Asianet Suvarna News Asianet Suvarna News

ವಿಜಯಪುರದಲ್ಲಿ ಮತ್ತೆ ಭೂ ಕಂಪನ, ಮನೆ ಬಿರುಕು, ಜನರ ಆತಂಕ

  • ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶನಿವಾರ ರಾತ್ರಿ ರಿಕ್ಟರ್‌ ಮಾಪಕದಲ್ಲಿ 3.9ರಷ್ಟುತೀವ್ರತೆಯ ಭೂಕಂಪ
  • ಮಹಾರಾಷ್ಟ್ರದಲ್ಲಿ ಭೂಕಂಪ ಸಂಭವಿಸಿದ್ದು, ಇದರ ಅನುಭವ ನೆರೆಯ ವಿಜಯಪುರ ಜಿಲ್ಲೆಯಲ್ಲೂ ಆಗಿದೆ. 
Again Earthquake in Many parts of  Vijayapura  District snr
Author
Bengaluru, First Published Oct 6, 2021, 7:42 AM IST

ವಿಜಯಪುರ (ಅ.06):  ಮಹಾರಾಷ್ಟ್ರದ (Maharashtra) ಕೊಲ್ಹಾಪುರದಲ್ಲಿ ಶನಿವಾರ ರಾತ್ರಿ ರಿಕ್ಟರ್‌ ಮಾಪಕದಲ್ಲಿ 3.9ರಷ್ಟುತೀವ್ರತೆಯ ಭೂಕಂಪ (Earth Quake)  ಸಂಭವಿಸಿದ್ದು, ಇದರ ಅನುಭವ ನೆರೆಯ ವಿಜಯಪುರ  (Vijayapura) ಜಿಲ್ಲೆಯಲ್ಲೂ ಆಗಿದೆ. 

ಜಿಲ್ಲೆಯ ಬಹುತೇಕ ಕಡೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನ ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಮಧ್ಯರಾತ್ರಿ 11.50 ರಿಂದ 11.55 ರ ನಡುವೆ ಎರಡು ಬಾರಿ ಭೂಮಿ ಕಂಪಿಸಿದ್ದು, ಅದರ ಜತೆಗೆ ಶಬ್ದವೂ ಕೇಳಿಬಂದಿದೆ. 

ವಿಜಯಪುರದಲ್ಲಿ ಮತ್ತೆ ಭೂಕಂಪ​ನ: ಜನರಲ್ಲಿ ಹೆಚ್ಚಿದ ಆತಂಕ

ಇದರಿಂದ ಅನೇಕ ಕಡೆ ಜನ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಭೂಮಿಯಲ್ಲಿ ಆದ ಕಂಪನದಿಂದಾಗಿ ವಿಜಯಪುರ ನಗರದ ಅನೇಕ ಕಚ್ಚಾ ಮನೆಗಳು ಬಿರುಕು ಬಿಟ್ಟಿವೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಿಕೋಟಾ, ಬಬಲೇಶ್ವರ, ತಾಳಿಕೋಟೆ, ಚಡಚಣ, ಸಿಂದಗಿ, ಇಂಡಿ ಸೇರಿದಂತೆ ಎಲ್ಲ ತಾಲೂಕಿನ ವಿವಿ​ಧೆ​ಡೆ ಜನತೆಗೆ ಭೂಕಂಪನದ (Earthquake) ಅನುಭವವಾಗಿದೆ. 

ಜೋರಾಗಿ ಮಳೆ (Rain) ಸುರಿಯುತ್ತಿರುವಂತೆಯೇ ಭೂಮಿ ಕಂಪಿಸಿದ್ದು, ಇದರಿಂದ ಜನ ತೀವ್ರ ಗಾಬರಿಗೊಂಡಿದ್ದರು. ಕೆಲವೆಡೆ ದೇವಸ್ಥಾನ ಹಾಗೂ ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಮನೆಬಿಟ್ಟು ಹೊರ ಬರುವಂತೆ ಸೂಚನೆ ನೀಡಲಾಯಿತು. ಜಿಲ್ಲೆಯ ಆಲಮಟ್ಟಿಯಲ್ಲಿರುವ ಭೂಕಂಪನ ಮಾಪಕ ಕೇಂದ್ರದಲ್ಲಿ 3.9 ರಷ್ಟುತೀವ್ರತೆ ಭೂಕಂಪ​ನ ದಾಖಲಾಗಿದೆ.

2 ದಿನದಲ್ಲಿ ಮೂರು ಬಾರಿ ಕಂಪನ

 

 ಜಿಲ್ಲೆಯಲ್ಲಿ ಕಳೆದ ಎರಡು ದಿನದಲ್ಲಿ ಮೂರು ಬಾರಿ ಭೂಕಂಪನವಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿದೆ. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 8.31 ಗಂಟೆ​ಗೆ ಮತ್ತೆ ಭೂಕಂಪನವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 2.0 ರಷ್ಟು ತೀವ್ರತೆ ದಾಖಲಾಗಿದೆ. 

ಅಲ್ಲದೆ ಅ.1 ರಂದು ಮಧ್ಯಾಹ್ನ 1.47ಕ್ಕೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸೂತಿ ಗ್ರಾಪಂ ವ್ಯಾಪ್ತಿಯಲ್ಲಿ ರಿಕ್ಟರ್‌ ಮಾಪಕದಲ್ಲಿ 2.5 ರಷ್ಟು ತೀವ್ರತೆ ಭೂಕಂಪನವಾಗಿರುವ ಕುರಿತು ದಾಖಲಾಗಿದೆ. ಅ.1 ರಂದೇ ಸಂಜೆ 4.10 ಗಂಟೆ​ಗೆ ವಿಜಯಪುರ(Vijayapura) ನಗರದ ನೈಋುತ್ಯ ಭಾಗದಲ್ಲಿ ರಿಕ್ಟರ್‌ ಮಾಪಕದಲ್ಲಿ 2.2 ರಷ್ಟುತೀವ್ರತೆ ಭೂಕಂಪನವಾಗಿರುವ ಬಗ್ಗೆ ಜಿಲ್ಲೆಯ ಆಲಮಟ್ಟಿ(Almatti) ಮತ್ತು ಕಲಬುರಗಿ(Kalaburagi) ಭೂಕಂಪಕ ಮಾಪಕ ಕೇಂದ್ರಗಳಲ್ಲಿ ದಾಖಲಾಗಿದೆ. ಈ ಮೂರು ಭೂಕಂಪಗಳ ತೀವ್ರತೆಯು ತುಂಬಾ ಕಡಿಮೆಯಾಗಿದ್ದು, ಇಂತಹ ಲಘು ಭೂಕಂಪದಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ವಿಜಯಪುರ : ಒಂದೇ ವಾರದಲ್ಲಿ 2ನೇ ಸಲ ಭೂಕಂಪನ

ಸಿಂದಗಿಯಲ್ಲೂ ಭೂಕಂಪ

ಕೆಲವು ದಿನಗಳ ಹಿಂದಷ್ಟೇ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ಹೀಗಾಗಿ ಜನರು ರಾತ್ರೋರಾತ್ರಿ ಮನೆಗಳಿಂದ ಹೊರಗಡೆ ಬಂದು ಆತಂಕದಿಂದ ಕಾಲ ಕಳೆದಿದ್ದರು.  ಬಂದಾಳ ರಸ್ತೆ, ಗೋಲಿಬಾರ ಮಡ್ಡಿ, ಜ್ಯೋತಿ ನಗರ, ಶಾಂತವೀರ ನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕಂಪಿಸಿದೆ. ಪ್ರಥಮವಾಗಿ 4.30ಕ್ಕೆ ಸ್ವಲ್ಪ ಪ್ರಮಾಣದಲ್ಲಿ ಭೂಮಿ ಅಲುಗಾಡಿತು. ನಂತರ 4.55ಕ್ಕೆ ಇನ್ನೊಂದು ಬಾರಿ ಕಂಪನವಾಗಿ, ಮೂರನೇ ಬಾರಿ 5.10ಕ್ಕೆ ಮತ್ತು 5.15ಕ್ಕೆ ಹಾಗೂ 5.25ಕ್ಕೆ ಭೂಮಿ ಕಂಪಿಸಿತ್ತು(Earthquake) ಎಂದು ಜನರು ಹೇಳಿದ್ದಾರೆ

Follow Us:
Download App:
  • android
  • ios