Asianet Suvarna News Asianet Suvarna News

ಕೊರೋನಾ ಲಸಿಕೆ ಹಾಕಿಸಿಕೊಂಡವರು ಮದ್ಯಪಾನ ಮಾಡಬಹುದಾ?

ಆಹಾರ ಪತ್ಯದ ಬಗ್ಗೆ ತಿಳಿಸಿಲ್ಲ| ಗರ್ಭಿ​ಣಿ​ಯರು ಮತ್ತು ಬಾಣಂತಿ​ಯ​ರಿಗೆ ಮಾತ್ರ ಲಸಿಕೆ ತೆಗೆ​ದು​ಕೊ​ಳ್ಳಬಾರದು| ಮೊದಲ ಡೋಸ್‌ ಕೋವಿಡ್‌ ಲಸಿಕೆ ಹಾಕಿ​ಸಿ​ಕೊಂಡ​ವರು 28 ದಿನ​ಗಳ ನಂತರ ಕೋವಿಡ್‌ ಲಸಿಕೆ ಹಾಕಿ​ಸಿ​ಕೊ​ಳ್ಳ​ಬೇಕು. ಇಲ್ಲ​ವಾ​ದರೆ ಲಸಿಕೆ ಪರಿ​ಣಾಮಕಾರಿ ಆಗು​ವು​ದಿಲ್ಲ: ಮಂಜುನಾಥ ಪ್ರಸಾದ್‌| 

BBMP Commissioner N Manjunath Prasad Talks Over Corona Vaccine grg
Author
Bengaluru, First Published Feb 10, 2021, 8:58 AM IST

ಬೆಂಗಳೂರು(ಫೆ.10): ಕೋವಿಡ್‌ ಲಸಿಕೆ ಹಾಕಿಸಿಕೊಂಡವರು ಮದ್ಯಪಾನ ಮಾಡಬಾರದೆಂದು ಲಸಿಕೆ ಮಾರ್ಗಸೂಚಿಯಲ್ಲಿ ತಿಳಿಸಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇ​ರಿ​ಯ ಡಾ.ರಾಜ್‌​ಕು​ಮಾರ್‌ ಗಾಜಿನ ಮನೆ ಸಭಾಂಗಣದಲ್ಲಿ ಮಂಗ​ಳ​ವಾರ ಪಾಲಿಕೆಯ ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರೊಂದಿಗೆ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವ ಮೂಲಕ ‘ಎರಡನೇ ಹಂತದ’ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಕೋವಿಡ್‌ ಲಸಿಕೆ ಹಾಕಿ​ಸಿ​ಕೊಂಡ ಮೇಲೆ ಮದ್ಯ​ಪಾನ ಮಾಡ​ಬಾ​ರದು ಹಾಗೂ ಲಸಿಕೆ ಹಾಕಿಸಿಕೊಂಡ 28 ದಿನ ಆಹಾ​ರದ ಪದ್ಧ​ತಿ​ಯಲ್ಲಿ ಬದ​ಲಾ​ವಣೆ ಮಾಡಿ​ಕೊ​ಳ್ಳ​ಬೇಕು ಎನ್ನುವ ಬಗ್ಗೆ ಕೋವಿಡ್‌ ಲಸಿಕಾ ಮಾರ್ಗ​ಸೂ​ಚಿ​ಯಲ್ಲಿ ಉಲ್ಲೇಖಿಸಿಲ್ಲ. ಗರ್ಭಿ​ಣಿ​ಯರು ಮತ್ತು ಬಾಣಂತಿ​ಯ​ರಿಗೆ ಮಾತ್ರ ಲಸಿಕೆ ತೆಗೆ​ದು​ಕೊ​ಳ್ಳಬಾರದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಮೊದಲ ಡೋಸ್‌ ಕೋವಿಡ್‌ ಲಸಿಕೆ ಹಾಕಿ​ಸಿ​ಕೊಂಡ​ವರು 28 ದಿನ​ಗಳ ನಂತರ ಕೋವಿಡ್‌ ಲಸಿಕೆ ಹಾಕಿ​ಸಿ​ಕೊ​ಳ್ಳ​ಬೇಕು. ಇಲ್ಲ​ವಾ​ದರೆ ಲಸಿಕೆ ಪರಿ​ಣಾಮಕಾರಿ ಆಗು​ವು​ದಿಲ್ಲ ಎಂದರು.

ಲಸಿಕೆ ಹಾಕಿ​ಸಿ​ಕೊಂಡವರಲ್ಲಿ ಯಾರಿಗೂ ಗಂಭೀ​ರ ಸ್ವರೂ​ಪದ ಸಮ​ಸ್ಯೆ​ಗ​ಳು ಕಾಣಿ​ಸಿ​ಕೊಂಡಿಲ್ಲ. ಈ​ವ​ರೆಗೆ ನಗರದಲ್ಲಿ 80 ಸಾವಿರ ಜನ ಲಸಿಕೆ ಹಾಕಿ​ಸಿ​ಕೊಂಡಿದ್ದಾರೆ ಎಂದು ಸ್ಪಷ್ಟ​ಪ​ಡಿ​ಸಿ​ದರು. ಎರಡನೇ ಹಂತದಲ್ಲಿ ಬಿಬಿಎಂಪಿ, ಪೊಲೀಸ್‌ ಇಲಾ​ಖೆ, ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ. ಬಿಬಿಎಂಪಿಯ 33 ಸಾವಿರ ಅಧಿ​ಕಾ​ರಿ​ಗಳು ಹಾಗೂ ಸಿಬ್ಬಂದಿ, ಕಂದಾಯ ಹಾಗೂ ಪೊಲೀಸ್‌ ಇಲಾಖೆಯ 27 ಸಾವಿರ ಜನ ಸೇರಿ​ದಂತೆ ಒಟ್ಟು 60 ಸಾವಿರ ಮುಂಚೂಣಿ ಯೋಧ​ರಿಗೆ ಒಂದು ವಾರದಲ್ಲಿ ಕೋವಿಡ್‌ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿ​ದ​ರು. ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದ ಒಳ​ಗಿದ್ದು, ಆರೋಗ್ಯ ಸಮ​ಸ್ಯೆ ಎದು​ರಿ​ಸು​ತ್ತಿ​ರು​ವ​ವ​ರ ಸರ್ವೇ ಕಾರ್ಯ​ವ​ನ್ನು ಮುಂದಿನ ವಾರದಿಂದ ಪ್ರಾರಂಭಿಸಲಾಗುವುದು ಎಂದರು.

ಕೊರೋನಾ ಲಸಿಕೆ ಪಡೆದುಕೊಂಡ ರೋಹಿಣಿ ಸಿಂಧೂರಿ 'ಅಡ್ಡ ಪರಿಣಾಮ ಇಲ್ಲ'

80000 ಆರೋಗ್ಯ ಕಾರ್ಯ​ಕ​ರ್ತ​ರಿಗೆ ಲಸಿಕೆ

ಮೊದಲ ಹಂತ​ದಲ್ಲಿ 1.83 ಲಕ್ಷ ಆರೋಗ್ಯ ಕಾರ್ಯಕರ್ತರು ಕೋವಿಡ್‌ ಲಸಿಕೆಗೆ ಹೆಸರು ದಾಖ​ಲಿ​ಸಿ​ದ್ದಾರೆ. ಈ ಪೈಕಿ 80 ಸಾವಿರ ಕೋವಿಡ್‌ ಲಸಿಕೆ ಹಾಕಿ​ಸಿ​ಕೊಂಡಿ​ದ್ದಾರೆ. ಲಸಿಕೆ ಹಾಕಿ​ಸಿ​ಕೊ​ಳ್ಳದೆ ಇರು​ವ​ವ​ರಿಗೆ ಮತ್ತೊಂದು ಸುತ್ತಿನ ಅವ​ಕಾಶ ನೀಡ​ಲಾ​ಗು​ತ್ತಿದೆ. ಕೋವಿಡ್‌ ಲಸಿಕೆ ಪರಿ​ಣಾಮಕಾರಿ​ಯಾಗ ಬೇ​ಕಾ​ದರೆ, ನಗ​ರ​ದ​ ಶೇ.70 ರಷ್ಟು ಜನ ಕೋವಿಡ್‌ ಲಸಿಕೆ ಹಾಕಿ​ಸಿ​ಕೊ​ಳ್ಳ​ಬೇಕು. ಇದ​ರಿಂದ ಸಾರ್ವ​ಜ​ನಿ​ಕ​ರಲ್ಲಿ ರೋಗ ನಿರೋಧಕ ಶಕ್ತಿ ಸೃಷ್ಟಿ​ಯಾ​ಗು​ತ್ತದೆ. ಇಲ್ಲ​ವಾ​ದರೆ ಕೋವಿಡ್‌ ಸೋಂಕು ಹಬ್ಬು​ವು​ದನ್ನು ತಡೆ​ಯು​ವುದು ಕಷ್ಟ​ವಾ​ಗ​ಲಿದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಲಸಿಕೆ ಪಡೆಯಲು ನಿರಾಸಕ್ತಿ

ಮಂಗಳವಾರ ಬಿಬಿಎಂಪಿ ಆಡ​ಳಿ​ತಾ​ಧಿ​ಕಾರಿ, ಆಯು​ಕ್ತರು ಹಾಗೂ ವಿಶೇಷ ಆಯು​ಕ್ತರು ಸೇರಿ​ದಂತೆ ಹಲವರು ಕೋವಿಡ್‌ ಲಸಿ​ಕೆ ಹಾಕಿ​ಸಿ​ಕೊಂಡ​ರೂ ಸಹ ಬಿಬಿಎಂಪಿಯ ಇತರೆ ಅಧಿ​ಕಾ​ರಿ​ಗಳು ಹಾಗೂ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಾರದಿರುವುದು ಕಂಡು ಬಂದಿತು.
 

Follow Us:
Download App:
  • android
  • ios