ನೈಟ್ರೋಜನ್ ಬಲೂನ್ ಸ್ಫೋಟ: ಸುತ್ತೂರು ಶ್ರೀಗಳು ಅಪಾಯದಿಂದ ಪಾರು
ಭಾರೀ ಅವಘಡದಿಂದ ಪಾರಾದ ಸುತ್ತೂರು ಶ್ರೀಗಳು! ಸುತ್ತೂರು ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳ ನೈಟ್ರೋಜನ್ ಬಲೂನ್ ಸ್ಫೋಟಿ! ಭಾರೀ ಅವಘಡ ನೋಡ ನೋಡುತ್ತಿದ್ದಂತೆ ಹೊತ್ತಿಕೊಂಡ ಬಲೂನ್ಗೆ ಬೆಂಕಿ
ಮೈಸೂರು, (ಫೆ.05): ಮೈಸೂರಿನ ಸುತ್ತೂರು ಜಾತ್ರೆಯಲ್ಲಿ ನೈಟ್ರೋಜನ್ ಬಲೂನ್ ಸ್ಫೋಟವಾಗಿದೆ.
"
ಸುತ್ತೂರು ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಈ ಅವಘಡ ಸಂಭವಿಸಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಸುತ್ತೂರು ಶ್ರೀಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಲೂನ್ ಬಿಡುವ ಸಂದರ್ಭದಲ್ಲಿ ನೋಡು ನೋಡುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ.