Asianet Suvarna News Asianet Suvarna News

ಮುಳುಗಡೆ ಜಿಲ್ಲೆ ಉಸ್ತುವಾರಿ ಡಿಸಿಎಂ ಕಾರಜೋಳ ಹೆಗಲಿಗೆ

ಮುಳುಗಡೆ ಜಿಲ್ಲೆ ಉಸ್ತುವಾರಿ ಡಿಸಿಎಂ ಕಾರಜೋಳ ಹೆಗಲಿಗೆ| ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಗೋವಿಂದ ಕಾರಜೋಳ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ| ಹೆಚ್ಚುವರಿಯಾಗಿ ಕಲಬುರಗಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಕಾರಜೋಳ ಹೆಗಲಿಗೆ|

Deputy CM Govind Karjol Becomes Bagalakot District Minister
Author
Bengaluru, First Published Sep 17, 2019, 2:10 PM IST

ಬಾಗಲಕೋಟೆ: (ಸೆ. 17) ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ರಾಜ್ಯ ಸರಕಾರ ನೇಮಕ ಮಾಡಿದೆ.

ಕಾರಜೋಳ ಅವರಿಗೆ ಬಾಗಲಕೋಟೆ ಜೊತೆಗೆ ಹೆಚ್ಚುವರಿಯಾಗಿ ಕಲಬುರಗಿ ಜಿಲ್ಲಾ ಪ್ರಭಾರರನ್ನು ವಹಿಸಲಾಗಿದೆ.

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬರೋಬ್ಬರಿ 53  ದಿನಗಳ ಬಳಿಕ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಕ ಮಾಡಿದ್ದಾರೆ.  

 

 

Follow Us:
Download App:
  • android
  • ios