08:00 AM (IST) Mar 02

Karnataka Latest News Live:ಪಾದಗಳ ಅತಿಯಾದ ಉರಿಯಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಹಳ್ಳಿ ಶೈಲಿಯ ಸೂಪರ್ ಮನೆಮದ್ದುಗಳು!

ಬೇಸಿಗೆಯಲ್ಲಿ ಹೆಚ್ಚಾಗುವ ಪಾದಗಳ ಉರಿ ಸಮಸ್ಯೆಗೆ ಹಾರ್ಮೋನ್ ಬದಲಾವಣೆ ಮತ್ತು ವಿಟಮಿನ್ ಕೊರತೆ ಕಾರಣವಾಗಿರಬಹುದು. ಈ ಲೇಖನದಲ್ಲಿ ಪುದೀನಾ ಎಣ್ಣೆ, ಅರಿಶಿನ, ವಿನೇಗರ್ ಬಳಕೆ ಹಾಗೂ ಕಾಲುಗಳನ್ನು ಎತ್ತರದಲ್ಲಿಡುವಂತಹ ಐದು ಸರಳ ಮನೆಮದ್ದುಗಳನ್ನು ವಿವರಿಸಲಾಗಿದೆ.
Read Full Story
07:56 AM (IST) Mar 02

Karnataka Latest News Live:ಖಾಸಗಿ ಶಾಲಾ ಮಾನ್ಯತೆ ಮಾನದಂಡ ಇನ್ನಷ್ಟು ಸರಳ! ಭೂ ಪರಿವರ್ತನೆಗೆ ವಿನಾಯಿತಿ

ರಾಜ್ಯದಲ್ಲಿ ಖಾಸಗಿ ಶಾಲೆಗಳ ಮಾನ್ಯತೆ ಮತ್ತು ನವೀಕರಣಕ್ಕೆ ಇರುವ ಭೂ ಪರಿವರ್ತನೆ, ರಸ್ತೆ ಸಂಪರ್ಕದಂತಹ ಕಠಿಣ ನಿಯಮಗಳನ್ನು ಸರಳಗೊಳಿಸಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆಯಾಗದಂತೆ, ಭ್ರಷ್ಟಾಚಾರ ತಡೆಯಲು ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕ ಜಾರಿಗೊಳಿಸಲಾಗುತ್ತಿದೆ.

Read Full Story
07:32 AM (IST) Mar 02

Karnataka Latest News Live:ಬೆಂಗಳೂರು ವಿಲ್ಲಾದಲ್ಲಿ ವಿದ್ಯಾರ್ಥಿನಿ ರೇ*ಪ್‌ ಕೇಸ್ - ರಾಜಕಾರಣಿ ಪುತ್ರ ಸೇರಿ ಐವರು ಅರೆಸ್ಟ್! ಸಭ್ಯರಂತೆ ವರ್ತಿಸಿ ಮೋಸ

ಬೆಂಗಳೂರಿನಲ್ಲಿ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ದಾವಣಗೆರೆ ಪಾಲಿಕೆಯ ಮಾಜಿ ಸದಸ್ಯನ ಪುತ್ರ ಸೇರಿದಂತೆ ಒಟ್ಟು 5 ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Read Full Story
07:25 AM (IST) Mar 02

Karnataka Latest News Live:ದತ್ತು ನೀಡಿದ ತಾಯಿಗೂ ಜೀವನಾಂಶ ಕಡ್ಡಾಯ

ತನ್ನನ್ನು ದತ್ತು ನೀಡಿದ್ದನ್ನೇ ಮುಂದಿಟ್ಟುಕೊಂಡು ಜೀವನದ ಸಂಧ್ಯಾಕಾಲದಲ್ಲಿರುವ ಹೆತ್ತ ತಾಯಿಗೆ ಜೀವನಾಂಶ ನೀಡಲು ನಿರಾಕರಿಸಿದ್ದ ಮಗನಿಗೆ ಹೈಕೋರ್ಟ್‌ ಛೀಮಾರಿ ಹಾಕಿದೆ. ದತ್ತು ನೀಡಿದ ಮಾತ್ರಕ್ಕೆ ಹೆತ್ತವಳಿಗೆ ಮಗನಾಗುವುದಿಲ್ಲವೇ? ಪ್ರಶ್ನಿಸಿ ದೆ

Read Full Story
07:23 AM (IST) Mar 02

Karnataka Latest News Live:90s ಕಿಡ್ಸ್ ಹೃದಯ ಹಿಂಡಿದ ಕನ್ನಡದ ಸಿನಿಮಾಗಳು; Gen Zಗಳು ಮಿಸ್ ಮಾಡದೇ ನೋಡ್ಲೇಬೇಕು!

90ರ ದಶಕದ ಕೆಲವು ಕನ್ನಡ ಸಿನಿಮಾಗಳು ತಮ್ಮ ದುರಂತ ಅಂತ್ಯದಿಂದ ಪ್ರೇಕ್ಷಕರ ಹೃದಯವನ್ನು ಘಾಸಿಗೊಳಿಸಿದ್ದವು. ಈ ಸಿನಿಮಾಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದ್ದು, ಇಂದಿನ ಯುವ ಪೀಳಿಗೆಯೂ ನೋಡಲೇಬೇಕಾದ ಚಿತ್ರಗಳಾಗಿವೆ.

Read Full Story
07:15 AM (IST) Mar 02

Karnataka Latest News Live:ಖಮೇನಿ ಹತ್ಯೆಗೆ ಶನಿವಾರ ಮುಹೂರ್ತ ಇಟ್ಟಿದ್ದೇಕೆ ?

ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕನನ್ನು ಕುಳಿತ ಸ್ಥಳದಲ್ಲೇ ಹತ್ಯೆಗೈದ ಅಮೆರಿಕ- ಇಸ್ರೇಲ್‌ ಸೇನೆ ಇದಕ್ಕಾಗಿ ಹಲವು ತಿಂಗಳಿನಿಂದ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಏಕಕಾಲಕ್ಕೆ 30 ಬಾಂಬ್‌ ಬಳಸಿ ಹತ್ತಾರು ಜನರನ್ನು ಒಂದೇ ಏಟಿಗೆ ಮುಗಿಸಲಾಯಿತು

Read Full Story
07:04 AM (IST) Mar 02

Karnataka Latest News Live:ಇರಾನ್‌ ಮೇಲೇಕೆ ಎಲ್ಲರ ಕಣ್ಣು? ಇರಾನ್‌ ವಶ ಅಮೆರಿಕದ ಪಾಲಿಗೂ ಕಷ್ಟ ಕಷ್ಟ

ಇರಾನ್‌ ಇರುವುದು ಏಷ್ಯಾ, ಯುರೋಪ್‌ ಮತ್ತು ಮಧ್ಯಪ್ರಾಚ್ಯದ ನಡುವಲ್ಲಿ. ಆದ್ದರಿಂದ, ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿದರೆ, ಸಹಜವಾಗಿ ಜಾಗತಿಕ ವ್ಯಾಪಾರ ಮಾರ್ಗದ ನಿಯಂತ್ರಣ ಹಾಗೂ ವ್ಯೂಹಾತ್ಮಕ ಲಾಭಗಳನ್ನು ಪಡೆಯಬಹುದು.

Read Full Story
06:53 AM (IST) Mar 02

Karnataka Latest News Live:ಬಾಗಲಕೋಟೆ - ಹೋಳಿಯಾಟಕ್ಕೆ ಬರಲಿದ್ದಾರೆ ರಷ್ಯನ್ ಬೆಡಗಿ ಮೀನಾ! ಭಾರತದ ಆರಿಯಾ, ಅಕ್ಷಯ್

ಎಸ್‌ಆರ್‌ಎ ಮೈದಾನದಲ್ಲಿ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ಮಹಿಳೆಯರಿಗಾಗಿ 'ರಂಗ ಸಂಭ್ರಮ' ಹೋಳಿಯಾಚರಣೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಷ್ಯಾದ ಖ್ಯಾತ ಡಿಜೆ ಮೀನಾ ಹಾಗೂ ಭಾರತದ ಇತರೆ ಕಲಾವಿದರು ಆಗಮಿಸಲಿದ್ದು, ಮಹಿಳೆಯರಿಗೆ ಪ್ರತ್ಯೇಕ ವೇದಿಕೆಯಲ್ಲಿ ಆಚರಣೆ ನಡೆಯಲಿದೆ.

Read Full Story
06:42 AM (IST) Mar 02

Karnataka Latest News Live:ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ - ಎಂ.ಬಿ.ಪಾಟೀಲ್‌

ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಬಡವರ ಶ್ರೇಯೋಭಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಗಳಾಗಿದ್ದು, ಶ್ರೀಮಂತರು ಇವುಗಳ ಪ್ರಯೋಜನ ಪಡೆಯುವುದನ್ನು ಸ್ವಯಂಪ್ರೇರಿತವಾಗಿ ಬಿಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಕರೆ ನೀಡಿದ್ದಾರೆ.

Read Full Story