ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ರಸ್ತೆ ಬದಿ ಉರುಳಿಬಿದ್ದ ಕಾರು| ಮೂವರು ಯುವಕರ ಸಾವು| ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ರಸ್ತೆಯ ಹೊನ್ನೆನಹಳ್ಳಿ ಬಳಿ ನಡೆದ ಘಟನೆ| ಮರಡಿಗುಡ್ಡದಲ್ಲಿರುವ ಶ್ರಿಮರಡಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ನಡೆದ ದುರ್ಘಟನೆ|
ಶಿರಾ(ಜೂ.29): ಭಾನುವಾರದ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಕಾರು ರಸ್ತೆ ಬದಿ ಉರುಳಿಬಿದ್ದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬುಕ್ಕಾಪಟ್ಟಣ ರಸ್ತೆಯ ಹೊನ್ನೆನಹಳ್ಳಿ ಬಳಿ ನಡೆದಿದೆ.
Add Asianetnews Kannada as a Preferred Source

ಮೃತಪಟ್ಟವರು ಬರಗೂರು ಗ್ರಾಮದ ಬಸವರಾಜು (22), ವಿನಯ್ (23) ಮತ್ತು ಸಿರಾ ನಗರದ ಸುಮನ್ ಬಾಬು (23), ಗಾಯಗೊಂಡವರು ಸಚಿನ್ ಮತ್ತು ನೂತನ್ ಎಂದು ತಿಳಿದುಬಂದಿದೆ.
ಕೊರೋನಾ ಮರಣ ಮೃದಂಗ: ರಾಜ್ಯದಲ್ಲಿ ಕೇವಲ 4 ತಾಸಲ್ಲಿ ನಾಲ್ಕು ಮಂದಿ ಬಲಿ
ಇವರೆಲ್ಲರೂ ಮರಡಿಗುಡ್ಡದಲ್ಲಿರುವ ಶ್ರಿಮರಡಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಶಿರಾ ನಗರ ಠಾಣಾ ಪೊಲೀಸರು ಧಾವಿಸಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡಿದ್ದಾರೆ.
