KSRTC ಬಸ್ ಪ್ರಯಾಣಿಕರೇ ಇಲ್ಲೊಮ್ಮೆ ಗಮನಿಸಿ. ಬಸ್‌ಗಳ ಸಂಚಾರವು ತಾತ್ಕಾಲಿಕವಾಗಿ ರದ್ದಾಗಿದೆ. 270 ಬಸ್ಸುಗಳು ಸಂಚಾರ ನಿಲ್ಲಿಸಿವೆ... 

ವಾರ್ತೆ ಹುಬ್ಬಳ್ಳಿ/ಕಲಬುರಗಿ (ಮಾ.23): ಕೋವಿಡ್‌ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದ ಸುಮಾರು 270 ಬಸ್‌ಗಳ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. 

Add Asianetnews Kannada as a Preferred SourcegooglePreferred

ಏ.7ರಿಂದ ರಸ್ತೆಗಿಳಿಯಲ್ಲ KSRTC ಬಸ್‌ಗಳು : ಪ್ರಯಾಣಿಕರೆ ಎಚ್ಚರ ...

ರಾಜ್ಯ ಸರ್ಕಾರದ ಸೂಚನೆಯಂತೆ ಎರಡೂ ರಾಜ್ಯಗಳಿಗೆ ಸಂಚರಿಸುವ ಪ್ರಯಾಣಿಕರ ನಿಯಂತ್ರಣ ಅಗತ್ಯವಾಗಿದೆ. ಹೀಗಾಗಿ, ಬೆಳಗಾವಿ, ಚಿಕ್ಕೋಡಿ, ಗದಗ, ವಿಜಯಪುರ, ಹಾವೇರಿ, ಬಾಗಲಕೋಟೆ, ಧಾರವಾಡ, ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ವ್ಯಾಪ್ತಿಯ ಜಿಲ್ಲೆಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್‌ಗಳ ಸಂಖ್ಯೆಯಲ್ಲಿ ಈ ಕಡಿತ ಮಾಡಲಾಗಿದೆ.

 ಹೋಳಿ ಹಬ್ಬದವರೆಗೆ ಬಸ್‌ಗಳ ಸಂಚಾರ ಕಡಿತ ಮಾಡಲಾಗಿದೆ.