ಮುಳುಗಡೆ ಜಿಲ್ಲೆ ಉಸ್ತುವಾರಿ ಡಿಸಿಎಂ ಕಾರಜೋಳ ಹೆಗಲಿಗೆ
ಮುಳುಗಡೆ ಜಿಲ್ಲೆ ಉಸ್ತುವಾರಿ ಡಿಸಿಎಂ ಕಾರಜೋಳ ಹೆಗಲಿಗೆ| ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಗೋವಿಂದ ಕಾರಜೋಳ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ| ಹೆಚ್ಚುವರಿಯಾಗಿ ಕಲಬುರಗಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಕಾರಜೋಳ ಹೆಗಲಿಗೆ|
ಬಾಗಲಕೋಟೆ: (ಸೆ. 17) ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ರಾಜ್ಯ ಸರಕಾರ ನೇಮಕ ಮಾಡಿದೆ.
ಕಾರಜೋಳ ಅವರಿಗೆ ಬಾಗಲಕೋಟೆ ಜೊತೆಗೆ ಹೆಚ್ಚುವರಿಯಾಗಿ ಕಲಬುರಗಿ ಜಿಲ್ಲಾ ಪ್ರಭಾರರನ್ನು ವಹಿಸಲಾಗಿದೆ.
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬರೋಬ್ಬರಿ 53 ದಿನಗಳ ಬಳಿಕ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಕ ಮಾಡಿದ್ದಾರೆ.