ ಉಳಿವಿಗೆ ಕಾರಣವಾಗಿದೆ ಎಂದು ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ ಹೇಳಿದರು.
ತಾಲೂಕಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕ ಹಿನ್ನಲೆ ಮಂಗಳವಾರ ಪಾರ್ಶ ನಾಥರಿಗೆ ಜಲಾಭಿಶೇಕ ಮಾಡುವ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ನಾಗರಿಕತೆಯನ್ನು ನಾಶಪಡಿಸಲು ಅನೇಕ ಪ್ರಯತ್ನಗಳು ನಡೆದರೂ ಅದು ಸಫಲವಾ ಗಲಿಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿ ಹಲವು ಅಧಿಕಾರಿಗಳು ಭಾರತೀಯ ಧರ್ಮ ಆಧಾರಿತ ಗುರುಕುಲ ಪದ್ಧತಿ ಯನ್ನು ನಾಶಪಡಿಸಲು ಮುಂದಾದರು. ಅಲ್ಲದೇ ಇನ್ನೂ ಕೆಲವರು ಗುರುಕುಲ ಪದ್ಧತಿ ಮರೆಮಾಚಲು ಪ್ರಯತ್ನಿಸಿದರು. ಸಾವಿರಾರು ವರ್ಷಗಳ ಬಹು ಪ್ರಾಚೀನವಾಗಿರುವ ನಮ್ಮ ಭಾರತೀಯ ಸಂಸ್ಕೃತಿ, ನಾಗರಿಕತೆಯನ್ನು ಯಾರಿಂದಲೂ ದಮನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಹಲವು ಬಾರಿ ನಾನು ತ್ಯಾಗ ಮಾಡಿದ್ದೇನೆ, ನನಗೆ ಹುದ್ದೆ ಅವಶ್ಯಕತೆ ಇಲ್ಲ: ಡಿ.ಕೆ.ಶಿವಕುಮಾರ್
ಶಿಕ್ಷಣಕ್ಕೆ ಆದ್ಯತೆ ನೀಡಿ:
ದೇಶದ ಜನತೆಯನ್ನು ಬಡತನದಿಂದ ದೂ ರ ಮಾಡಲು ಶಿಕ್ಷಣವು ಅಗತ್ಯವಾಗಿದೆ. ಪಾಲಕರು ಪ್ರತಿ ಯೊಬ್ಬ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ವರೂರಿನ ಆಚಾರ್ಯ ಗುಣಧರನಂದಿ ಮಹರಾಜ ರು ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಜತೆಗೆ ಶಿಕ್ಷಣ ಪ್ರಸಾರಕ್ಕೂ ಹೆಚ್ಚಿನ ಮಹತ್ವ ನೀಡಿರುವುದು ಶ್ಲಾಘನೀಯ ಕಾರ್ಯ ಎಂದರು.
ಪ್ರಸಿದ್ಧ ಯಾತ್ರಾಸ್ಥಳ:
ವರೂರು ಎಂಬ ಚಿಕ್ಕ ಹಳ್ಳಿಯ ನ್ನು ತೀರ್ಥಕ್ಷೇತ್ರವಾಗಿಸುವಮೂಲಕ ಜಗತ್ತೇತಿರುಗಿನೋಡುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವರೂರಿನ ಈ ಕ್ಷೇತ್ರ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿ ಮಾರ್ಪಾಡು ಆಗಲಿದೆ. ಇಲ್ಲಿರುವ ಪಾರ್ಶ್ವನಾಥರ ಮೂರ್ತಿ ಬಹಳಷ್ಟು ಆಕರ್ಷಣೆಯಾಗಿದೆ. ಶ್ರವಣಬೆಳಗೊಳದ ಮಾದರಿಯಲ್ಲಿ ಆಕರ್ಷಣೆ ಹೊಂದಿ ದೆ ಎಂದು ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಕೃತಿಯ ಉಳಿವಿಗೆ ಶ್ರಮಿಸಿ: ಇದೊಂದು ಸರ್ವ ಧರ್ಮ ಸಮನ್ವಯದ ಸಮ್ಮೇಳನ ಭಾರತದ ಸದ್ಭಾವನೆ ಸರ್ವಧರ್ಮದ ರಾಷ್ಟ್ರ. ಭಾರತವು ಸರ್ವಧರ್ಮ ಶ್ರದ್ದೆಯ ಜನರು ವಾಸಿಸುವ ಆಧ್ಯಾತ್ಮಿಕ ರಾಷ್ಟ್ರವಾಗಿ ದೆ. ದೇಶದ ಪರಂಪರೆ ಮತ್ಯಾವ ದೇಶದಲ್ಲೂ ಇಲ್ಲ. ಯುವಕರಾದಿಯಾಗಿ ಎಲ್ಲರೂ ದೇಶದ ಸಂಸ್ಕೃತಿ, ಪರಂಪರೆ ಉಳಿವಿಗೆ ಶ್ರಮಿಸುವಂತೆ ಕರೆ ನೀಡಿದರು.
ಗುರುದೇವ ಆಚಾರ್ಯ ಕುಂತುಸಾಗರ ಮಾಹಾರಾಜರು ಮಾತನಾಡಿ, 12 ವರ್ಷಗಳ ಬಳಿಕ ವರೂರು ತೀರ್ಥಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕವನ್ನು ಕಣ್ಣುಂಬಿಕೊಳ್ಳಲು ದೇಶದ ಹಲವು ಭಾಗಗಳಿಂದ ಆಗಮಿಸಿರುವ ಭಕ್ತರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ 11 ಆಚಾರ್ಯ ಸಂಘಗಳ ನೇತೃತ್ವದಲ್ಲಿ ಪೂಜಾಕಾರ್ಯಕ್ರಮ ನೆರ ವೇರಿದವು. ಆಚಾರ್ಯಗುಣಧರನಂದಿಮಹಾರಾಜರು ಮಾತನಾಡಿದರು.
ಈ ವೇಳೆ ಸೂರ್ಯಸಾಗರ ಮಹಾರಾಜ, ತರುಣಸಾಗರ ಮಹಾರಾಜ, ಧರ್ಮಸೇನ ಭಟ್ಟಾರಕ ಶ್ರೀ, ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಅಧ್ಯಕ್ಷ ಸುರೇಂದ್ರ ಹೆಗ್ಗಡೆ, ರಮೇಶ ಬಾಫನಾ, ಮಹೇಂದ್ರ ಸಿಂಧಿ, ಗೌತಮ್ ಬಾಫನಾ, ಉದಯ ಹಜಾರೆ, ಆನಂದ ಕುಲಕರ್ಣಿ ಸೇರಿದಂತೆ ಹಲವರಿದ್ದರು.
ಡಿಕೆಶಿ ಮುಖ್ಯಮಂತ್ರಿ ಆಗುತ್ತಾರೆ: ಗುಣಧರ ನಂದಿ ಮಹಾರಾಜರು
ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಇತ್ತ ವರೂರ ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರ ಮಹಾರಾಜರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮುಂದೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಡಿಸಿಎಂ ಡಿ.ಕೆ. ಶಿವಕುಮಾರ ಭಾಗಿಯಾಗಿದ್ದರು.
ಸಿಎಂ ಆಗುವುದಕ್ಕೆ ಆತುರವಿಲ್ಲ, ಕಾಯುವುದಕ್ಕೆ ನಾ ರೆಡಿ: : ಡಿಕೆಶಿ
ಈ ವೇಳೆ ಮಾತನಾಡಿದ ಗುಣಧರ ನಂದಿ ಮಹಾರಾಜರು. ಡಿ.ಕೆ. ಶಿವಕುಮಾರ ಮುಂದಿನ ಮುಖ್ಯಮಂತ್ರಿ ಆಗುವುದು ನನ್ನ ಕನಸಾಗಿದೆ. ಇದಕ್ಕಾಗಿ ಜೈನ್ ಆಚಾರ್ಯರು ಆಶೀರ್ವಾದ ಮಾಡುತ್ತೇವೆ ಎಂದರು. ಆಗ ವೇದಿಕೆ ಮೇಲಿದ್ದ ಜೈನ ಮುನಿಗಳು ಕೈ ಮೇಲೆ ಮಾಡಿ ಡಿಕೆಶಿಗೆ ಆಶೀರ್ವದಿಸಿದರು.
ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಶಿವಕುಮಾರ ಪಟ್ಟಷ್ಟು ಕಷ್ಟವನ್ನು ಯಾರೂ ಪಟ್ಟಿಲ್ಲ. ಇದನ್ನು ರಾಜ್ಯದ ಜನತೆ ಮರೆತಿಲ್ಲ. ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಅವರೊಬ್ಬ ಧರ್ಮನಿಷ್ಠ, ತ್ಯಾಗ ನಿಷ್ಠ ಎಂದರು. ಸರ್ಕಾರ ಜೈನ ನಿಗಮ ಮಂಡಳಿ ಸ್ಥಾಪಿಸಬೇಕೆಂದ ಶ್ರೀಗಳು, ಯಾವಾಗಲೂ ಕೊಡುವ ಕೈಗಳಾದ ಜೈನರು ಇದೇ ಮೊದಲ ಬಾರಿಗೆ ಸರ್ಕಾರದ ಬಳಿ ನಿಗಮ ಮಂಡಳಿಗೆ ಕೈಚಾಚಿದೆ. ಸರ್ಕಾರ ಸಮಾಜದ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.
