Asianet Suvarna News Asianet Suvarna News

ಡಿಕೆಶಿ ನಾಡಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಮುಖಂಡ : ಸರ್ಕಾರದಿಂದ ಆಯ್ಕೆ

ಡಿಕೆ ಸಹೋದರರ ನಾಡೆಂದೆ ಕರೆಸಿಕೊಳ್ಳುವ ರಾಮನಗರದಲ್ಲಿ ಕಳೆದ ಮೂರು ವರ್ಷಗಳಿಂದ ಕಾಲಿ ಉಳಿದಿದ್ದ ಹುದ್ದೆಗೆ ಬಿಜೆಪಿ ಮುಖಂಡರೋರ್ವರು ನೇಮಕವಾಗಿದ್ದಾರೆ. 

BJP Leader Murali Selected As Ramanagara Development Authority President
Author
Bengaluru, First Published Jan 30, 2020, 4:29 PM IST

ರಾಮನಗರ [ಜ.30]: ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಬಿಜೆಪಿ ಹಿರಿಯ ನಾಯಕ ಮುರಳಿ ಆಯ್ಕೆಯಾಗಿದ್ದಾರೆ. 

ಕಳೆದ ಎರಡು ವರ್ಷಗಳಿಂದ ಖಾಲಿ ಉಳಿದಿದ್ದ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಕಳೆದ ಮೂರು ದಿನಗಳ ಹಿಂದಷ್ಟೇ ನೂತನ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಮಾಡಿ ಆದೇಶ ಹೊರಡಿಸಿತ್ತು. 

ರಾಮನಗರದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿಯ ಮುರಳಿ ಅವರನ್ನು ಕಳೆದ ಮೂರು ದಿನಗಳ ಹಿಂದೆಯೇ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು. 

ಡಿಕೆಶಿ ನಾಡಲ್ಲಿ ಬಿಜೆಪಿಗರ ಬಿರುಸಿನ ಪ್ರಚಾರ : ಗೆಲುವು ಸುಲಭವೆಂದ ಮುಖಂಡ...

ಡಿಕೆಶಿ ನಾಡೆಂದೇ ಕರೆಸಿಕೊಳ್ಳುವ ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರವಯ ಈ ಮೂಲಕ ಬಿಜೆಪಿ ಪಾಲಿಗೆ ಒಲಿದಿತ್ತು.

ಟ್ವಿಟ್ಟರ್‌ನಲ್ಲಿ ಕೆಟ್ಟ ಭಾವನೆಗಳನ್ನ ವ್ಯಕ್ತಪಡಿಸುವನು ನಾನಲ್ಲ: ಸಿಂಹಗೆ ತಿವಿದ HDK...

ಇಂದು ಬಿಜೆಪಿ ಮುಖಂಡ ಮುರಳಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎಂ ರುದ್ರೇಶ್, ಮಾಜಿ ಜಿಲ್ಲಾಧ್ಯಕ್ಷ ನಾಗರಾಜ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.  

Follow Us:
Download App:
  • android
  • ios