Asianet Suvarna News Asianet Suvarna News

ಕೆಆರ್‌ಎಸ್‌ ಭರ್ತಿಗೆ ಎರಡು ಅಡಿ ಬಾಕಿ

  • ಹನ್ನೊಂದು ವರ್ಷದ ಬಳಿಕ ಅಕ್ಟೋಬರ್‌ ತಿಂಗಳಲ್ಲಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗುತ್ತಿದೆ.
  •  ಸಾಮಾನ್ಯವಾಗಿ ಜುಲೈ, ಆಗಸ್ಟ್‌ ತಿಂಗಳಲ್ಲೇ ಪೂರ್ಣ ಮಟ್ಟತಲುಪುತ್ತಿದ್ದ ಕೆಆರ್‌ಎಸ್‌
122 feet water level in krs Dam snr
Author
Bengaluru, First Published Oct 26, 2021, 6:14 AM IST

 ಮಂಡ್ಯ (26):  ಹನ್ನೊಂದು ವರ್ಷದ ಬಳಿಕ ಅಕ್ಟೋಬರ್‌ ತಿಂಗಳಲ್ಲಿ ಕೃಷ್ಣರಾಜಸಾಗರ (KRS) ಜಲಾಶಯ ಭರ್ತಿಯಾಗುತ್ತಿದೆ. ಸಾಮಾನ್ಯವಾಗಿ ಜುಲೈ, ಆಗಸ್ಟ್‌ (august) ತಿಂಗಳಲ್ಲೇ ಪೂರ್ಣ ಮಟ್ಟತಲುಪುತ್ತಿದ್ದ ಕೆಆರ್‌ಎಸ್‌, ಮಳೆಯ ಕೊರತೆ ಮತ್ತು ತಮಿಳುನಾಡಿಗೆ (Tamilnadu) ನೀರು ಹರಿಸಿದ ಪರಿಣಾಮ ಈ ಬಾರಿ ಮೂರು ತಿಂಗಳು ವಿಳಂಬವಾಗಿ ಭರ್ತಿಯಾಗುತ್ತಿದೆ. ಅಣೆಕಟ್ಟೆಪೂರ್ಣ ಮಟ್ಟತಲುಪಲು ಇನ್ನು 2 ಅಡಿ ಮಾತ್ರ ಬಾಕಿ ಉಳಿದಿದೆ.

ಜಲಾಶಯದ ಗರಿಷ್ಠ ಮಟ್ಟ124.80 ಅಡಿ ಇದ್ದು, ಪ್ರಸ್ತುತ ಅಣೆಕಟ್ಟೆಯ ನೀರಿನ ಮಟ್ಟ122.40 ಅಡಿ ತಲುಪಿದೆ. ಜಲಾಶಯಕ್ಕೆ 16,385 ಕ್ಯುಸೆಕ್‌  ಒಳಹರಿವು ದಾಖಲಾಗಿದ್ದು, ಅಣೆಕಟ್ಟೆಯಿಂದ 3888 ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಸದ್ಯ ಅಣೆಕಟ್ಟೆಯಲ್ಲಿ 46.166 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 124.80 ಅಡಿ ನೀರು ದಾಖಲಾಗಿತ್ತು.

ಕೆಆರ್‌ಎಸ್‌ ಸುತ್ತ ಗಣಿಗಾರಿಕೆಗೆ ಹೈಕೋರ್ಟ್‌ ಹಸಿರು ನಿಶಾನೆ

ಸಾಮಾನ್ಯವಾಗಿ ಜುಲೈನಿಂದ ಆಗಸ್ಟ್‌ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗುತ್ತದೆ. ಒಮ್ಮೊಮ್ಮೆ ಸೆಪ್ಟೆಂಬರ್‌ನಲ್ಲಿ, ಅಪರೂಪವೆಂಬಂತೆ ಅಕ್ಟೋಬರ್‌ನಲ್ಲಿ ಪೂರ್ಣ ಮಟ್ಟತಲುಪುತ್ತದೆ. 2010ರ ಅಕ್ಟೋಬರ್‌ 18ರಂದು ಅಣೆಕಟ್ಟು (Dam) ಭರ್ತಿಯಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಕಾವೇರಿ (Cauvery) ಮಾತೆಗೆ ಬಾಗಿನ ಸಮರ್ಪಿಸಿದ್ದರು.

ಈ ಬಾರಿ ದಸರಾ (Dasara) ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೊಮ್ಮಾಯಿ ಕೆಆರ್‌ಎಸ್‌ನಲ್ಲಿ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಪೂಜೆ ಮಾಡಿದ್ದರು. ಕಾಕತಾಳೀಯವೆಂಬಂತೆ ನಂತರ ಕಾವೇರಿ ಕಣಿವೆ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿ ಹೆಚ್ಚಿನ ನೀರು ಹರಿದುಬಂತು. ಮುಂದಿನ ಎರಢ್ಮೂರು ದಿನಗಳಲ್ಲಿ ಡ್ಯಾಂ ಭರ್ತಿಯಾಗುವುದರಿಂದ ಬೊಮ್ಮಾಯಿ ಅವರು ಬಾಗಿನ ಸಲ್ಲಿಸುವುದು ನಿಶ್ಚಿತವಾಗಿದೆ.

ಸ್ಫೋಟಕಗಳ ಕಂಟಕ

ಜಿಲ್ಲೆಯ ರೈತ ಕಣ್ಮಣಿ  ಕೃಷ್ಣರಾಜಸಾಗರ ಜಲಾಶಯಕ್ಕೆ ಸ್ಫೋಟಕಗಳ ಕಂಟಕ ತಪ್ಪಿಲ್ಲ. ಪೊಲೀಸರ ವಶದಲ್ಲಿದ್ದ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳ ಅಕ್ರಮವಾಗಿ ಮಾರಾಟವಾಗಿರುವ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕ ಹೆಚ್ಚುವಂತೆ ಮಾಡಿದೆ. 

4000 ಎಲೆಕ್ಟ್ರಿಕ್ ಡಿಟೋನೇಟರ್‌ 580 ನಾನ್ ಎಲೆಕ್ಟ್ರಿಕ್ ಡಿಟೊಲೇಟರ್, 14400ಜಿಲೆಟಿನ್ ಕಡ್ಡಿಗಳನ್ನು ನಾಜೀಮುಲ್ಲಾ ಷರೀಫ್ ಎಂಬಾತ ಅಕ್ರಮವಾಗಿ ಮಾರಾಟ ಮಾಡಿದ್ದಾನೆಂದು ಪೊಲೀಸರು ಅರೋಪಿಸಿದ್ದಾರೆ. ಈ ನಡುವೆ ಭಾರೀ ಪ್ರಮಾಣದ ಸ್ಫೋಟಕಗಳ ಅಕ್ರಮ ಮಾರಾಟದಲ್ಲಿ ಪೊಲೀಸರ ಕೈವಾಡವಿದೆ ಎಂಬ ಅರೋಪಗಳು ಕೇಳಿ ಬರುತ್ತಿವೆ. 

ಕಳಪೆ ಕೆಲಸದಿಂದ ಕೆಆರ್‌ಎಸ್‌ ಅಣೆಕಟ್ಟೆ ಕುಸಿತ

ಏನಾಗಿತ್ತು? ಕಳೆದ ಜನವರಿ 21 ರಂದು ರಾತ್ರಿ 9.45ರ ಸಮಯದಲ್ಲಿ ಪಾಂಡವಪುರ ತಾಲೂಕಿನ ಸುತ್ತಮುತ್ತ ಇರುವ ಕಲ್ಲು ಕೋರೆಗಳಿಗೆ ಮಾರಾಟ ಮಾಡುವ ಸಲುವಾಗಿ ಯಾವುದೇ ಪರವಾನಗಿ ಇಲ್ಲದೆ  ಟಾಟಾ 407 ಗೂಡ್ಸ್ ವಾಹನದಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಇಬ್ಬರು ವ್ಯಕ್ರಿಗಳು ಕೆ.ಆರ್‌ ನಗರದ ಭೇರ್ಯ ಕಡೆಯಿಂದ ಕೆ.ಆರ್‌ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಕಡೆಗೆ ಬರುತ್ತಿದ್ದರು. ಈ ಮಾಹಿತಿ ತಿಳಿದು ಕೆ.ಅರ್‌ ಪೇಟೆ ಗ್ರಾಮಾಂತರ ಪೊಲೀಸ್ ಟಾಣೆಯ ಪಿಎಸ್‌ಐ  ಎಸ್‌ ಸುರೇಶ ಅವರು ಸಿಬ್ಬಂದಿ ಜೊತೆ ಸ್ಥಳಕ್ಕೆ ತೆರಳಿದರು.

 

Follow Us:
Download App:
  • android
  • ios