Asianet Suvarna News Asianet Suvarna News

ಬೋಟ್‌ನಲ್ಲಿಯೇ ಜನ, ಜಾನುವಾರು ರಕ್ಷಿಸಿದರು ಇಲ್ಲಿ ಅಂಬಿಗರು

ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈ ವೇಳೆ ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡರು. ಬೆಳಗಾವಿ ಜಿಲ್ಲೆಗೆ ರಕ್ಷಣಾ ಪಡೆಗಳು ಆಗಮಿಸುವ ಮುನ್ನವೇ ಇಲ್ಲಿನ ಅಂಬಿಗರು ನೂರಾರು ಜನರನ್ನು ರಕ್ಷಣೆ ಮಾಡಿದರು. 

Boatman Rescued 300 People in Flood Situation At Belagavi
Author
Bengaluru, First Published Aug 17, 2019, 11:48 AM IST

ಅಥಣಿ [ಆ.17]:  ದಿನವೂ ಬೋಟ್‌ ನಡೆ​ಸಿಯೇ ಹೊಟ್ಟೆತುಂಬಿ​ಕೊ​ಳ್ಳುವ ಅಂಬಿ​ಗ​ರಿ​ಬ್ಬರು ಕೃಷ್ಣಾ ಪ್ರವಾ​ಹ​ದಲ್ಲಿ ಸಿಲು​ಕಿದ್ದ ಸುಮಾರು 300 ಜನರನ್ನು ರಕ್ಷಿಸುವ ಜೊತೆಗೆ ಕೊಚ್ಚಿ ಹೋಗುತ್ತಿದ್ದ ನೂರಾರು ಜಾನುವಾರಗಳನ್ನು ಬೋಟ್‌ ಮೂಲಕ ರಕ್ಷಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ನಾವಿಕರಾದ ತಂದೆ ರಾವ​ಸಾಬ ಅಂಬಿ ಮತ್ತು ಇವರ ಮಗ ಧನಂಜಯ ಅಂಬಿ ಜೀವದ ಹಂತು ತೊರೆದು ಜನ, ಜಾನುವಾರುಗಳನ್ನು ರಕ್ಷಿಸಿದವರು.

ಖೇಮಲಾಪುರ ಮತ್ತು ಕೃಷ್ಣಾ ಕಿತ್ತೂರ ಗ್ರಾಮದ ಸಂಪರ್ಕ ಸೇತುವೆಯಂತೆ ಇ​ವರು ದಿನವೂ ಬೋಟ್‌ ನಡೆ​ಸು​ತ್ತಿ​ದ್ದಾರೆ. ಈ ಅಂಬಿ​ಗರ ರಕ್ಷಣಾ ಕಾರ್ಯ​ ಮೆ​ಚ್ಚಿದ ಇಡೀ ಗ್ರಾಮವೇ ಸಲಾಮ್‌ ಹೊಡೆ​ಯು​ತ್ತಿದ್ದರೆ, ಇವ​ರ ಸಹಾ​ಯ​ದಿಂದ ಬದು​ಕು​ಳಿ​ದ​ ಸಂತ್ರ​ಸ್ತರಂತೂ ಇವ​ರನ್ನು ನಮ್ಮ ಪಾಲಿನ ದೇವರು ಎನ್ನುತ್ತಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಚೆಗೆ ಮಹಾ​ರಾ​ಷ್ಟ್ರ​ದಲ್ಲಿನ ವಿಪ​ರೀತ ಮಳೆ ಹಾಗೂ ಅಲ್ಲಿನ ಜಲಾ​ಶ​ಯ​ಗ​ಳಿಂದ ಬಿಟ್ಟಅಪಾರ ಪ್ರಮಾಣದ ನೀರಿ​ನಿಂದಾಗಿ ಕಾಗವಾಡ ತಾಲೂ​ಕಿನ ಐನಾಪುರ ಸಮೀಪದ ಕೃಷ್ಣಾ ಕಿತ್ತೂರ ಗ್ರಾಮ ಸಂಪೂರ್ಣ ಜಲಾವೃತವಾಗಿತ್ತು. ಈ ವೇಳೆ ಅನೇಕ ಕುಟಂಬಗಳು ಹಾಗೂ ಜಾನು​ವಾ​ರು​ಗಳು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡವು. ಇದ​ನ್ನ​ರಿತ ನಾವಿ​ಕ​ರು ತಮ್ಮ ಪ್ರಾಣದ ಹಂಗು​ಬಿಟ್ಟು ಹಗಲು ರಾತ್ರಿ ಎನ್ನದೆ ಬೋಟ್‌ ಕಾರ್ಯಾ​ಚ​ರಣೆ ನಡೆ​ಸಿದ್ದಾರೆ.

Follow Us:
Download App:
  • android
  • ios