Asianet Suvarna News Asianet Suvarna News

Ramanagara: ಶೇ.68ರಷ್ಟು ಇ-ಖಾತೆ ಪೂರ್ಣ: ಶಾಸಕಿ ಅನಿತಾ ಕುಮಾರಸ್ವಾಮಿ

ಕ್ಷೇತ್ರದ ಜನರ ಸಮ​ಸ್ಯೆ​ಗ​ಳನ್ನು ಬಗೆ​ಹ​ರಿ​ಸಲು ನಾನು ಪ್ರಾಮಾ​ಣಿ​ಕ​ವಾಗಿ ಪ್ರಯತ್ನ ಮಾಡು​ತ್ತಿ​ದ್ದೇನೆ. ಶಾಸ​ಕಿ​ಯಾದ ನಂತರ ಸಾಗು​ವಳಿ ಚೀಟಿ, ಹಕ್ಕು ಪತ್ರ ಕೊಡಿ​ಸಿ​ದ್ದೇನೆ. ಬೇರೆ ತಾಲೂ​ಕು​ಗ​ಳಿಗೆ ಹೋಲಿಕೆ ಮಾಡಿ​ದರೆ ಅತಿ ಹೆಚ್ಚು ರಾಮ​ನ​ಗರ ತಾಲೂ​ಕಿ​ನಲ್ಲಿ ಶೇಕಡ 68ರಷ್ಟುಇ-ಖಾತೆ ಮಾಡಿ​ಕೊ​ಡ​ಲಾ​ಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. 

68 percent E Account is complete Says MLA Anitha Kumaraswamy At Ramanagara gvd
Author
First Published Nov 30, 2022, 9:20 AM IST

ರಾಮನಗರ (ನ.30): ಕ್ಷೇತ್ರದ ಜನರ ಸಮ​ಸ್ಯೆ​ಗ​ಳನ್ನು ಬಗೆ​ಹ​ರಿ​ಸಲು ನಾನು ಪ್ರಾಮಾ​ಣಿ​ಕ​ವಾಗಿ ಪ್ರಯತ್ನ ಮಾಡು​ತ್ತಿ​ದ್ದೇನೆ. ಶಾಸ​ಕಿ​ಯಾದ ನಂತರ ಸಾಗು​ವಳಿ ಚೀಟಿ, ಹಕ್ಕು ಪತ್ರ ಕೊಡಿ​ಸಿ​ದ್ದೇನೆ. ಬೇರೆ ತಾಲೂ​ಕು​ಗ​ಳಿಗೆ ಹೋಲಿಕೆ ಮಾಡಿ​ದರೆ ಅತಿ ಹೆಚ್ಚು ರಾಮ​ನ​ಗರ ತಾಲೂ​ಕಿ​ನಲ್ಲಿ ಶೇಕಡ 68ರಷ್ಟುಇ-ಖಾತೆ ಮಾಡಿ​ಕೊ​ಡ​ಲಾ​ಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ತಾಲೂ​ಕಿನ ಕೈಲಾಂಚ ಗ್ರಾಮ​ದಲ್ಲಿ ಬಿಜಿ​ಎಸ್‌ ಗ್ಲೆನಿ​ಗಲ್ಸ್‌ ಗ್ಲೋಬಲ್‌ ಆಸ್ಪತ್ರೆ ವತಿ​ಯಿಂದ ಉಚಿ​ತ ಆರೋಗ್ಯ ತಪಾ​ಸಣಾ ಶಿಬಿರ ಹಾಗೂ ತಾಲೂಕು ಆಡ​ಳಿತ ವತಿ​ಯಿಂದ ಪಿಂಚಣಿ ಆದಾ​ಲತ್‌ - ಇ ಖಾತಾ ಆಂದೋ​ಲ​ನಕ್ಕೆ ಚಾಲನೆ ನೀಡಿ ಮಾತ​ನಾ​ಡಿ​ದರು.

ತಾಲೂ​ಕಿ​ನಲ್ಲಿ ಕಂದಾಯ ಇಲಾಖೆ ಅಧಿ​ಕಾ​ರಿ​ಗಳು ಉತ್ತ​ಮ​ವಾಗಿ ಕೆಲಸ ಮಾಡು​ತ್ತಿ​ದ್ದು, ಪಿಂಚಣಿ, ಹಕ್ಕು ಪತ್ರ ಸೇರಿ​ದಂತೆ ರೈತರ ಯಾವುದೇ ಸಮಸ್ಯೆ ಇದ್ದರೂ ಬಗೆ​ಹ​ರಿಸುತ್ತಿ​ದ್ದಾರೆಂದು ತಹ​ಸೀ​ಲ್ದಾರ್‌ ವಿಜಯ್‌ ಕುಮಾರ್‌ ಕಾರ್ಯ​ವೈ​ಖರಿಯನ್ನು ಶ್ಲಾಘಿಸಿ​ದರು. ನಾನು ಶಾಸ​ಕಿ​ಯಾದ ನಂತರ ಕ್ಷೇತ್ರ​ದಲ್ಲಿ ರಸ್ತೆ, ಕುಡಿ​ಯುವ ನೀರು ಸೇರಿ​ದಂತೆ ಮೂಲ ಸೌಲಭ್ಯ ಕಲ್ಪಿ​ಸುವ ಕೆಲಸ ಮಾಡಿ​ದ್ದೇನೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ​ ಸರ್ಕಾರಿ ಶಾಲೆ​ಗಳ ಕಟ್ಟಡ ದುರಸ್ತಿ, ಹೆಚ್ಚು​ವರಿ ಕೊಠಡಿ ನಿರ್ಮಾ​ಣಕ್ಕೆ ಒತ್ತು ನೀಡಿದೆ. ಸುಮಾರು 40 ಸಮು​ದಾಯ ಭವನ ನಿರ್ಮಾಣ ಮಾಡ​ಲಾ​ಗಿ​ದೆ. ದೇವ​ಸ್ಥಾ​ನ​ಗಳ ನಿರ್ಮಾ​ಣ​ಕ್ಕಾಗಿ 4 -5 ಕೋಟಿ ನೀಡಿ​ದ್ದೇನೆ ಎಂದು ಹೇಳಿ​ದ​ರು.

ಅಳಿವಿನಂಚಿನಲ್ಲಿ ಬೊಂಬೆಯಾಟ: ಇತಿ​ಹಾ​ಸದ ಪುಟ ಸೇರುವ ಆತಂಕ

ತಹ​ಸೀ​ಲ್ದಾರ್‌ ಎಂ.ವಿ​ಜ​ಯ​ಕು​ಮಾರ್‌ ಮಾತ​ನಾ​ಡಿ, ಸರ್ಕಾರದ ಯೋಜನೆಯನ್ನು ಪ್ರತೀ ಫಲಾನುಭವಿ ಮನೆಗೆ ತಲುಪಿಸುವ ಕೆಲಸ ತಾಲೂಕು ಆಡಳಿತ ಮಾಡುತ್ತಿದೆ. ವಯಸ್ಸಾಗಿದ್ದರೂ ವಯಸ್ಸಿನ ಜನನ ಪ್ರಮಾಣ ಪತ್ರದ ಕೊರತೆಯಿಂದ ಕೆಲವರಿಗೆ ಮಾಸಾಶನ ಕಡಿಮೆ ಬರುತ್ತಿತ್ತು. ಪಿಂಚಣಿ ಅದಾಲತ್‌ ಮೂಲಕ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ವೈದ್ಯರ ಪ್ರಮಾಣಪತ್ರ ಆಧಾರದ ಮೇಲೆ ಅರ್ಹ ಫಲಾನುಭವಿಗಳಿಗೆ 1200 ಮಾಸಾಶನ ದೊರೆಯುವಂತೆ ಮಾಡಲಾಗುತ್ತಿದೆ ಎಂದು ತಿಳಿ​ಸಿ​ದ​ರು. ತಾಪಂ ಇಒ ಪ್ರದೀಪ್‌, ಗ್ರಾಪಂ ಉಪಾಧ್ಯಕ್ಷ ವೆಂಕಟೇಶ್‌, ಚಂದ್ರಗಿರಿ, ಡಾ.ಮಣಿ, ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜ​ಶೇ​ಖರ್‌, ಮುಖಂಡರಾದ ಪಿ.ಅಶ್ವತ್ಥ, ಆರ್‌. ಪಾಂಡುರಂಗ, ದೊರೆಸ್ವಾಮಿ, ಬಿ.ಉಮೇಶ್‌, ರಾಜಣ್ಣ, ನಾಗರಾಜು ಮತ್ತಿ​ತ​ರರು ಹಾಜ​ರಿ​ದ್ದರು.

ಡಿ.16ರಂದು ಮಾಜಿ ಸಿಎಂ ಕುಮಾ​ರ​ಸ್ವಾಮಿ ಜನ್ಮ​ದಿನ: ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾ​ಮಿ ಜನ್ಮ​ದಿ​ನ​ ಡಿ.16ರಂದು ರಾಮ​ನ​ಗ​ರ​ದಲ್ಲಿ ಶ್ರೀ ಶ್ರೀನಿ​ವಾಸ ಕಲ್ಯಾಣ ಧಾರ್ಮಿಕ ಕಾರ್ಯ​ಕ್ರ​ಮದೊಂದಿಗೆ ಅದ್ಧೂ​ರಿ​ಯಾಗಿ ಆಚ​ರಿಸ​ಲಾ​ಗು​ವುದು ಎಂದು ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಹೇಳಿ​ದರು. ಕುಮಾ​ರ​ಸ್ವಾ​ಮಿ ಜನ್ಮ​ದಿ​ನ​ದಂದೆ ಜೆಡಿ​ಎಸ್‌ ಕೈಗೊಂಡಿ​ರುವ ಪಂಚ​ರತ್ನ ರಥ​ಯಾತ್ರೆ ರಾಮ​ನಗರ ಕ್ಷೇತ್ರ ಪ್ರವೇ​ಶಿ​ಸ​ಲಿದೆ. ಅಂದು ಬೆಳ​ಗ್ಗೆ​ಯಿಂದ ಸಂಜೆ​ವ​ರೆಗೆ ರಥ​ಯಾತ್ರೆ ಸಂಚ​ರಿ​ಸಿದ ನಂತರ ಸಂಜೆ ಶ್ರೀ ಶ್ರೀನಿ​ವಾಸ ಕಲ್ಯಾಣದಲ್ಲಿ ಧಾರ್ಮಿಕ ಕಾರ್ಯ​ಗಳು ನೆರ​ವೇ​ರ​ಲಿವೆ. ಸಹ​ಸ್ರಾರು ಜನ​ರಿಗೆ ಭೋಜನ ವ್ಯವ​ಸ್ಥೆ​ ಮಾಡ​ಲಾ​ಗು​ವುದು ಎಂದರು.

ನವ ಕರ್ನಾ​ಟಕ ನಿರ್ಮಾ​ಣ​ಕ್ಕಾಗಿ ಜೆಡಿ​ಎಸ್‌ ನಡೆ​ಸು​ತ್ತಿ​ರುವ ಪಂಚ​ರತ್ನ ರಥ​ಯಾ​ತ್ರೆ ಸಂಚ​ರಿ​ಸಿದ ಕಡೆ​ಗ​ಳಲ್ಲಿ ಅಭೂ​ತ​ಪೂರ್ವ ಸ್ವಾಗತ ದೊರ​ಕು​ತ್ತಿದೆ. ರಥ​ಯಾತ್ರೆ ಯಶ​ಸ್ವಿ​ಯಾಗಿ ಸಾಗು​ತ್ತಿದ್ದು, ಡಿ.16ರಂದು ರಾಮ​ನ​ಗರ ಕ್ಷೇತ್ರ ಪ್ರವೇ​ಶಿ​ಸ​ಲಿದೆ. ಇದ​ಕ್ಕಾಗಿ ಅಗತ್ಯ ಸಿದ್ಧತೆ ಕೈಗೊ​ಳ್ಳ​ಲಾ​ಗು​ತ್ತಿದೆ. ನಿಮ್ಮ ಮನೆ, ಮಗ ಕುಮಾ​ರ​ಸ್ವಾಮಿ ಕರ್ನಾ​ಟ​ಕದ ಸಮಗ್ರ ಅಭಿ​ವೃದ್ಧಿಗೆ ಪರಿ​ಪೂರ್ಣ ಪರಿ​ಹಾರ ನೀಡ​ಬಲ್ಲ ಪಂಚ​ರತ್ನ ಕಾರ್ಯ​ಕ್ರ​ಮ ಮುಂದಿ​ಟ್ಟು​ಕೊಂಡು ಮನೆ ಬಾಗಿ​ಲಿಗೆ ಬರು​ತ್ತಿ​ದ್ದಾರೆ. ರಥ​ಯಾ​ತ್ರೆಗೆ ಸಿಗು​ತ್ತಿ​ರುವ ಅಭೂ​ತ​ಪೂರ್ವ ಸ್ಪಂದನೆ ನೋಡಿ​ದರೆ ಕುಮಾ​ರ​ಸ್ವಾಮಿ ಬಗೆಗೆ ಜನ​ರು ಎಷ್ಟುಒಲವು ಹೊಂದಿ​ದ್ದಾರೆ ಎಂಬುದನ್ನು ತೋರಿ​ಸು​ತ್ತಿದೆ ಎಂದರು.

Ramanagara: ತಾತ್ಕಾ​ಲಿಕ ಸೇತುವೆ ನಿರ್ಮಾ​ಣದಲ್ಲೂ ರಾಜಕೀಯ!

ಪ್ರತಿ ಮನೆ ಹೊಸ​ಲಿಗೂ ಸರ್ಕಾ​ರದ ಸೌಲ​ಭ್ಯ​ಗ​ಳನ್ನು ತಲು​ಪಿ​ಸುವ ಹಾಗೂ ಅಬಿ​ವೃ​ದ್ಧಿ​ಗೊಂಡ ಸಶಕ್ತ, ರೈತ - ಕಾರ್ಮಿ​ಕರ ಜೀವನ ಹಸ​ನಾ​ಗಿ​ಸುವ, ಆರ್ಥಿ​ಕ​ವಾಗಿ ದುರ್ಬ​ಲ​ರಾ​ಗಿ​ರುವ ಪ್ರತಿ ಸಮು​ದಾ​ಯಕ್ಕೆ ಒಳಿ​ತು ಮಾಡು​ವುದು ಕುಮಾ​ರ​ಸ್ವಾ​ಮಿ​ಯ​ವರ ಕನಸು. ಈ ಕನ​ಸನ್ನು ನನಸು ಮಾಡಲು ಪಂಚ​ರತ್ನ ಯೋಜನೆ ರೂಪಿ​ಸ​ಲಾ​ಗಿದೆ. ಇದು ಸಾಕಾರಗೊಳ್ಳಲು ನಿಮ್ಮೆ​ಲ್ಲರ ಆಶೀ​ರ್ವಾದ ಬೇಕಿದೆ ಎಂದು ಹೇಳಿ​ದರು.

Follow Us:
Download App:
  • android
  • ios