Asianet Suvarna News Asianet Suvarna News

Ramanagara: ಅತಿಥಿ ಉಪ​ನ್ಯಾ​ಸ​ಕ​ರ ವೇತ​ನ​ಕ್ಕೂ ಲಂಚದ ಬೇಡಿಕೆ!

ಸೇವೆ ಕಾಯಂ ಮತ್ತು ಉದ್ಯೋಗ ಭದ್ರತೆ ಎದುರು ನೋಡು​ತ್ತಿ​ರುವ ಅತಿಥಿ ಉಪ​ನ್ಯಾ​ಸ​ಕರಿಗೆ ವರ್ಷಕ್ಕೆ ಎರಡು ಮೂರು ಬಾರಿ ಮಾತ್ರ ಸಂಬಳ ಬಿಡು​ಗಡೆ ಆಗು​ತ್ತದೆ. ಈಗ ಆ ವೇತನ ಪಡೆ​ಯಲೂ ಲಂಚ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

Demand for bribe for guest lecturers salary at ramanagara gvd
Author
First Published Dec 14, 2022, 9:08 AM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಡಿ.14): ಸೇವೆ ಕಾಯಂ ಮತ್ತು ಉದ್ಯೋಗ ಭದ್ರತೆ ಎದುರು ನೋಡು​ತ್ತಿ​ರುವ ಅತಿಥಿ ಉಪ​ನ್ಯಾ​ಸ​ಕರಿಗೆ ವರ್ಷಕ್ಕೆ ಎರಡು ಮೂರು ಬಾರಿ ಮಾತ್ರ ಸಂಬಳ ಬಿಡು​ಗಡೆ ಆಗು​ತ್ತದೆ. ಈಗ ಆ ವೇತನ ಪಡೆ​ಯಲೂ ಲಂಚ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆ​ಯ​ ಸರ್ಕಾರಿ ಪದವಿ ಪೂರ್ವ ಕಾಲೇ​ಜು​ಗಳಲ್ಲಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ರುವ ಕೆಲ ಅತಿಥಿ ಉಪ​ನ್ಯಾ​ಸ​ಕರು ಪ್ರತಿ ಬಾರಿ ಸಂಬಳ ಬ್ಯಾಂಕ್‌ ಖಾತೆಗೆ ಜಮೆ​ಯಾ​ಗ​ಬೇ​ಕೆಂದರೆ, ಕಾಲೇಜು ಪ್ರಾಂಶು​ಪಾ​ಲರು, ಗುಮಾ​ಸ್ತ​ರಿಗೆ ಇಂತಿಷ್ಟುಲಂಚ ಕೊಡ​ಲೇ​ಬೇಕು. ಕಾಲೇ​ಜಿನ ಉಪ​ನ್ಯಾ​ಸ​ಕರ ಸಂಖ್ಯೆ, ಒಟ್ಟಾರೆ ವೇತ​ನದ ಪ್ರಮಾಣ ಆಧ​ರಿಸಿ ಲಂಚ ನಿರ್ಧಾ​ರ​ವಾ​ಗು​ತ್ತದೆ.

ಡಿಡಿ ಹೆಸ​ರಿ​ನಲ್ಲಿ ಲಂಚಕ್ಕೆ ಬೇಡಿಕೆ: ಆದ​ರೀಗ ಅತಿಥಿ ಉಪ​ನ್ಯಾ​ಸ​ಕ​ರಿಗೆ ಡಿಸೆಂಬರ್‌ ತಿಂಗ​ಳಲ್ಲಿ ಹೆಚ್ಚು​ವ​ರಿ​ಯಾಗಿ 2021-22ನೇ ಸಾಲಿನ ಮಾಚ್‌ರ್‍ ಹಾಗೂ ಏಪ್ರಿಲ್‌ ತಿಂಗ​ಳ ವೇತ​ನ​ ಬಿಡು​ಗ​ಡೆ​ಯಾ​ಗಿದೆ. ಅಂದರೆ ಎರಡು ತಿಂಗ​ಳಿಗೆ 15 ಸಾವಿರ ರುಪಾಯಿ ಖಾತೆಗೆ ಜಮೆಯಾಗಿದೆ. ಮಾರ್ಚ್‌ ತಿಂಗಳ ವೇತನ 9 ಸಾವಿರ ಬೇಡ, ಏಪ್ರಿಲ್‌ ತಿಂಗಳ ವೇತ​ನ​ದಲ್ಲಿ 3400 ರು. ಇಟ್ಟು​ಕೊಂಡು ಉಳಿಕೆ 5600 ರುಪಾಯಿ ವಾಪಸ್‌ ನೀಡು​ವಂತೆ ಕೆಲ ಕಾಲೇ​ಜು​ಗಳ ಪ್ರಾಂಶು​ಪಾ​ಲರು ಅತಿಥಿ ಉಪ​ನ್ಯಾ​ಸ​ಕರಿಗೆ ಫರ್ಮಾನು ಹೊರ​ಡಿ​ಸಿ​ದ್ದಾರೆ.

ದಲಿತ​ರನ್ನು ಸಿಎಂ ಮಾಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ: ಸಂಸದ ಸು​ರೇಶ್‌

ಅತಿಥಿ ಉಪ​ನ್ಯಾ​ಸ​ಕರು ಕಾಲೇ​ಜಿನ ಪ್ರಾಂಶು​ಪಾ​ಲರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿ​ಕಾ​ರಿ​ಗ​ಳನ್ನು ಏಕೆಂದು ಪ್ರಶ್ನಿ​ಸಿ​ದರೆ ಅವ​ರೆ​ಲ್ಲರು ಉಪ​ನಿ​ರ್ದೇ​ಶ​ಕ​ರತ್ತ ಬೊಟ್ಟು ಮಾಡಿ ತೋರಿ​ಸು​ತ್ತಿ​ದ್ದಾರೆ. ಆದರೆ, ಉಪ​ನಿ​ರ್ದೇ​ಶ​ಕರ ಪ್ರಾಮಾ​ಣಿ​ಕತೆ ಬಗ್ಗೆ ತಿಳಿ​ದಿ​ರುವ ಅತಿಥಿ ಉಪ​ನ್ಯಾ​ಸ​ಕರಿಗೆ ಕಾಲೇಜು ಪ್ರಾಂಶು​ಪಾ​ಲರು ಮತ್ತು ಇಲಾಖೆ ಅಧಿ​ಕಾ​ರಿ​ಗಳ ಮೇಲೆಯೇ ಅನು​ಮಾನ ಮೂಡಿವೆ.

ಪ್ರಾಂಶು​ಪಾ​ಲರ ಮರ್ಜಿ​ಯಲ್ಲಿ ಅತಿಥಿ ಉಪ​ನ್ಯಾ​ಸ​ಕರು: ಕಾಲೇ​ಜಿ​ನಲ್ಲಿ ಅತಿಥಿ ಉಪ​ನ್ಯಾ​ಸ​ಕರ ಹುದ್ದೆಗೆ ಆಯ್ಕೆಯಾದ ಬಳಿಕ ಪ್ರಾಂಶುಪಾಲರ ಮರ್ಜಿಯಲ್ಲಿರಬೇಕು. ಹೆಚ್ಚುವರಿ ಕೆಲಸ ಹೇಳಿದರೆ, ಇಲ್ಲವೆನ್ನುವಂತಿಲ್ಲ. ಮಾಡಿದಷ್ಟುಕೆಲಸಕ್ಕೆ ಸಂಬಳದ ಅನುಮೋದನೆ ಆಗದಿದ್ದರೆ, ಕೇಳುವಂತೆಯೂ ಇಲ್ಲ. ಕೇಳಿದರೆ, ಅನುಮೋದನೆ ಆಗಿದ್ದಿಷ್ಟೇ. ಬೇಕಾದರೆ ಕಾಲೇಜು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಎಂಬ ಸೂಚನೆ. ಅಲ್ಲಿಯೂ ಸಮರ್ಪಕ ಉತ್ತರ ಸಿಗು​ವು​ದಿಲ್ಲ. ನಂತರ, ಮುಂದಿನ ವರ್ಷ ಆ ಕಾಲೇಜಿನಲ್ಲಿ ಕೆಲಸ ಸಿಗುವುದು ಖಚಿತ ಇರುವುದಿಲ್ಲ.

ಹತ್ತಾರು ವರ್ಷದ ಅನುಭವವಿದ್ದರೂ ಪ್ರತಿ ವರ್ಷವೂ ಹೊಸದಾಗಿ ಅರ್ಜಿ ಹಾಕಲೇಬೇಕು. ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಗಾಗಿ ಲೋಕಸೇವಾ ಆಯೋಗ ಅರ್ಜಿ ಕರೆ​ದರೂ ಅನುಭವವನ್ನು ಪರಿಗಣಿಸದಿರುವುದರಿಂದ ಹೆಚ್ಚುವರಿ ಅಂಕವಿಲ್ಲ. ಬಹುತೇಕರಿಗೆ ವಯೋಮಿತಿ ಮೀರಿರುವುದರಿಂದ ಅರ್ಜಿ ಹಾಕಲೂ ಸಾಧ್ಯವಾಗದೆ ಉದ್ಯೋಗದ ಕನಸು ಚೂರುಚೂರಾಗಿದೆ. ಇದರ ಲಾಭ​ವನ್ನು ಪ್ರಾಂಶು​ಪಾ​ಲರು ಪಡೆ​ಯು​ತ್ತಿ​ದ್ದಾ​ರೆ. ಈ ಮೊದಲು ಅತಿಥಿ ಉಪ​ನ್ಯಾ​ಸ​ಕ​ರಿಗೆ 9 ಸಾವಿರ ರುಪಾಯಿ ವೇತನವನ್ನು ರಾಜ್ಯ ಸರ್ಕಾರ 2022-23ನೇ ಸಾಲಿನ ಜುಲೈ ತಿಂಗ​ಳಿಂದ 12 ಸಾವಿರ ರುಪಾ​ಯಿಗೆ ಹೆಚ್ಚಳ ಮಾಡಿದೆ. ಕೆಲ ಕಾಲೇ​ಜು​ಗ​ಳಲ್ಲಿ ಪ್ರತಿ ತಿಂಗಳ ವೇತ​ನ​ದ​ಲ್ಲಿಯೂ ಲಂಚ ಫಿಕ್ಸ್‌ ಮಾಡಿ​ರುವ ಆರೋ​ಪ​ಗಳು ಕೇಳಿ ಬರು​ತ್ತಿ​ವೆ.

ಅತಿಥಿ ಉಪನ್ಯಾಸಕರು ಒಂದಕ್ಕಿಂತ ಹೆಚ್ಚು ಕಾಲೇಜಲ್ಲಿ ಪಾಠ ಮಾಡುವಂತಿಲ್ಲ. ಹೀಗಾಗಿ ಮೂರು ದಿನವಷ್ಟೇ ಕೆಲಸ. ಉಳಿದ ದಿನಗಳಲ್ಲಿ ಬೇರೆ ಕೆಲಸ ಗಟ್ಟಿ. ಆಸ್ತಿ ಇದ್ದರೆ, ದಂಪತಿ ಇಬ್ಬರೂ ದುಡಿಯುತ್ತಿದ್ದರಷ್ಟೇ ನಿರಾಳ. ಪತಿಗೂ ಕೆಲಸವಿಲ್ಲದೆ, ಅತಿಥಿ ಉಪನ್ಯಾಸಕರಾಗಿ ಮನೆ ಹೊಣೆ ಹೊತ್ತ ಮಹಿಳೆಯರ ಪರಿಸ್ಥಿತಿ ಇನ್ನೂ ಕಷ್ಟ. ಸಿಗುವ ಹಿಡಿಯಷ್ಟುಸಂಬಳದಲ್ಲಿ ಮನೆ ಬಾಡಿಗೆ, ಹೆಂಡತಿ, ಮಕ್ಕಳು, ಅಪ್ಪ-ಅಮ್ಮನ ಯೋಗಕ್ಷೇಮ ನೋಡುವುದಾದರೂ ಹೇಗೆ? ಸ್ವಂತ ಖರ್ಚಿಗೂ ಹಣವಿರುವುದಿಲ್ಲ. ಇಂಥ ಅತಂತ್ರ ಪರಿಸ್ಥಿತಿಯಲ್ಲಿರುವ ಅತಿಥಿ ಉಪನ್ಯಾಸಕರ ಬಳಿಯೂ ಕೆಲ ಪ್ರಾಂಶು​ಪಾ​ಲರು ಲಂಚಕ್ಕೆ ಬೇಡಿ​ಕೆ ಇಡು​ತ್ತಿ​ರುವುದು ವಿಪ​ರ್ಯಾ​ಸದ ಸಂಗ​ತಿ.

ಡಿಸೆಂಬರ್‌ ತಿಂಗ​ಳಲ್ಲಿ ಬಿಡು​ಗ​ಡೆ​ಯಾ​ಗಿ​ರುವ ಹೆಚ್ಚು​ವರಿ ವೇತ​ನ​ದಲ್ಲಿ 5600 ರುಪಾಯಿ ಹಿಂದಿ​ರು​ಗಿ​ಸು​ವಂತೆ ಪ್ರಾಂಶು​ಪಾ​ಲರು ನಮ್ಮೆ​ಲ್ಲರ ಮೇಲೆ ಒತ್ತಡ ಹೇರು​ತ್ತಿ​ದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ​ನಿ​ರ್ದೇ​ಶ​ಕ​ರಿಗೆ ನೀಡ​ಬೇ​ಕೆಂದು ನೇರ​ವಾ​ಗಿಯೇ ಹೇಳು​ತ್ತಿ​ದ್ದಾರೆ. ಸರ್ಕಾರ ಹಣ ವಾಪಸ್‌ ಕೇಳಿ​ದ್ದರೆ ಆದೇಶ ಬರು​ತ್ತಿತ್ತು. ಆದರೆ, ಪ್ರಾಂಶು​ಪಾ​ಲರು ಬೇಡಿಕೆ ಇಡು​ತ್ತಿ​ರು​ವುದು ಅನುಮಾನ ಮೂಡಿ​ಸಿದೆ. ಈ ಬಗ್ಗೆ ಉಪ​ನಿ​ರ್ದೇ​ಶ​ಕರು ಗಮನ ಹರಿ​ಸಿ ಕ್ರಮ ವಹಿ​ಸ​ಬೇಕು.
- ಅತಿಥಿ ಉಪ​ನ್ಯಾ​ಸ​ಕರು

ಪ್ರಾಣಕೊಟ್ಟು ಹೋರಾಡಿ ಪಕ್ಷ ಗೆಲ್ಲಿಸುತ್ತೇವೆ: ಎಚ್‌.ಡಿ.ದೇವೇಗೌಡ

ಅತಿಥಿ ಉಪ​ನ್ಯಾ​ಸ​ಕರ ಖಾತೆ​ಗ​ಳಿಗೆ ನೇರ​ವಾಗಿ ವೇತನ ಬಿಡು​ಗ​ಡೆ​ಯಾ​ಗು​ತ್ತದೆ. ಅವ​ರ ವೇತ​ನ​ದಲ್ಲಿ ಹಣ ನೀಡು​ವಂತೆ ನಾನು ಯಾರಿಗೂ ಹೇಳಿಲ್ಲ. ಯಾವು​ದಾ​ದರು ಕಾಲೇ​ಜು​ಗ​ಳಲ್ಲಿ ಆ ರೀತಿ ಹಣ ವಸೂಲಿ ಮಾಡಿ​ದ್ದರೆ ದೂರು ನೀಡ​ಬ​ಹುದು. ತಪ್ಪಿ​ತ​ಸ್ಥ ಪ್ರಾಂಶು​ಪಾ​ಲರ ವಿರುದ್ಧ ಮುಲಾ​ಜಿ​ಲ್ಲದೆ ಕ್ರಮ ಜರು​ಗಿ​ಸು​ತ್ತೇನೆ. ಅತಿಥಿ ಉಪ​ನ್ಯಾ​ಸ​ಕರು ಹಿಂಜ​ರಿ​ಯದೆ ದೂರು ನೀಡ​ಬ​ಹು​ದು.
-ಗೋವಿಂದ​ರಾಜು, ಉಪ​ನಿ​ರ್ದೇ​ಶ​ಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಮ​ನ​ಗರ

Follow Us:
Download App:
  • android
  • ios