ಮೊದಲಿಂದಲೂ ಜಾರಕಿಹೊಳಿ ಸೋದ​ರರು ಒಂದಾಗಿ ಹೋಗುತ್ತಿ​ದ್ದೇ​ವೆ| ಜನರನ್ನೂ ಸರಿ ಸಮನಾಗಿ ನೋಡಿ​ಕೊಂಡು ಸಾಗುತ್ತಿದ್ದೇವೆ| ಇದು ಕೆಲವೇ ದಿನಗಳ ಕಹಿ ಘಟನೆ. ಮತ್ತೆ ರಮೇಶಣ್ಣನಿಗೆ ಒಳ್ಳೆಯ ದಿನಗಳು ಬರುತ್ತವೆ| ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿ ಕೆಲಸ ಮಾಡಿವೆ. ನಾನು ಸೋದ​ರ​ನ ಬೆಂಬಲಕ್ಕಿದ್ದೇನೆ ಎಂದ​ ಲಖ​ನ್| 

ಗೋಕಾಕ(ಮಾ.06): 'ಇದು ರಾಜಕೀಯ ಷಡ್ಯಂತ್ರ, ಈ ಕೇಸ್‌ನಲ್ಲಿ ರಮೇಶಣ್ಣ ಗೆದ್ದು ಬರ್ತಾರೆ’ ಎಂದು ಉದ್ಯಮಿ, ಕಾಂಗ್ರೆಸ್‌ ಮುಖಂಡ ಲಖನ್‌ ಜಾರಕಿಹೊಳಿ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಮೊದಲ ಬಾರಿ ಪ್ರತಿಕ್ರಿಯಿಸಿದ ಅವರು, ಸೋದ​ರ ರಮೇಶ್‌ ಅವರನ್ನು ರಾಜಕೀಯವಾಗಿ ಮುಗಿಸಲು ಈ ರೀತಿ ನಕಲಿ ಸಿ.ಡಿ. ಮಾಡಲಾಗಿದೆ. ರಾಜಕೀಯವಾಗಿ ಬೆಳೆಯುವ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ಆದ​ರೆ, ಇದರಲ್ಲಿ ವಿರೋಧಿಗಳು ಯಶಸ್ವಿಯಾಗುವುದಿಲ್ಲ ಎಂದರು.

ರಾಸಲೀಲೆ ವಿಡಿಯೋ ಹಿಂದೆ ಕನಕಪುರ, ಬೆಳಗಾವಿಯ ಷಡ್ಯಂತ್ರ: ಹೊಸ ಬಾಂಬ್

ಕ್ಷೇತ್ರದ ಜನ ಅವ​ರನ್ನು ರಮೇಶಣ್ಣ ಎಂದು ಕರೆಯುತ್ತಾರೆ. ಅವರು ಹೀಗೆ ಮಾಡುತ್ತಾ​ರೆ ಅಂತ ಯಾರಿಗೂ ಅನಿಸುವುದಿಲ್ಲ. ರಮೇಶಣ್ಣನನ್ನು ಕ್ಷೇತ್ರದ ಜನ ಬಿಟ್ಟು ಕೊಡೋಕೆ ತಯಾರಿಲ್ಲ ಹಾಗೂ ಕ್ಷೇತ್ರದ ಜನ ಇದನ್ನು ನಂಬಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಮೊದಲಿಂದಲೂ ಜಾರಕಿಹೊಳಿ ಸೋದ​ರರು ಒಂದಾಗಿ ಹೋಗುತ್ತಿ​ದ್ದೇ​ವೆ. ಜನರನ್ನೂ ಸರಿ ಸಮನಾಗಿ ನೋಡಿ​ಕೊಂಡು ಸಾಗುತ್ತಿದ್ದೇವೆ. ಇದು ಕೆಲವೇ ದಿನಗಳ ಕಹಿ ಘಟನೆ. ಮತ್ತೆ ರಮೇಶಣ್ಣನಿಗೆ ಒಳ್ಳೆಯ ದಿನಗಳು ಬರುತ್ತವೆ. ಇಂದು ಮೋಡ ಕವಿದ ವಾತಾವರಣದ ನಿರ್ಮಾಣ ಆಗಿದೆ, ಮೋಡ ಹೋದ ಮೇಲೆ ಬೆಳದಿಂಗಳು ಬಂದೇ ಬರುತ್ತ​ವೆ. ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿ ಕೆಲಸ ಮಾಡಿವೆ. ನಾನು ಸೋದ​ರ​ನ ಬೆಂಬಲಕ್ಕಿದ್ದೇನೆ ಎಂದ​ರು ಲಖ​ನ್‌.