Asianet Suvarna News Asianet Suvarna News

ಕಲಬುರಗಿ: ಕಾರು ಅಪಘಾತದಲ್ಲಿ ಚಿಂಚನಸೂರ್‌ ಕಾಲು ಮೂಳೆ ಮುರಿತ

ಯಾದಗಿರಿಯಿಂದ ಕಲಬುರಗಿಗೆ ಬರುವಾಗ ಶುಕ್ರ​ವಾ​ರ ರಾತ್ರಿ 12.30ರ ಸುಮಾರಿಗೆ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ​ಅ​ಪ​ಘಾತ ಸಂಭ​ವಿ​ಸಿ​ದೆ. ಅಪಘಾತದಿಂದ ಚಿಂಚನಸೂರ್‌ ಅವರ ಮೊಣಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿ, ಅವರನ್ನು ಕಲಬುರಗಿ ಯುನೈಟೆ​ಡ್‌ ಆಸ್ಪತ್ರೆಗೆ ದಾಖ​ಲಿ​ಸ​ಲಾ​ಗಿತ್ತು. 

Congress Leader Baburao Chinchansur Injured Due to Car Accident in Kalaburagi grg
Author
First Published Apr 16, 2023, 8:01 AM IST

ಕಲಬುರಗಿ(ಏ.16):  ಕಲಬುರಗಿ ಹೊರ ವಲಯದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದ ಕಾರು ಅಪಘಾತದಲ್ಲಿ ಮೊಣಕಾಲು ಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ಬಾಬೂರಾವ್‌ ಚಿಂಚನಸೂರು ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆಯಲ್ಲಿ ತಿರುವು ಪಡೆಯುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು, ಚಾಲಕ ನಿದ್ರೆ ಮಂಪರಿನಲ್ಲಿದ್ದುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಯಾದಗಿರಿಯಿಂದ ಕಲಬುರಗಿಗೆ ಬರುವಾಗ ಶುಕ್ರ​ವಾ​ರ ರಾತ್ರಿ 12.30ರ ಸುಮಾರಿಗೆ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ​ಅ​ಪ​ಘಾತ ಸಂಭ​ವಿ​ಸಿ​ದೆ. ಅಪಘಾತದಿಂದ ಚಿಂಚನಸೂರ್‌ ಅವರ ಮೊಣಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿ, ಅವರನ್ನು ಕಲಬುರಗಿ ಯುನೈಟೆ​ಡ್‌ ಆಸ್ಪತ್ರೆಗೆ ದಾಖ​ಲಿ​ಸ​ಲಾ​ಗಿತ್ತು. ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆ ವೈದ್ಯರು, ಬಾಬು ರಾವ್‌ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಮೊಣಕಾಲು ಮುರಿದಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರ ತಲೆಗೆ ಪೆಟ್ಟಾಗಿದ್ದು, ಹೊಲಿಗೆ ಹಾಕಲಾಗಿದೆ. ಇನ್ನೂ ಎರಡು ದಿನಗಳವರೆಗೆ ಚಿಕಿತ್ಸೆ ನಡೆಯಲಿದೆ ಎಂದು ಹೇಳಿದ್ದಾರೆ.

ಬಿಜೆಪಿಗೆ ಹೋಗಿ ತಪ್ಪು ಮಾಡಿದೆ: ಚಿಂಚನಸೂರು

ಬಾಬುರಾವ್‌ ಚಿಂಚನಸೂರ್‌ ಅವರು ಇತ್ತೀ​ಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರಿದ್ದರು. ಇವರನ್ನ ಕಾಂಗ್ರೆಸ್‌ ಹೈಕಮಾಂಡ್‌ ಯಾದಗಿರಿ ಜಿಲ್ಲೆಯ ಗುರು​ಮ​ಠ​ಕಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂದು ಘೋಷಿಸಿತ್ತು.

Follow Us:
Download App:
  • android
  • ios