Asianet Suvarna News Asianet Suvarna News

ದಲಿತ​ರನ್ನು ಸಿಎಂ ಮಾಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ: ಸಂಸದ ಸು​ರೇಶ್‌

ಮಹಾ​ರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ ದಲಿ​ತ ನಾಯ​ಕ​ರನ್ನು ಮುಖ್ಯ​ಮಂತ್ರಿಯನ್ನಾಗಿ ಮಾಡಿತು. ಕರ್ನಾ​ಟ​ಕ​ದ​ಲ್ಲಿ ದಲಿ​ತ​ರೊ​ಬ್ಬ​ರಿಗೆ ಮುಂದೊಂದು ದಿನ ಮುಖ್ಯಮಂತ್ರಿ ಅವ​ಕಾಶ ಕಲ್ಪಿ​ಸುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಸಂಸದ ಡಿ.ಕೆ.​ಸು​ರೇಶ್‌ ಪ್ರತಿ​ಪಾ​ದಿ​ಸಿ​ದರು. 

Only Congress can make a Dalit CM says MP Dk Suresh At Ramanagara gvd
Author
First Published Dec 4, 2022, 9:32 PM IST

ರಾಮನಗರ (ಡಿ.04): ಮಹಾ​ರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ ದಲಿ​ತ ನಾಯ​ಕ​ರನ್ನು ಮುಖ್ಯ​ಮಂತ್ರಿಯನ್ನಾಗಿ ಮಾಡಿತು. ಕರ್ನಾ​ಟ​ಕ​ದ​ಲ್ಲಿ ದಲಿ​ತ​ರೊ​ಬ್ಬ​ರಿಗೆ ಮುಂದೊಂದು ದಿನ ಮುಖ್ಯಮಂತ್ರಿ ಅವ​ಕಾಶ ಕಲ್ಪಿ​ಸುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಸಂಸದ ಡಿ.ಕೆ.​ಸು​ರೇಶ್‌ ಪ್ರತಿ​ಪಾ​ದಿ​ಸಿ​ದರು. ನಗ​ರದ ಜಿಲ್ಲಾ ಕಾಂಗ್ರೆಸ್‌ ಕಚೇ​ರಿ​ಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪರಿ​ಶಿಷ್ಟಜಾತಿ ವಿಭಾ​ಗದ ಜಿಲ್ಲಾ ಪದಾ​ಧಿ​ಕಾ​ರಿ​ಗಳು ಮತ್ತು ಬ್ಲಾಕ್‌ ಅಧ್ಯ​ಕ್ಷ​ರಿಗೆ ಪದವಿ ಪ್ರಮಾಣ ಪತ್ರ ವಿತ​ರಣಾ ಸಮಾ​ರಂಭ​ ಉದ್ಘಾ​ಟಿ​ಸಿ ಮಾತ​ನಾ​ಡಿ​ದ ಅವರು, ಮಹಾರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್‌ ಮಾಡಿತು. 

ಆನಂತರ ಆ ರಾಜ್ಯಗಳಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಕಾಂಗ್ರೆಸ್‌ ಗೆ ಅಧಿಕಾರ ಮುಖ್ಯವಲ್ಲ, ಶೋಷಿತ ವರ್ಗಗಳಿಗೆ ರಾಜಕೀಯ ಅವಕಾಶ ಕಲ್ಪಿಸಿಕೊಡುವುದೇ ಮುಖ್ಯ. ರಾಜ್ಯದಲ್ಲಿಯೂ ಮುಂದೊಂದು ದಿನ ದಲಿತರೊಬ್ಬರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಕಲ್ಪಿಸಲು ಕಾಂಗ್ರೆಸ್‌ ನಿಂದ ಮಾತ್ರ ಸಾಧ್ಯ ಎಂದರು. ಕಾಂಗ್ರೆಸ್‌ ಪಕ್ಷ ತನ್ನ ಆಡ​ಳಿ​ತದ ಅವ​ಧಿ​ಯಲ್ಲಿ ಪ್ರಜಾ​ಪ್ರ​ಭುತ್ವ ಗಟ್ಟಿ​ಗೊ​ಳಿ​ಸುವುದರ ಜತೆಗೆ ಜಾತ್ಯ​ತೀತ ಕಾರ್ಯ​ಕ್ರ​ಮ​ಗ​ಳನ್ನು ನೀಡಿತು. ಅಧಿ​ಕಾರ ವಿಕೇಂದ್ರೀ​ಕ​ರಣ ಮಾಡಿತು. ಪ್ರತಿ​ಯೊಂದು ನಿರ್ಣಯಗಳು, ನಿಲುವುಗಳು ಶೋಷಿತರು ಮತ್ತು ಬಡವರ ಪರವಾಗಿದ್ದವು.

ನಾವು ಜಾತಿ, ಧರ್ಮಕ್ಕೆ ಸೀಮಿತವಲ್ಲ: ನಿಖಿಲ್‌ ಕುಮಾರಸ್ವಾಮಿ

ಆದರೆ, ಇಂದು ಬಿಜೆ​ಪಿ​ಯೊಂದಿಗೆ ಕೈ ಜೋಡಿ​ಸಿ​ರುವ ಬಂಡವಾಳ ಶಾಹಿಗಳು ಬಂಡ​ವಾಳ ಹೂಡಿ ಕಾಂಗ್ರೆಸ್‌ ಅನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದೆ. ಭಾವಾನಾತ್ಮಕವಾಗಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡು​ತ್ತಿದೆ ಎಂದು ಕಿಡಿ​ಕಾ​ರಿ​ದ​ರು. ಕಾಂಗ್ರೆಸ್‌ ನ ಉಳಿ​ವಿ​ಗಾಗಿ ಬೆಂಬಲ ಬೇಕಿಲ್ಲ. ಪ್ರಜಾ​ಪ್ರ​ಭುತ್ವ ಉಳಿ​ಸಲು ಹೋರಾಟ ಮಾಡ​ಬೇ​ಕಿದೆ. ಅದು ಕಾಂಗ್ರೆಸ್‌ ಪಕ್ಷ​ದಿಂದ ಮಾತ್ರ ಸಾಧ್ಯ. ಪ್ರಜಾಪ್ರಭುತ್ವದ ರಕ್ಷಣೆ, ಉತ್ತಮ ಆಡಳಿತ , ಬಲಿಷ್ಠರ ಕೈಗೆ ಎಲ್ಲಾ ವ್ಯವಸ್ಥೆಗಳು ಸಿಗದಿರಲು, ಜಾತ್ಯಾತೀತ ತತ್ವಗಳ ಪ್ರತಿಪಾದನೆ ಹಾಗೂ ಸಮಾಜದಲ್ಲಿ ಸಮಾನತೆ ಕಾಣಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷ​ವನ್ನು ಸಂಘ​ಟಿ​ಸು​ವಂತೆ ಕರೆ ನೀಡಿ​ದರು.

ಪ್ರಬ​ಲ​ರನ್ನು ಹತ್ತಿ​ಕ್ಕುವ ಕೆಲ​ಸ​ವನ್ನು ಬಿಜೆಪಿ ಪಕ್ಷ ಮಾಡು​ತ್ತಿದೆ. ಉತ್ತರ ಪ್ರದೇ​ಶ​ದಲ್ಲಿ ಮಾಜಿ ಸಿಎಂ ಮಾಯಾ​ವತಿ ಅವ​ರನ್ನು ಇಡಿ, ಐಟಿಯವರು ಬಿಡ​ಲಿಲ್ಲ. ಆದರೆ, ಇಡಿ, ಐಟಿ, ಸಿಬಿಐ ಪ್ರಕ​ರ​ಣ​ಗ​ಳಿ​ಗೆಲ್ಲ ಡಿಕೆ ಸಹೋ​ದ​ರರ ಜಗ್ಗು​ವು​ದಿಲ್ಲ ಎಂದು ಸುರೇಶ್‌ ಹೇಳಿ​ದ​ರು. ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಕ್ತಿಯುತವಾಗಿದೆ. ಆದರೂ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಕಪುರದಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರಿದ್ದಾರೆ. ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು, ಸಂಕುಚಿತ ಮನೋಭಾವಗಳ ಕಾರಣ ಉಳಿದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಸೋಲಿಗೆ ಕಾರಣವಾಗಿ​ದೆ. ಕಾರ್ಯ​ಕ​ರ್ತರು ಬಿಜೆಪಿ ದುರಾ​ಡ​ಳಿ​ತ ಹಾಗೂ ಕಾಂಗ್ರೆಸ್‌ ಕೊಡು​ಗೆ​ಗಳ ಬಗ್ಗೆ ಜನ​ರಿಗೆ ಮನ​ವ​ರಿಕೆ ಮಾಡಿ​ಕೊ​ಡ​ಬೇಕು ಎಂದು ತಿಳಿ​ಸಿ​ದ​ರು.

ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ಮಾತ​ನಾಡಿ, ಪ.ಜಾತಿ ಮತ್ತು ಪ.ಪಂಗ​ಡ​ದ​ವರು ದೂರ ಸರಿ​ಯು​ತ್ತಿ​ರುವ ಕಾರ​ಣ​ದಿಂದಲೇ ಕಾಂಗ್ರೆಸ್‌ ಗೆ ಹಿನ್ನ​ಡೆಗೆ ಕಾರ​ಣ​ವಾ​ಗು​ತ್ತಿದೆ. ಈ ಹಿಂದೆ ಆ ಸಮು​ದಾ​ಯದ ಜನರು ಪಕ್ಷದ ಮೇಲೆ ಇಟ್ಟಿದ್ದ ಪ್ರೀತಿ ಭರ​ವಸೆ ಈಗ ಕಾಣು​ತ್ತಿಲ್ಲ. ಅವರನ್ನು ಮತ್ತೆ ಕಾಂಗ್ರೆಸ್‌ ನತ್ತ ಸೆಳೆ​ಯುವ ಕೆಲಸ ಆಗ​ಬೇ​ಕಿದೆ ಎಂದರು. ಕಾಂಗ್ರೆಸ್‌ ಅಧಿ​ಕಾ​ರ​ದ​ಲ್ಲಿ ದೀನ ದಲಿ​ತರು, ಶೋಷಿ​ತರು ಸೇರಿ​ದಂತೆ ಎಲ್ಲ ವರ್ಗದ ಜನ​ರಿಗೂ ಅನು​ಕೂಲ ಮಾಡಿ​ಕೊ​ಟ್ಟಿತು. ಕಾಂಗ್ರೆಸ್‌ ಸರ್ಕಾ​ರ ನೀಡಿದ ಕಾರ್ಯ​ಕ್ರ​ಮ​ಗಳ ಫಲಾ​ನು​ಭ​ವಿ​ಗ​ಳಾ​ದ​ವರು ಇಂದು ಬೇರೆ ಪಕ್ಷ​ಕ್ಕಾಗಿ ದುಡಿ​ಯು​ತ್ತಿ​ದ್ದಾರೆ. 

Ramanagara: ಪಂಚ​ರತ್ನ ಯೋಜನೆ ಅನು​ಷ್ಠಾನದ ಗುರಿ: ನಿಖಿಲ್‌ ಕುಮಾ​ರ​ಸ್ವಾಮಿ

ಅದ​ರಲ್ಲೂ ಯುವ​ಕರು ಹೆಚ್ಚಿನ ಪ್ರಮಾ​ಣ​ದಲ್ಲಿ ಕೋಮು​ವಾದಿ ಬಿಜೆಪಿ ಪಕ್ಷ​ದತ್ತ ವಾಲು​ತ್ತಿ​ರು​ವುದು ಆತಂಕ​ಕಾರಿ ಸಂಗತಿ. ಆ ಯುವ​ಕ​ರಿ​ಗೆ ಕಾಂಗ್ರೆಸ್‌ ಪಕ್ಷದ ಕೊಡುಗೆ ಬಗ್ಗೆ ಮನ​ವ​ರಿಕೆ ಮಾಡಿ​ಕೊ​ಡ​ಬೇ​ಕಿದೆ ಎಂದು ಹೇಳಿ​ದ​ರು. ವಿಧಾನ ಪರಿ​ಷತ್‌ ಸದ​ಸ್ಯ​ರಾದ ಸಿ.ಎಂ.​ಲಿಂಗಪ್ಪ, ಎಸ್‌.ರವಿ, ಮಾಜಿ ಶಾಸ​ಕ​ ಕೆ.ರಾ​ಜು, ಬಮೂಲ್‌ ಅಧ್ಯಕ್ಷ ನರ​ಸಿಂಹ​ಮೂ​ರ್ತಿ, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅ​ಧ್ಯಕ್ಷೆ ದೀಪಾ ಮುನಿ​ರಾ​ಜು, ಮುಖಂಡರಾದ ಪ್ರಸನ್ನ ಪಿ.ಗೌಡ, ಕೆ.ಶೇಷಾದ್ರಿ, ಗಾಣಕಲ್ ನಟರಾಜ್‌, ಎಲ್.ಎನ್‌.ಸ್ವಾಮಿ, ಬಿಡದಿ ಪುರಸಭೆ ಸದಸ್ಯ ರಾಮಚಂದ್ರಯ್ಯ ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದರು.

Follow Us:
Download App:
  • android
  • ios