ಚಿಕ್ಕಮಗಳೂರಿನಲ್ಲೊಂದು ಜೋಡಿ ಭಾರತ ಮಾತೆ ಫೋಟೊವನ್ನು ಪರಸ್ಪರ ಬದಲಾಯಿಸಿಕೊಳ್ಳುವ ಮೂಲಕ ವಿಶೇಷವಾಗಿ ಎಂಗೇಜ್ ಆಗಿದ್ದಾರೆ.
ಚಿಕ್ಕಮಗಳೂರು (ಫೆ.15): ನವಜೋಡಿಗಳಿಬ್ಬರು ಪ್ರೇಮಿಗಳ ದಿನವಾದ ಫೆ.14ರಂದು ಉಂಗುರದ ಬದಲು ಭಾರತಾಂಬೆಯ ಫೋಟೋವನ್ನು ಪರಸ್ಪರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
Add Asianetnews Kannada as a Preferred Source

ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯೋಗಿಗಳಾಗಿರುವ ರವೀಶ್ ಹಾಗೂ ವಿದ್ಯಾಶ್ರೀ ವಿಶಿಷ್ಟವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ನವಜೋಡಿ. ಇಬ್ಬರೂ ಚಿಕ್ಕಮಗಳೂರು ನಗರದವರಾಗಿದ್ದಾರೆ.
ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೃಷ್ಣ-ಮಿಲನಾ; ಮದುವೆ ಹೇಗಿತ್ತು! ...
ಭಾನುವಾರ ಪ್ರೇಮಿಗಳ ದಿನವಾದ ಹಿನ್ನೆಲೆಯಲ್ಲಿ ಉಂಗುರದ ಬದಲು ಭಾರತಾಂಬೆಯ ಪೋಟೋವನ್ನು ಪರಸ್ಪರ ಬದಲಿಸಿಕೊಂಡಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವೇಳೆ, ರವೀಶ್ ಹಾಗೂ ವಿದ್ಯಾಶ್ರೀ ಕುಟುಂಬದವರು ಜೊತೆಗಿದ್ದು, ಮಕ್ಕಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
